Home / ಕವನ / ಕವಿತೆ / ಬಡತನ

ಬಡತನ

ಬಡತನವೆಂದು ಬೇಸರವೇ?
ಯಾರಿಗಿಲ್ಲ ಬಡತನ?
ಸುಖ ಕೊಡುವುದಿಲ್ಲ ಸಿರಿತನ
ಸಿರಿವಂತರ ಚಿಂತೆ ಹಲವು
ನಮಗಿಲ್ಲ ಅದರ ಗೊಡವು
ನಮಗೆ ಬರಿಯ ಹೊಟ್ಟೆ ಚಿಂತೆ
ಮಲಗಲಿದೆ ದೊಡ್ಡ ಸಂತೆ
ಯಾರೋ ಉಟ್ಟು ಬಿಟ್ಟ ಬಟ್ಟೆ
ನಮಗಿದ್ದೇ ಇದೆ ಎನ್ನಿ
ಪರರ ಕಷ್ಟ ಸ್ವಲ್ಪ ನೋಡ ಬನ್ನಿ.
ನಮ್ಮ ಭದ್ರ ಕೋಟೆ
ಬಡತನದ ರೇಖೆ
ದಾಟುವ ಸಾಹಸಿ
ಏರಿದ ಗೇಣು, ಜಾರಿದ ಮೊಳ
ಕೊನೆಗೂ ಏರಿದ. ಏರಿ… ಏರಿ… ನರಳಿದ
ಬೇಕು… ಬೇಕು… ಬೇಕು… ಎಂದು ಹಲುಬಿದ
ಕಂಡಲ್ಲೆಲ್ಲ ಕೊಳ್ಳೆ ಹೊಡೆದು ದಾರಿ ತಪ್ಪಿದ.
ಸೈಕಲ್ಕು ಸ್ಕೂಟರ್… ಕಾರು
ಸ್ವಂತ ಸೈಟು, ಮನೆ, ಒಡವೆ ಜೋರು
ಸೋಫ, ಟೀಪಾಯ್, ಡೈನಿಂಗ್ ಟೇಬಲ್
ರೇಡಿಯೋ, ಟೇಪು, ಟಿ.ವಿ., ಕೇಬಲ್
ಫೋನು, ಫ್ಯಾನು, ಫ್ರಿಜ್ಜು ಮಿಕ್ಸಿ
ಗೀಜರ್, ವ್ಯಾಕ್ಯೂಮ್ ಕ್ಲೀನರ್, ಏಸಿ
ವಾಷಿಂಗ್ ಮೆಷಿನ್, ಡಿಶ್ ವಾಷರ್
ಒಂದೇ… ಎರಡೇ… ಆಸೆ ನೂರು
ಕಳ್ಳ ಬಂದ, ನೆಂಟ ಬಂದ,
ಗೆಳೆಯ ಬಂದ, ಅಳಿಯ ಬಂದ
ಕಳ್ಳ ಬಂದ, ನೆಂಟ ಬಂದ,
ಗೆಳೆಯ ಬಂದ, ಅಳಿಯ ಬಂದ
ಉಂಡು ಹೋದ, ಕೊಂಡು ಹೋದ.
ತೆರಿಗೆ ಕಟ್ಟಿ, ಜೂಜು ಕಟ್ಟಿ
ಸಿರಿದೇವಿಗೆ ತಾಳಿ ಕಟ್ಟಿ, ಕೆಟ್ಟ…
ನಿದ್ದೆ ಕೆಡಿಸಿ ಹೊಟ್ಟೆ ಉರಿಸಿ
ಚಿಂತೆ ತುಂಬಿ ತಲೆಯ ಕೆಡಿಸಿ
ನಗಲಾಗದ, ಆಳಲಾಗದ
ನಾಗರಿಕ ಶಿಷ್ಟ ಸೋಗು
ಸಾಕು ಸಾಕು ಸಿರಿಯ ಹುಚ್ಚು.
ನಮಗೆಬೇಡ ಇಂಥ ನರಕ
ಬಡತನ ವಾದರೇನಂತೆ
ಶಾಂತಿ, ಪ್ರೀತಿ, ನೆಮ್ಮದಿಯ
ಬಾಳು ಸಾಕು ಕೊನೆಯವರೆಗೆ.
*****
೧೦-೦೪-೧೯೯೨

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...