ಕಾಲೇಜು ವಿದ್ಯಾರ್ಥಿ

ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ನಾನು
ಯಾವುದೋ ಒಂದು ತರಗತಿಯಲ್ಲಿ ಓದುತ್ತಿದ್ದೇನೆ.
ಅಲ್ಲ ಅಲ್ಲ
ಯಾವುದೋ ಒಂದು ತರಗತಿಯಲ್ಲಿ ಇದ್ದೇನೆ.
ಅದೂ ಅಲ್ಲ
ಯಾವುದೋ ಒಂದು ತರಗತಿಯಲ್ಲಿ ನನ್ನ ಹೆಸರಿದೆ.

ತರಗತಿಗೆ ಹೋಗಲು ನನಗೆಲ್ಲಿ ಸಮಯ?
ಕಾಲೇಜಿಗೆ ಬಂದರೆ ನೂರಾರು ಕೆಲಸ
ಹತ್ತಾರು ಸಂಘಗಳ ಸದಸ್ಯನಾನು
ನಾಲ್ಕಾರು ಸಂಸ್ಥೆಗಳ ಕಾರ್ಯದರ್ಶಿ ನಾನು
ಮತ್ತೊಂದು ಪಾರ್ಟಿಯ ಅಧ್ಯಕ್ಷನೇ ನಾನು!

ಕಾಲೇಜಿಗೆ ಬಂದೆ, ಪ್ರಿನ್ಸಿಪಾಲರ ಕಂಡೆ,
ನನ್ನೆಲ್ಲ ವಿಷಯಗಳ ಬಗ್ಗೆ ಮಾತನಾಡಿದೆ,
ಉಳಿದೆಲ್ಲ ಶಿಕ್ಷಕರ ಬಳಿ ಹೋಗಿ ಬಂದೆ,
ಎಷ್ಟೆಲ್ಲ ವಿಷಯಗಳ ಚರ್ಚಿಸಿ ಬಂದೆ
ನಾಲ್ಕಾರು ಗೆಳೆಯರೊಡನೆ ಹರಟುತ್ತಾ ನಿಂತೆ.
ಸಂಗೀತ, ನಾಟಕ, ನೃತ್ಯಗಳ ಬಗ್ಗೆ,
ಚುನಾವಣೆ, ಗ್ರಂಥಾಲಯ, ವಾಚನಾಲಯಗಳ ಬಗ್ಗೆ
ಫ್ರ್‍ಈಶಿಪ್ಪು, ಸ್ಕಾಲರ್‌ಶಿಪ್ಪು, ಲೋನುಗಳ ಬಗ್ಗೆ,
ಭಾಷಣ, ಬಹುಮಾನ, ಸನ್ಮಾನಗಳ ಬಗ್ಗೆ,
ಎನ್ನೆಸ್ಸೆಸ್, ಎನ್ಸೀಸಿ, ಸ್ಪೋರ್ಟುಗಳ ಬಗ್ಗೆ
ಕ್ರಿಕೆಟ್ಟು, ಫುಟ್ ಬಾಲು, ಟೆನ್ನಿಸುಗಳ ಬಗ್ಗೆ
ಗ್ರೂಪ್ ಸಾಂಗ್ಸು, ಗ್ರೂಪ್ ಡಾನ್ಸುಗಳ ಬಗ್ಗೆ
ಏನೆಲ್ಲ ಚಿಂತೆಯು ಎನಗೆ
ವರ್ಷವಿಡೀ ಇರುವುದು ಕಾರ್ಯ ನನಗೆ.

ಜುಲೈನಲ್ಲಿ ಕಾಲೇಜಿಗೆ ಸೇರಿದರೆ ಆಯ್ತು
ಆಗಸ್ಟ್‌ನಲ್ಲಿ ಚುನಾವಣೆಗಳು, ನಾಟಕಗಳು,
ಸೆಪ್ಟೆಂಬರ್‌ನಲ್ಲಿ ತಪ್ಪದೆ ವಾರ್ಷಿಕ ಮುಷ್ಕರ
ಅಕ್ಟೋಬರ್‌ವನ್ನೆಲ್ಲ ರಜದಲ್ಲಿ ಕಳೆದು
ನವೆಂಬರ್‌ನಲ್ಲಿ ಅವಸರದ ಪ್ರವಾಸ ಹೋಗಿ ಬಂದು,
ಡಿಸೆಂಬರ್‌ನಲ್ಲಿ, ನವೆಂಬರ್‌ನ ರಾಜ್ಯೋತ್ಸವ ಮಾಡಿ,
ಜನವರಿಯಲ್ಲಿ ಕ್ರೀಡಾಕೂಟ, ವಾರ್ಷಿಕೋತ್ಸವ ಮಾಡಿ
ಫೆಬ್ರವರಿಯಲ್ಲಿ ಸ್ಪೆಷಲ್ ಕ್ಲಾಸುಗಳ ಚಂಡಿ ಕಾಡಿ
ಮಾರ್ಚ್‌ನಲ್ಲಿ! ಓ ಭಯವಾಗುತಿದೆ ಎನಗೆ
ಭೂತ ಬಂತು ನೋಡಿರಲ್ಲಿ. “ಪರೀಕ್ಷೆ”!
*****
೧೨-೦೧-೧೯೭೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಮು ಸೌಹಾರ್ದದ ಸಂಕೇತ ಸ್ವಾಮಿ ವಿವೇಕಾನಂದ
Next post ನನ್ನವಳು

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys