ಮರೆಯ ಬೇಡ ಮನುಜ

ಮರೆಯ ಬೇಡ ಮನುಜ ನೀನು
ಮಾನವೀಯತೆ|
ಮೆರೆಯಬೇಡ ಮನುಜ ನೀನು
ಮದವೇರಿದ ಪ್ರಾಣಿಯಂತೆ|
ಮನುಷ್ಯಗಲ್ಲದೆ ಮಾನವತೆಯಮೌಲ್ಯ
ಪ್ರಾಣಿಗಳಿಗೆ ಶೋಭೆ ತರುವುದೇ||

ಅಧಿಕಾರ ದರ್ಪ ಯಾರ ಬಳಿ
ಶಾಶ್ವತವಾಗಿ ನಿಂತಿದೆ|
ಯಾರಬಳಿ ಲಕ್ಷ್ಮಿ ಸದಾ
ಇರುವಳೆಂದು ಭ್ರಮಿಸುವೆ|
ಯಾರ ಬಳಿ ಯೌವನ
ಸೌಂದರ್ಯ ಸ್ಥಿರವಾಗಿ ನೆಲೆಸಿದೆ|
ಯಾವುದು ಇಲ್ಲಿ ಶಾಶ್ವತವಲ್ಲ
ಎಲ್ಲವೂ ಕಲಾತೀತ, ಎಲ್ಲವೂ ಅಶಾಶ್ವತ||

ಮಾನವತೆಯಿಂದ ನೋಡಲದುವೆ
ಜಗವೇ ಸುಂದರ|
ಮಾನವತೆಯಿಂದ ಬದುಕಲದುವೆ
ಸಮಾಜ ದೇವಮಂದಿರ|
ಮಾನವತೆಯೆಂಬ ವರವ
ಆ ದೇವನಿತ್ತಿಹನು ಮಾನವ|
ಅದನೆ ಮರೆತು ಆಗಬೇಡ
ಮನುಜ ನೀನು ದಾನವ||

ದಯೆಯು ತುಂಬಿ
ದಾನ ಧರ್ಮ ಮೇಳೈಸಲಿ|
ಕರುಣೆಯ ಕಡಲು ಉಕ್ಕಿ
ಶಾಂತಿ ಸಮಾನತೆಯು ಎಲ್ಲೆಡೆ ನೆಲಸಲಿ|
ಸರ್ವೋಜನ ಸುಖಿನೋಭವಂತು ಎಂಬ
ಶಾಂತಿ ಮಂತ್ರ ನಮ್ಮಲಿ ಪ್ರತಿಬಿಂಬಿಸಲಿ||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆರೋಗ್ಯ ಕೆಟ್ಟಿದ್ದು ಹೇಗೆ?
Next post ಬದುಕು ಭವ್ಯವಾಗಲಿ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys