Home / ಕವನ / ಕವಿತೆ / ಬಡತನ

ಬಡತನ

ಬಡತನವೆಂದು ಬೇಸರವೇ?
ಯಾರಿಗಿಲ್ಲ ಬಡತನ?
ಸುಖ ಕೊಡುವುದಿಲ್ಲ ಸಿರಿತನ
ಸಿರಿವಂತರ ಚಿಂತೆ ಹಲವು
ನಮಗಿಲ್ಲ ಅದರ ಗೊಡವು
ನಮಗೆ ಬರಿಯ ಹೊಟ್ಟೆ ಚಿಂತೆ
ಮಲಗಲಿದೆ ದೊಡ್ಡ ಸಂತೆ
ಯಾರೋ ಉಟ್ಟು ಬಿಟ್ಟ ಬಟ್ಟೆ
ನಮಗಿದ್ದೇ ಇದೆ ಎನ್ನಿ
ಪರರ ಕಷ್ಟ ಸ್ವಲ್ಪ ನೋಡ ಬನ್ನಿ.
ನಮ್ಮ ಭದ್ರ ಕೋಟೆ
ಬಡತನದ ರೇಖೆ
ದಾಟುವ ಸಾಹಸಿ
ಏರಿದ ಗೇಣು, ಜಾರಿದ ಮೊಳ
ಕೊನೆಗೂ ಏರಿದ. ಏರಿ… ಏರಿ… ನರಳಿದ
ಬೇಕು… ಬೇಕು… ಬೇಕು… ಎಂದು ಹಲುಬಿದ
ಕಂಡಲ್ಲೆಲ್ಲ ಕೊಳ್ಳೆ ಹೊಡೆದು ದಾರಿ ತಪ್ಪಿದ.
ಸೈಕಲ್ಕು ಸ್ಕೂಟರ್… ಕಾರು
ಸ್ವಂತ ಸೈಟು, ಮನೆ, ಒಡವೆ ಜೋರು
ಸೋಫ, ಟೀಪಾಯ್, ಡೈನಿಂಗ್ ಟೇಬಲ್
ರೇಡಿಯೋ, ಟೇಪು, ಟಿ.ವಿ., ಕೇಬಲ್
ಫೋನು, ಫ್ಯಾನು, ಫ್ರಿಜ್ಜು ಮಿಕ್ಸಿ
ಗೀಜರ್, ವ್ಯಾಕ್ಯೂಮ್ ಕ್ಲೀನರ್, ಏಸಿ
ವಾಷಿಂಗ್ ಮೆಷಿನ್, ಡಿಶ್ ವಾಷರ್
ಒಂದೇ… ಎರಡೇ… ಆಸೆ ನೂರು
ಕಳ್ಳ ಬಂದ, ನೆಂಟ ಬಂದ,
ಗೆಳೆಯ ಬಂದ, ಅಳಿಯ ಬಂದ
ಕಳ್ಳ ಬಂದ, ನೆಂಟ ಬಂದ,
ಗೆಳೆಯ ಬಂದ, ಅಳಿಯ ಬಂದ
ಉಂಡು ಹೋದ, ಕೊಂಡು ಹೋದ.
ತೆರಿಗೆ ಕಟ್ಟಿ, ಜೂಜು ಕಟ್ಟಿ
ಸಿರಿದೇವಿಗೆ ತಾಳಿ ಕಟ್ಟಿ, ಕೆಟ್ಟ…
ನಿದ್ದೆ ಕೆಡಿಸಿ ಹೊಟ್ಟೆ ಉರಿಸಿ
ಚಿಂತೆ ತುಂಬಿ ತಲೆಯ ಕೆಡಿಸಿ
ನಗಲಾಗದ, ಆಳಲಾಗದ
ನಾಗರಿಕ ಶಿಷ್ಟ ಸೋಗು
ಸಾಕು ಸಾಕು ಸಿರಿಯ ಹುಚ್ಚು.
ನಮಗೆಬೇಡ ಇಂಥ ನರಕ
ಬಡತನ ವಾದರೇನಂತೆ
ಶಾಂತಿ, ಪ್ರೀತಿ, ನೆಮ್ಮದಿಯ
ಬಾಳು ಸಾಕು ಕೊನೆಯವರೆಗೆ.
*****
೧೦-೦೪-೧೯೯೨

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...