Home / ಕವನ / ಕವಿತೆ / ತಪ್ಪಲ್ಲವೆ?

ತಪ್ಪಲ್ಲವೆ?

ರಾಮ ಬೇರೆಯಲ್ಲ
ಕೃಷ್ಣ ಬೇರೆಯಲ್ಲ
ಅಷ್ಟರಮಟ್ಟಿಗೆ ಗಾಢ
ಅವರಿಬ್ಬರ ಮೈತ್ರಿ
ರಾಮನಿಗಿಂತ ಕೃಷ್ಣನೇ
ಎಲ್ಲರಿಗೂ ಅಚ್ಚುಮೆಚ್ಚು.
ಎರಡು ದೇಹ ಒಂದೇ ಜೀವ
ಎಂಬಂತೆ ಬೆಳೆದು…
ಬೆಳೆದು ಬೆಳೆದು ದೊಡ್ಡವರಾದರು.
ಮದುವೆ, ಮಕ್ಕಳು ಎಲ್ಲಾ ಆಯಿತು.
ರಾಮನ ಮಕ್ಕಳನ್ನು ಮುದ್ದಿಸುತ್ತಾ
ಕೃಷ್ಣ ಹೇಳಿದ:
ರಾಮ, ನಾ ಬೇರೆ ಅಲ್ಲ, ನೀ ಬೇರೆ ಅಲ್ಲ
ನಿನ್ನ ತಂದೆ ತಾಯಿ ನನಗೂ
ಪ್ರೀತಿಯ, ಆತ್ಮೀಯ ಮಾತಾಪಿತರು.
ನಿನ್ನಣ್ಣ ತಮ್ಮಂದಿರು, ಅಕ್ಕ ತಂಗಿಯರು
ನನಗೂ ಅಷ್ಟೇ.
ನಿನ್ನ ಮಕ್ಕಳು ನೋಡು
ನನ್ನ ಎಷ್ಟು ಹಚ್ಚಿಕೊಂಡಿವೆ!
ನಿಜ ಹೇಳಬೇಕೆಂದರೆ,
ನಾನೇ ನೀನು, ನೀನೇ ನಾನು.
ನಿನ್ನ ತಾಯಿ ನನಗೂ ತಾಯಿ,
ನಿನ್ನ ತಂದೆ ನನಗೂ ತಂದೆ.
ನಿನ್ನ ಹೆಂಡತಿ….
ರಾಮ ಕೃಷ್ಣನ ಕೆನ್ನೆಗೆ ಬಾರಿಸಿದ!
ತಪ್ಪಲ್ಲವೇ?
*****
೧೪-೦೭-೧೯೯೦

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...