ಕಾದಿಹೆನು ನಿನಗಾಗಿ…..

ನನ್ನೊಳಗಿದ್ದು ಹೋದೆಯೆಲ್ಲಿಗೆ
ಹೊಳೆಯಲೇ ಇಲ್ಲ
ತಿಳಿಯಲೇ ಇಲ್ಲ.
ಒಂದಿನಿತು ಸೂಚನೆ ಕೊಡದೆಯೆ
ಹೋದುದರ ಮರ್ಮವೇನು.

ಆಕಾಶಕ್ಕೊಮ್ಮೆ ದಿಗಂತಕ್ಕೊಮ್ಮೆ
ದಿಟ್ಟಿ ಮಿಟುಕದೆ,
ಮೋಡಗಳಾಚೆಗೊಮ್ಮೆ
ನೋಡಿದ್ದೆ ಬಂತು
ನಿನ್ನ ಸುಳಿವು ಸಿಗಲಿಲ್ಲ

ಮಳೆ ಹನಿಗಳನ್ನು ನಿಲ್ಲಿಸಿ
‘ನೀವು ಕಂಡಿರಾ, ನೀವು ಕಂಡಿರಾ’
ಎಂದು ವಿಚಾರಿಸಿದರೂ
ಗಿಡಗಂಟಿಗಳೆಡೆಯಲ್ಲಿದ್ದ
ಹೂ ಪಕಳೆಗಳ ಕಿವಿಯಲ್ಲಿ

ಮೇಲುದನಿಯಲ್ಲಿ ಉಸುರಿದರೂ,
ರುಯಿಂಗುಡುವ ಗಾಳಿಯಲೆಯಲ್ಲಿ
ಸುಮದ ಮಧುರ ರಂಗಿನಲ್ಲಿ
ಹಣ್ಣು-ಕಾಯಿಗಳ ಸಿಹಿ ಕಹಿಗಳಲ್ಲಿ
ನಿನ್ನಿರುವಿಕೆಯನ್ನು ಹಾರಯಿಸಿದರೂ,

ಕೆಲವೊಮ್ಮೆ ನೀನು ನನ್ನೊಳು
ಇದ್ದುದು ಹೌದೆ,
ಎನ್ನುವುದರ ಗುಮಾನಿಯಾಗುತ್ತದೆ.
ಆಗ ನಿನಗಾಗಿ ಕೂಗುವ
ಧನಿಯೆತ್ತಿ ಮೊರೆಯಿಡುವ

ಗ್ರಹ – ವಿಗ್ರಹಗಳ ಕೃಪೆಯನ್ನು ಕೋರುವ
ನರನಾರಿಯರ ನಡುವಿನಲ್ಲಿ
ನಿನ್ನನ್ನು ಹುಡುಕುವ ಮನವಾಗುವುದು.
ಆದರೆ ಕಾಣದೆ ಎದ್ದ ಸವಾಲು ಮತ್ತೆ ಅದೇ
ಎಲ್ಲಿರುವೆ ನೀನು ಎತ್ತ ಹೋದೇ…..?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಗ್ಗಿ
Next post ಹಸುರುಳಿಸದೆ ಇನ್ನೇನು ಕೆಲಸ ?

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys