Home / ಕವನ / ಕವಿತೆ / ಮರೆಯ ಬೇಡ ಮನುಜ

ಮರೆಯ ಬೇಡ ಮನುಜ

ಮರೆಯ ಬೇಡ ಮನುಜ ನೀನು
ಮಾನವೀಯತೆ|
ಮೆರೆಯಬೇಡ ಮನುಜ ನೀನು
ಮದವೇರಿದ ಪ್ರಾಣಿಯಂತೆ|
ಮನುಷ್ಯಗಲ್ಲದೆ ಮಾನವತೆಯಮೌಲ್ಯ
ಪ್ರಾಣಿಗಳಿಗೆ ಶೋಭೆ ತರುವುದೇ||

ಅಧಿಕಾರ ದರ್ಪ ಯಾರ ಬಳಿ
ಶಾಶ್ವತವಾಗಿ ನಿಂತಿದೆ|
ಯಾರಬಳಿ ಲಕ್ಷ್ಮಿ ಸದಾ
ಇರುವಳೆಂದು ಭ್ರಮಿಸುವೆ|
ಯಾರ ಬಳಿ ಯೌವನ
ಸೌಂದರ್ಯ ಸ್ಥಿರವಾಗಿ ನೆಲೆಸಿದೆ|
ಯಾವುದು ಇಲ್ಲಿ ಶಾಶ್ವತವಲ್ಲ
ಎಲ್ಲವೂ ಕಲಾತೀತ, ಎಲ್ಲವೂ ಅಶಾಶ್ವತ||

ಮಾನವತೆಯಿಂದ ನೋಡಲದುವೆ
ಜಗವೇ ಸುಂದರ|
ಮಾನವತೆಯಿಂದ ಬದುಕಲದುವೆ
ಸಮಾಜ ದೇವಮಂದಿರ|
ಮಾನವತೆಯೆಂಬ ವರವ
ಆ ದೇವನಿತ್ತಿಹನು ಮಾನವ|
ಅದನೆ ಮರೆತು ಆಗಬೇಡ
ಮನುಜ ನೀನು ದಾನವ||

ದಯೆಯು ತುಂಬಿ
ದಾನ ಧರ್ಮ ಮೇಳೈಸಲಿ|
ಕರುಣೆಯ ಕಡಲು ಉಕ್ಕಿ
ಶಾಂತಿ ಸಮಾನತೆಯು ಎಲ್ಲೆಡೆ ನೆಲಸಲಿ|
ಸರ್ವೋಜನ ಸುಖಿನೋಭವಂತು ಎಂಬ
ಶಾಂತಿ ಮಂತ್ರ ನಮ್ಮಲಿ ಪ್ರತಿಬಿಂಬಿಸಲಿ||

*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...