ಸುಗ್ಗಿ

ಹೆಜ್ಜೆ ಹೆಜ್ಜೆ ಗೀತೆ ಹಾಡಿ
ಘಳಿರ್ ಘಳಿರ್ ಘಳಿರ್
ಎಳ್ಳು ಸಜ್ಜೆ ರಾಗಿ ಜೋಳ
ಭತ್ತದ ರಾಶಿ ರಾಶಿ ಸುಗ್ಗಿಯಮ್ಮಾ ||

ಕಷ್ಟ ಪಟ್ಟು ರಟ್ಟೆ ಮುರಿದು
ಬೆವರು ಸುರಿಸಿ ದುಡಿದ ರೈತ
ವರುಷ ವರುಷ ಅವಗೆ ಹರುಷ
ತುಂಬಿ ರಾಶಿ ರಾಗಿ ಸುಗ್ಗಿಯಮ್ಮಾ ||

ಕಬ್ಬು ಹೆಸರು ತೊಗರಿಬೆಳೆ
ಅವರೆ ಕಡಲೆಕಾಯಿ ಎಳ್ಳು
ಅಲಸಂದೆ ಎಲ್ಲಾ ಬೆಳೆಯ ಸುಗ್ಗಿ
ಬೆಳ್ಳಿ ಕಡಗ ಹೈಕಳ ಜೋಡಿಯಮ್ಮಾ ||

ತಳಿರು ತೋರಣ ಬಾಗಿ ಬಾಗಿಲ
ಬಾಳೆ ಹಾಸಿ ಕುಡಿಕೆ ಮಡಿಕೆಯ
ಪೂಜೆ ಮಾಡಿ ಕುಣಿದು ನಲಿದು
ಪುಟ್ಟ ಮಕ್ಕಳ ಸೆಳೆದ ಆರತಿಯಮ್ಮಾ ||

ಸ್ನೇಹ ಬಾಳ್ವೆ ತರುವ ಸುಗ್ಗಿ
ಮನೆ ಮನವನು ಅರಳಿಸಿ
ಜಗಕೆ ಉಸಿರ ತುಂಬಿ ನಗಿಸಿ
ಹರುಷ ತಂದಾನೋ ತಾನೋ ಸಂಕ್ರಾಂತಿಯಮ್ಮಾ |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಿ ಬಾಯಿಗೆ ಚಿಂದಿಯಾದ ಪೈಜಾಮ…!
Next post ಕಾದಿಹೆನು ನಿನಗಾಗಿ…..

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…