Home / ಕವನ / ಕವಿತೆ / ಕಾಲೇಜು ವಿದ್ಯಾರ್ಥಿ

ಕಾಲೇಜು ವಿದ್ಯಾರ್ಥಿ

ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ನಾನು
ಯಾವುದೋ ಒಂದು ತರಗತಿಯಲ್ಲಿ ಓದುತ್ತಿದ್ದೇನೆ.
ಅಲ್ಲ ಅಲ್ಲ
ಯಾವುದೋ ಒಂದು ತರಗತಿಯಲ್ಲಿ ಇದ್ದೇನೆ.
ಅದೂ ಅಲ್ಲ
ಯಾವುದೋ ಒಂದು ತರಗತಿಯಲ್ಲಿ ನನ್ನ ಹೆಸರಿದೆ.

ತರಗತಿಗೆ ಹೋಗಲು ನನಗೆಲ್ಲಿ ಸಮಯ?
ಕಾಲೇಜಿಗೆ ಬಂದರೆ ನೂರಾರು ಕೆಲಸ
ಹತ್ತಾರು ಸಂಘಗಳ ಸದಸ್ಯನಾನು
ನಾಲ್ಕಾರು ಸಂಸ್ಥೆಗಳ ಕಾರ್ಯದರ್ಶಿ ನಾನು
ಮತ್ತೊಂದು ಪಾರ್ಟಿಯ ಅಧ್ಯಕ್ಷನೇ ನಾನು!

ಕಾಲೇಜಿಗೆ ಬಂದೆ, ಪ್ರಿನ್ಸಿಪಾಲರ ಕಂಡೆ,
ನನ್ನೆಲ್ಲ ವಿಷಯಗಳ ಬಗ್ಗೆ ಮಾತನಾಡಿದೆ,
ಉಳಿದೆಲ್ಲ ಶಿಕ್ಷಕರ ಬಳಿ ಹೋಗಿ ಬಂದೆ,
ಎಷ್ಟೆಲ್ಲ ವಿಷಯಗಳ ಚರ್ಚಿಸಿ ಬಂದೆ
ನಾಲ್ಕಾರು ಗೆಳೆಯರೊಡನೆ ಹರಟುತ್ತಾ ನಿಂತೆ.
ಸಂಗೀತ, ನಾಟಕ, ನೃತ್ಯಗಳ ಬಗ್ಗೆ,
ಚುನಾವಣೆ, ಗ್ರಂಥಾಲಯ, ವಾಚನಾಲಯಗಳ ಬಗ್ಗೆ
ಫ್ರ್‍ಈಶಿಪ್ಪು, ಸ್ಕಾಲರ್‌ಶಿಪ್ಪು, ಲೋನುಗಳ ಬಗ್ಗೆ,
ಭಾಷಣ, ಬಹುಮಾನ, ಸನ್ಮಾನಗಳ ಬಗ್ಗೆ,
ಎನ್ನೆಸ್ಸೆಸ್, ಎನ್ಸೀಸಿ, ಸ್ಪೋರ್ಟುಗಳ ಬಗ್ಗೆ
ಕ್ರಿಕೆಟ್ಟು, ಫುಟ್ ಬಾಲು, ಟೆನ್ನಿಸುಗಳ ಬಗ್ಗೆ
ಗ್ರೂಪ್ ಸಾಂಗ್ಸು, ಗ್ರೂಪ್ ಡಾನ್ಸುಗಳ ಬಗ್ಗೆ
ಏನೆಲ್ಲ ಚಿಂತೆಯು ಎನಗೆ
ವರ್ಷವಿಡೀ ಇರುವುದು ಕಾರ್ಯ ನನಗೆ.

ಜುಲೈನಲ್ಲಿ ಕಾಲೇಜಿಗೆ ಸೇರಿದರೆ ಆಯ್ತು
ಆಗಸ್ಟ್‌ನಲ್ಲಿ ಚುನಾವಣೆಗಳು, ನಾಟಕಗಳು,
ಸೆಪ್ಟೆಂಬರ್‌ನಲ್ಲಿ ತಪ್ಪದೆ ವಾರ್ಷಿಕ ಮುಷ್ಕರ
ಅಕ್ಟೋಬರ್‌ವನ್ನೆಲ್ಲ ರಜದಲ್ಲಿ ಕಳೆದು
ನವೆಂಬರ್‌ನಲ್ಲಿ ಅವಸರದ ಪ್ರವಾಸ ಹೋಗಿ ಬಂದು,
ಡಿಸೆಂಬರ್‌ನಲ್ಲಿ, ನವೆಂಬರ್‌ನ ರಾಜ್ಯೋತ್ಸವ ಮಾಡಿ,
ಜನವರಿಯಲ್ಲಿ ಕ್ರೀಡಾಕೂಟ, ವಾರ್ಷಿಕೋತ್ಸವ ಮಾಡಿ
ಫೆಬ್ರವರಿಯಲ್ಲಿ ಸ್ಪೆಷಲ್ ಕ್ಲಾಸುಗಳ ಚಂಡಿ ಕಾಡಿ
ಮಾರ್ಚ್‌ನಲ್ಲಿ! ಓ ಭಯವಾಗುತಿದೆ ಎನಗೆ
ಭೂತ ಬಂತು ನೋಡಿರಲ್ಲಿ. “ಪರೀಕ್ಷೆ”!
*****
೧೨-೦೧-೧೯೭೫

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...