Home / ಕವನ / ಕವಿತೆ / ಕಾಲೇಜು ವಿದ್ಯಾರ್ಥಿ

ಕಾಲೇಜು ವಿದ್ಯಾರ್ಥಿ

ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ನಾನು
ಯಾವುದೋ ಒಂದು ತರಗತಿಯಲ್ಲಿ ಓದುತ್ತಿದ್ದೇನೆ.
ಅಲ್ಲ ಅಲ್ಲ
ಯಾವುದೋ ಒಂದು ತರಗತಿಯಲ್ಲಿ ಇದ್ದೇನೆ.
ಅದೂ ಅಲ್ಲ
ಯಾವುದೋ ಒಂದು ತರಗತಿಯಲ್ಲಿ ನನ್ನ ಹೆಸರಿದೆ.

ತರಗತಿಗೆ ಹೋಗಲು ನನಗೆಲ್ಲಿ ಸಮಯ?
ಕಾಲೇಜಿಗೆ ಬಂದರೆ ನೂರಾರು ಕೆಲಸ
ಹತ್ತಾರು ಸಂಘಗಳ ಸದಸ್ಯನಾನು
ನಾಲ್ಕಾರು ಸಂಸ್ಥೆಗಳ ಕಾರ್ಯದರ್ಶಿ ನಾನು
ಮತ್ತೊಂದು ಪಾರ್ಟಿಯ ಅಧ್ಯಕ್ಷನೇ ನಾನು!

ಕಾಲೇಜಿಗೆ ಬಂದೆ, ಪ್ರಿನ್ಸಿಪಾಲರ ಕಂಡೆ,
ನನ್ನೆಲ್ಲ ವಿಷಯಗಳ ಬಗ್ಗೆ ಮಾತನಾಡಿದೆ,
ಉಳಿದೆಲ್ಲ ಶಿಕ್ಷಕರ ಬಳಿ ಹೋಗಿ ಬಂದೆ,
ಎಷ್ಟೆಲ್ಲ ವಿಷಯಗಳ ಚರ್ಚಿಸಿ ಬಂದೆ
ನಾಲ್ಕಾರು ಗೆಳೆಯರೊಡನೆ ಹರಟುತ್ತಾ ನಿಂತೆ.
ಸಂಗೀತ, ನಾಟಕ, ನೃತ್ಯಗಳ ಬಗ್ಗೆ,
ಚುನಾವಣೆ, ಗ್ರಂಥಾಲಯ, ವಾಚನಾಲಯಗಳ ಬಗ್ಗೆ
ಫ್ರ್‍ಈಶಿಪ್ಪು, ಸ್ಕಾಲರ್‌ಶಿಪ್ಪು, ಲೋನುಗಳ ಬಗ್ಗೆ,
ಭಾಷಣ, ಬಹುಮಾನ, ಸನ್ಮಾನಗಳ ಬಗ್ಗೆ,
ಎನ್ನೆಸ್ಸೆಸ್, ಎನ್ಸೀಸಿ, ಸ್ಪೋರ್ಟುಗಳ ಬಗ್ಗೆ
ಕ್ರಿಕೆಟ್ಟು, ಫುಟ್ ಬಾಲು, ಟೆನ್ನಿಸುಗಳ ಬಗ್ಗೆ
ಗ್ರೂಪ್ ಸಾಂಗ್ಸು, ಗ್ರೂಪ್ ಡಾನ್ಸುಗಳ ಬಗ್ಗೆ
ಏನೆಲ್ಲ ಚಿಂತೆಯು ಎನಗೆ
ವರ್ಷವಿಡೀ ಇರುವುದು ಕಾರ್ಯ ನನಗೆ.

ಜುಲೈನಲ್ಲಿ ಕಾಲೇಜಿಗೆ ಸೇರಿದರೆ ಆಯ್ತು
ಆಗಸ್ಟ್‌ನಲ್ಲಿ ಚುನಾವಣೆಗಳು, ನಾಟಕಗಳು,
ಸೆಪ್ಟೆಂಬರ್‌ನಲ್ಲಿ ತಪ್ಪದೆ ವಾರ್ಷಿಕ ಮುಷ್ಕರ
ಅಕ್ಟೋಬರ್‌ವನ್ನೆಲ್ಲ ರಜದಲ್ಲಿ ಕಳೆದು
ನವೆಂಬರ್‌ನಲ್ಲಿ ಅವಸರದ ಪ್ರವಾಸ ಹೋಗಿ ಬಂದು,
ಡಿಸೆಂಬರ್‌ನಲ್ಲಿ, ನವೆಂಬರ್‌ನ ರಾಜ್ಯೋತ್ಸವ ಮಾಡಿ,
ಜನವರಿಯಲ್ಲಿ ಕ್ರೀಡಾಕೂಟ, ವಾರ್ಷಿಕೋತ್ಸವ ಮಾಡಿ
ಫೆಬ್ರವರಿಯಲ್ಲಿ ಸ್ಪೆಷಲ್ ಕ್ಲಾಸುಗಳ ಚಂಡಿ ಕಾಡಿ
ಮಾರ್ಚ್‌ನಲ್ಲಿ! ಓ ಭಯವಾಗುತಿದೆ ಎನಗೆ
ಭೂತ ಬಂತು ನೋಡಿರಲ್ಲಿ. “ಪರೀಕ್ಷೆ”!
*****
೧೨-೦೧-೧೯೭೫

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...