ಕಾದಿಹೆನು ನಿನಗಾಗಿ…..

ನನ್ನೊಳಗಿದ್ದು ಹೋದೆಯೆಲ್ಲಿಗೆ
ಹೊಳೆಯಲೇ ಇಲ್ಲ
ತಿಳಿಯಲೇ ಇಲ್ಲ.
ಒಂದಿನಿತು ಸೂಚನೆ ಕೊಡದೆಯೆ
ಹೋದುದರ ಮರ್ಮವೇನು.

ಆಕಾಶಕ್ಕೊಮ್ಮೆ ದಿಗಂತಕ್ಕೊಮ್ಮೆ
ದಿಟ್ಟಿ ಮಿಟುಕದೆ,
ಮೋಡಗಳಾಚೆಗೊಮ್ಮೆ
ನೋಡಿದ್ದೆ ಬಂತು
ನಿನ್ನ ಸುಳಿವು ಸಿಗಲಿಲ್ಲ

ಮಳೆ ಹನಿಗಳನ್ನು ನಿಲ್ಲಿಸಿ
‘ನೀವು ಕಂಡಿರಾ, ನೀವು ಕಂಡಿರಾ’
ಎಂದು ವಿಚಾರಿಸಿದರೂ
ಗಿಡಗಂಟಿಗಳೆಡೆಯಲ್ಲಿದ್ದ
ಹೂ ಪಕಳೆಗಳ ಕಿವಿಯಲ್ಲಿ

ಮೇಲುದನಿಯಲ್ಲಿ ಉಸುರಿದರೂ,
ರುಯಿಂಗುಡುವ ಗಾಳಿಯಲೆಯಲ್ಲಿ
ಸುಮದ ಮಧುರ ರಂಗಿನಲ್ಲಿ
ಹಣ್ಣು-ಕಾಯಿಗಳ ಸಿಹಿ ಕಹಿಗಳಲ್ಲಿ
ನಿನ್ನಿರುವಿಕೆಯನ್ನು ಹಾರಯಿಸಿದರೂ,

ಕೆಲವೊಮ್ಮೆ ನೀನು ನನ್ನೊಳು
ಇದ್ದುದು ಹೌದೆ,
ಎನ್ನುವುದರ ಗುಮಾನಿಯಾಗುತ್ತದೆ.
ಆಗ ನಿನಗಾಗಿ ಕೂಗುವ
ಧನಿಯೆತ್ತಿ ಮೊರೆಯಿಡುವ

ಗ್ರಹ – ವಿಗ್ರಹಗಳ ಕೃಪೆಯನ್ನು ಕೋರುವ
ನರನಾರಿಯರ ನಡುವಿನಲ್ಲಿ
ನಿನ್ನನ್ನು ಹುಡುಕುವ ಮನವಾಗುವುದು.
ಆದರೆ ಕಾಣದೆ ಎದ್ದ ಸವಾಲು ಮತ್ತೆ ಅದೇ
ಎಲ್ಲಿರುವೆ ನೀನು ಎತ್ತ ಹೋದೇ…..?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಗ್ಗಿ
Next post ಹಸುರುಳಿಸದೆ ಇನ್ನೇನು ಕೆಲಸ ?

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…