ಬಡತನ

ಬಡತನವೆಂದು ಬೇಸರವೇ?
ಯಾರಿಗಿಲ್ಲ ಬಡತನ?
ಸುಖ ಕೊಡುವುದಿಲ್ಲ ಸಿರಿತನ
ಸಿರಿವಂತರ ಚಿಂತೆ ಹಲವು
ನಮಗಿಲ್ಲ ಅದರ ಗೊಡವು
ನಮಗೆ ಬರಿಯ ಹೊಟ್ಟೆ ಚಿಂತೆ
ಮಲಗಲಿದೆ ದೊಡ್ಡ ಸಂತೆ
ಯಾರೋ ಉಟ್ಟು ಬಿಟ್ಟ ಬಟ್ಟೆ
ನಮಗಿದ್ದೇ ಇದೆ ಎನ್ನಿ
ಪರರ ಕಷ್ಟ ಸ್ವಲ್ಪ ನೋಡ ಬನ್ನಿ.
ನಮ್ಮ ಭದ್ರ ಕೋಟೆ
ಬಡತನದ ರೇಖೆ
ದಾಟುವ ಸಾಹಸಿ
ಏರಿದ ಗೇಣು, ಜಾರಿದ ಮೊಳ
ಕೊನೆಗೂ ಏರಿದ. ಏರಿ… ಏರಿ… ನರಳಿದ
ಬೇಕು… ಬೇಕು… ಬೇಕು… ಎಂದು ಹಲುಬಿದ
ಕಂಡಲ್ಲೆಲ್ಲ ಕೊಳ್ಳೆ ಹೊಡೆದು ದಾರಿ ತಪ್ಪಿದ.
ಸೈಕಲ್ಕು ಸ್ಕೂಟರ್… ಕಾರು
ಸ್ವಂತ ಸೈಟು, ಮನೆ, ಒಡವೆ ಜೋರು
ಸೋಫ, ಟೀಪಾಯ್, ಡೈನಿಂಗ್ ಟೇಬಲ್
ರೇಡಿಯೋ, ಟೇಪು, ಟಿ.ವಿ., ಕೇಬಲ್
ಫೋನು, ಫ್ಯಾನು, ಫ್ರಿಜ್ಜು ಮಿಕ್ಸಿ
ಗೀಜರ್, ವ್ಯಾಕ್ಯೂಮ್ ಕ್ಲೀನರ್, ಏಸಿ
ವಾಷಿಂಗ್ ಮೆಷಿನ್, ಡಿಶ್ ವಾಷರ್
ಒಂದೇ… ಎರಡೇ… ಆಸೆ ನೂರು
ಕಳ್ಳ ಬಂದ, ನೆಂಟ ಬಂದ,
ಗೆಳೆಯ ಬಂದ, ಅಳಿಯ ಬಂದ
ಕಳ್ಳ ಬಂದ, ನೆಂಟ ಬಂದ,
ಗೆಳೆಯ ಬಂದ, ಅಳಿಯ ಬಂದ
ಉಂಡು ಹೋದ, ಕೊಂಡು ಹೋದ.
ತೆರಿಗೆ ಕಟ್ಟಿ, ಜೂಜು ಕಟ್ಟಿ
ಸಿರಿದೇವಿಗೆ ತಾಳಿ ಕಟ್ಟಿ, ಕೆಟ್ಟ…
ನಿದ್ದೆ ಕೆಡಿಸಿ ಹೊಟ್ಟೆ ಉರಿಸಿ
ಚಿಂತೆ ತುಂಬಿ ತಲೆಯ ಕೆಡಿಸಿ
ನಗಲಾಗದ, ಆಳಲಾಗದ
ನಾಗರಿಕ ಶಿಷ್ಟ ಸೋಗು
ಸಾಕು ಸಾಕು ಸಿರಿಯ ಹುಚ್ಚು.
ನಮಗೆಬೇಡ ಇಂಥ ನರಕ
ಬಡತನ ವಾದರೇನಂತೆ
ಶಾಂತಿ, ಪ್ರೀತಿ, ನೆಮ್ಮದಿಯ
ಬಾಳು ಸಾಕು ಕೊನೆಯವರೆಗೆ.
*****
೧೦-೦೪-೧೯೯೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಡವಾಳ: ಭಕ್ತ ಮತ್ತು ಭಗವಂತ
Next post ತೀರ….(ದ) ಬಯಕೆ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…