ಇಂದು,
ನೀ ಬರೆದ ಪತ್ರವದು
ಬಂದು ತಲುಪಿತು ಇಂದು
ಸಂತಸದ ನೆನಪನ್ನು
ಅಗಲಿಕೆಯ ಅಳಲನ್ನು
ತುಂಬಿ ತಂದಿತು ಇಂದು.
ವಿದ್ಯೆಗೆ ಬುದ್ಧಿಗೆ ಪುರಸ್ಕಾರ
ಕೊಟ್ಟ ಬ್ಯಾಂಕಿಗೆ ನಮಸ್ಕಾರ
ಎಂದು ಹೇಳುತ್ತಾ ನಾನು, ಒಳ ಬಂದೆನಂದು
ಅಕ್ಟೋಬರ್ ತಿಂಗಳ ಹದಿನೆಂಟರಂದು.
ತವರೂರ ತೊರೆದು ಬಹು ದೂರ ಬಂದಿಹೆನು
ದೂರದ ಸುರಪುರದಲ್ಲಿ ಹೊಸ ಬಾಳ ಕಂಡಿಹೆನು.
ಎಲ್ಲೆಡೆ ಹರಡಿಹುದಿಲ್ಲಿ ಬರಡುಗಿರಿ ಪಂಕ್ತಿಗಳು
ಊರ ಚರಿತೆಯ ಸಾರುವ ಭಗ್ನಾವಶೇಷಗಳು.
ಹಸುರಿಲ್ಲ, ಚಿಗುರಿಲ್ಲ, ಹರಿವ ನೀರಿಲ್ಲ
ನನಗಾಗಿ ಮಿಡಿವ ಮನವಿಲ್ಲವಲ್ಲ
ಎಂದು ನೊಂದೆ ನಾನು ದುಃಖದಿಂದ
ಎನ್ನಧಿಕಾರಿ ಕರೆದರೆನ್ನನು ಸ್ನೇಹದಿಂದ.
ದಿಬ್ಬದ ಮೇಲಿನ ಮಹಲಿನ ಮಹಡಿಯಲಿ
ನೋವು ನಲಿವಿಲ್ಲದ ಮೌನದರಮನೆಯಲ್ಲಿ
ಸುಸಜ್ಜಿತ ಕೋಣೆಯಲಿ ಈಗೆನ್ನ ವಾಸ
ಬ್ಯಾಂಕಿನ ಹೊಸ ಶಾಖೆಯಲ್ಲಿ ಈಗೆನ್ನ ಕೆಲಸ.
ಮಾತೆಯ ಮಮತೆಯ ಸಿಹಿಯೂಟ ಈಗಿಲ್ಲ,
ಖಾನಾವಳಿಯ ಖಾರದ ಊಟವೇ ಈಗೆಲ್ಲ!
ಸಾಗುತಿದೆ ಬಾಳು ಹೊಸ ಹಾದಿ ಹಿಡಿದು
ಮಿಡಿಯುತಿದೆ ಮನವು ನನ್ನವರ ನೆನೆದು.
*****
೨೪-೧೧-೧೯೭೯
Related Post
ಸಣ್ಣ ಕತೆ
-
ಆಮಿಷ
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
-
ಮತ್ತೆ ಬಂದ ವಸಂತ
ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…
-
ನಿಂಗನ ನಂಬಿಗೆ
ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
-
ಮಂಜುಳ ಗಾನ
ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…