ರಾಮ ಬೇರೆಯಲ್ಲ
ಕೃಷ್ಣ ಬೇರೆಯಲ್ಲ
ಅಷ್ಟರಮಟ್ಟಿಗೆ ಗಾಢ
ಅವರಿಬ್ಬರ ಮೈತ್ರಿ
ರಾಮನಿಗಿಂತ ಕೃಷ್ಣನೇ
ಎಲ್ಲರಿಗೂ ಅಚ್ಚುಮೆಚ್ಚು.
ಎರಡು ದೇಹ ಒಂದೇ ಜೀವ
ಎಂಬಂತೆ ಬೆಳೆದು…
ಬೆಳೆದು ಬೆಳೆದು ದೊಡ್ಡವರಾದರು.
ಮದುವೆ, ಮಕ್ಕಳು ಎಲ್ಲಾ ಆಯಿತು.
ರಾಮನ ಮಕ್ಕಳನ್ನು ಮುದ್ದಿಸುತ್ತಾ
ಕೃಷ್ಣ ಹೇಳಿದ:
ರಾಮ, ನಾ ಬೇರೆ ಅಲ್ಲ, ನೀ ಬೇರೆ ಅಲ್ಲ
ನಿನ್ನ ತಂದೆ ತಾಯಿ ನನಗೂ
ಪ್ರೀತಿಯ, ಆತ್ಮೀಯ ಮಾತಾಪಿತರು.
ನಿನ್ನಣ್ಣ ತಮ್ಮಂದಿರು, ಅಕ್ಕ ತಂಗಿಯರು
ನನಗೂ ಅಷ್ಟೇ.
ನಿನ್ನ ಮಕ್ಕಳು ನೋಡು
ನನ್ನ ಎಷ್ಟು ಹಚ್ಚಿಕೊಂಡಿವೆ!
ನಿಜ ಹೇಳಬೇಕೆಂದರೆ,
ನಾನೇ ನೀನು, ನೀನೇ ನಾನು.
ನಿನ್ನ ತಾಯಿ ನನಗೂ ತಾಯಿ,
ನಿನ್ನ ತಂದೆ ನನಗೂ ತಂದೆ.
ನಿನ್ನ ಹೆಂಡತಿ….
ರಾಮ ಕೃಷ್ಣನ ಕೆನ್ನೆಗೆ ಬಾರಿಸಿದ!
ತಪ್ಪಲ್ಲವೇ?
*****
೧೪-೦೭-೧೯೯೦
Related Post
ಸಣ್ಣ ಕತೆ
-
ತಿಥಿ
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ಜಡ
ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ಬಲಿ
ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…