ಕಾದಿಹೆನು ನಿನಗಾಗಿ…..

ನನ್ನೊಳಗಿದ್ದು ಹೋದೆಯೆಲ್ಲಿಗೆ
ಹೊಳೆಯಲೇ ಇಲ್ಲ
ತಿಳಿಯಲೇ ಇಲ್ಲ.
ಒಂದಿನಿತು ಸೂಚನೆ ಕೊಡದೆಯೆ
ಹೋದುದರ ಮರ್ಮವೇನು.

ಆಕಾಶಕ್ಕೊಮ್ಮೆ ದಿಗಂತಕ್ಕೊಮ್ಮೆ
ದಿಟ್ಟಿ ಮಿಟುಕದೆ,
ಮೋಡಗಳಾಚೆಗೊಮ್ಮೆ
ನೋಡಿದ್ದೆ ಬಂತು
ನಿನ್ನ ಸುಳಿವು ಸಿಗಲಿಲ್ಲ

ಮಳೆ ಹನಿಗಳನ್ನು ನಿಲ್ಲಿಸಿ
‘ನೀವು ಕಂಡಿರಾ, ನೀವು ಕಂಡಿರಾ’
ಎಂದು ವಿಚಾರಿಸಿದರೂ
ಗಿಡಗಂಟಿಗಳೆಡೆಯಲ್ಲಿದ್ದ
ಹೂ ಪಕಳೆಗಳ ಕಿವಿಯಲ್ಲಿ

ಮೇಲುದನಿಯಲ್ಲಿ ಉಸುರಿದರೂ,
ರುಯಿಂಗುಡುವ ಗಾಳಿಯಲೆಯಲ್ಲಿ
ಸುಮದ ಮಧುರ ರಂಗಿನಲ್ಲಿ
ಹಣ್ಣು-ಕಾಯಿಗಳ ಸಿಹಿ ಕಹಿಗಳಲ್ಲಿ
ನಿನ್ನಿರುವಿಕೆಯನ್ನು ಹಾರಯಿಸಿದರೂ,

ಕೆಲವೊಮ್ಮೆ ನೀನು ನನ್ನೊಳು
ಇದ್ದುದು ಹೌದೆ,
ಎನ್ನುವುದರ ಗುಮಾನಿಯಾಗುತ್ತದೆ.
ಆಗ ನಿನಗಾಗಿ ಕೂಗುವ
ಧನಿಯೆತ್ತಿ ಮೊರೆಯಿಡುವ

ಗ್ರಹ – ವಿಗ್ರಹಗಳ ಕೃಪೆಯನ್ನು ಕೋರುವ
ನರನಾರಿಯರ ನಡುವಿನಲ್ಲಿ
ನಿನ್ನನ್ನು ಹುಡುಕುವ ಮನವಾಗುವುದು.
ಆದರೆ ಕಾಣದೆ ಎದ್ದ ಸವಾಲು ಮತ್ತೆ ಅದೇ
ಎಲ್ಲಿರುವೆ ನೀನು ಎತ್ತ ಹೋದೇ…..?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಗ್ಗಿ
Next post ಹಸುರುಳಿಸದೆ ಇನ್ನೇನು ಕೆಲಸ ?

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…