Home / ಕವನ / ಕವಿತೆ / ರೀತಿ ನೀತಿ

ರೀತಿ ನೀತಿ

ಮದುವೆಯಾಗಿ ಮೂರು ವರ್ಷಗಳ ಬಳಿಕ
ಮಡದಿ ಮಗಳೊಂದಿಗೆ ಮೊನ್ನೆ
ಲಾಲ್‌ಬಾಗ್ ನೋಡಲು ಹೋದಾಗ
ಮಗಳನ್ನು ಆಡಲು ಬಿಟ್ಟು,
ಮುದ್ದು ಮಡದಿಯೊಂದಿಗೆ
ಜೋಡಿಯಾಗಿ ಕುಳಿತಿದ್ದಾಗ
ಅನಿಸಿತು, ನಮ್ಮ ಬಾಳೇ ಒಂದು ರೀತಿ,
ನಮಗೆ ನಮ್ಮದೇ ಒಂದು ನೀತಿ,
ಒಬ್ಬೊಬ್ಬರದು ಒಂದೊಂದು ರೀತಿ.
ಹೀಗೆಯೇ ಯೋಚಿಸುತ್ತಾ ಕುಳಿತಿದ್ದಾಗ
ನಮ್ಮ ಮುಂದೆ, ಆಗೊಮ್ಮೆ-ಈಗೊಮ್ಮೆ
ಹಾದು ಹೋಗುತ್ತಿದ್ದವು ಒಂದೊಂದು ಜೋಡಿ
ಅವರಲೊಬ್ಬೊಬ್ಬರದೂ ಒಂದೊಂದು ರೀತಿ.
ಯಾರಿಗೂ ಕಾಣದೆ ಕದ್ದು ಓಡಾಡುತ್ತಿರುವ
ನಲ್ಲ-ನಲ್ಲೆಯರದೇ ಒಂದು ರೀತಿ .
ಮದುವೆಗೆ ಮುಂಚೆ ಓಡಾಡುವ
ಮದು-ಮಕ್ಕಳದೇ ಒಂದು ರೀತಿ.
ಹೊಸದಾಗಿ ಮದುವೆಯಾದ ಜೋಡಿ,
ಅವರದೇ ಒಂದು ರೀತಿ ನೋಡಿ!
ಒಂದು ಮಗು ಆದವರದು,
ಎರಡು ಮಕ್ಕಳಾದವರದು,
ಮಕ್ಕಳೇ ಆಗದವರದು
ಒಬ್ಬೊಬ್ಬರದು ಒಂದೊಂದು ರೀತಿ
ಅವರವರಿಗೆ ಅವರವರದೇ ನೀತಿ!
ಅದು ಪ್ರಕೃತಿ ನಿಯಮ.
ಈ ರೀತಿ ನೀತಿಗಳ ನಿರ್ಮಿಸಿ,
ಅದರ ಇತಿ ಮಿತಿಯೊಳಗೇ
ನಮ್ಮೆಲ್ಲರ ಬಾಳ ನಾಟಕಗಳ
ಆಡಿಸುವ ಸೂತ್ರಧಾರನದೇ
ಒಂದು ರೀತಿ… ಒಂದು ನೀತಿ!
*****
೨೧-೦೧-೧೯೮೭

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...