Home / ಕವನ / ಕವಿತೆ / ಬೆಳಗು

ಬೆಳಗು

ಮಂಗಳಕರ ದಿನದಾಗಮನದ ಘೋಷಣೆಯಾಗಿ
ಕತ್ತಲೆ ಚಾಪೆಯ ಸುತ್ತುತಿದೆ
ಬಾನಿನ ಕಣ್ಣುಗಳು ಮಂಕಾಗುತಿವೆ
ಭೂಮಿಯ ಕಣ್ಣುಗಳು ತೆರೆಯುತಿವೆ
ಹಕ್ಕಿಗಳು ಕಲರವ ಎಬ್ಬಿಸಿವೆ
ಪ್ರಕೃತಿ ಮಾತೆಯ ನಿತ್ಯದ ಸೂಚನೆಯಾಗಿ.

ನಂಬಿಕೆ, ಶ್ರದ್ಧಾ ಮನೆ ಮಂದಿರಗಳಲಿ
ಮೊಳಗುತಿವೆ ಶುಭ ಸೂಚಕ ಘಂಟೆಗಳು
ಮೊರೆಯುತಿವೆ ಸುಶ್ರಾವ್ಯ ‘ಎದ್ದೇಳು…’ ಗೀತೆಗಳು
ಸ್ಪುರಿಸಿವೆ ಭಕ್ತಿಯ ಮನಗಳಲಿ
ಸುಟ್ಟುಕೊಂಡು ಸುಗಂಧ ಬೀರುವ
ದೀಪ, ದೂಪದ ಬತ್ತಿಗಳು ಸೇರಿ.

ಬಾಳುವ ಮನೆಗಳ ಅಂಗಳಗಳಲಿ
ಕಾರಣೆ ನಡೆದಿದೆ
ಅರಳುತಿವೆ ವಿಧ, ವಿಧ ರಂಗೋಲಿ ಹೂವುಗಳು
ಶಿಶುಗಳ ಮುಕ್ತ ನಗೆಯಂತೆ
ಸ್ವಚ್ಛತೆ, ಶೃಂಗಾರ ಮೊದಲೆಂಬಂತೆ

ನಿಧಾನವಾಗಿ ಮನೆಯೊಳ ಹೊರಗೆ ಹೆಜ್ಜೆಯ ಹಾಕುತ
ಎಲ್ಲದನು, ಎಲ್ಲರನು ಗಮನಿಸುತ
ಮಾಡಿದ ಕೆಲಸವ ಒರಗೆ ಹಚ್ಚುತ

ಮಾಡಬೇಕಾದುದೆಲ್ಲವನು ವಿವರಿಸುತ, ತಾಕೀತು ಮಾಡುತ್ತ
ಬೆಳಕಿನ ಕೋಲನು ಚಮಕಾಯಿಸುತ್ತ
ಹಿರಿಯರು ನಡೆಸಿಹರು
ಬಾಳಿನ ಬೆಳಗು ಅಧಿವೇಶನವ.

ದುಡಿಮೆಯೇ ದೇವರು ನಡೆ, ನುಡಿಯ
ಅನ್ನದಾತರು, ಶ್ರಮಿಕರ ಕುಟೀರಗಳಲಿ
ಸಿದ್ಧ ಮಾಡುತಿಹರು
ಬಾಳಿನ ಕಣ್ಣುಗಳು, ಸಹನೆ, ಸಮನ್ವಯ ಸಾಧಕ ನಾರಿಯರು
ದುಡಿಯುವ ಕಣಗಳು, ಹೊಲ ಗದ್ದೆಗೆ ತೆರಳುವ
ಮನೆ ಮಂದಿಗೆ ಬುತ್ತಿ.

ಮೊದಲಿಗೆ ಎದ್ದ ಮೊದಲ ಗುರುಗಳ ಸಂಕುಲದವರು
ಬದಲಾಯಿಸುವರು
ಅಸಹಿಸಿಕೊಳ್ಳದೆ ಒದ್ದೆ ಮಾಡಿದ ಹಾಸಿಗೆ, ಹೊದಿಕೆ;
ಬೈಯ್ಯುತ ಎಳೆಯರ ಪ್ರೇಮದಲಿ
ಹಾಗೇ ಮೆಲ್ಲಗೆ ತಟ್ಟಿ ಮತ್ತೆ ಮಲಗಿಸುತಲಿ.

ಹಗಲು, ರಾತ್ರಿ ಸತ್ತಿಹ ಪೇಟೆ, ಪಟ್ಟಣಗಳಲಿ
ನೋಡಸಿಗುವರು…
ಆರೋಗ್ಯ ಪ್ರಿಯ ಅನುಕೂಲ, ಅವಕಾಶ ಹೊಂದಿದವರು,
ಹಿರಿಯರು,
ಪ್ರಶಸ್ತತೆ ಸವಿಯುವ, ಹುರಿಗೊಳ್ಳುವ ಭಾವದಲಿ
ದಟ್ಟಣೆ ವಿರಳ ವನ, ರಸ್ತೆಗಳಲಿ
ಕುಕ್ಕುಲೋಟ, ಆರಾಮದ ನಡೆಯಲಿ
ಸಹ ವಿಹಾರಿ ಸಂಗಾತಿ, ಮಿತ್ರರ ಜೊತೆಯಲಿ
ವಿದ್ಯಮಾನಗಳ ಲಘು ಪರಾಮರ್ಶೆಯ ನಡೆಸುವರು:

ಹದಿ ಹರೆಯದವರು, ನಾನಾ ಗುರಿ, ಕನಸಿಗರು
ಗರಡಿ, ಮೈದಾನ, ಮಂದಿರಗಳಲಿ
ಬೆಳಗಿನ ಗಾಳಿಗೆ ತುಸು ತುಸು ತಂಪು, ಬಿಸಿ ಬೆರೆಸುವರು.

ಬಾಳಿನ ಅವಶ್ಯ
ನಿಸರ್ಗ ದೇವಿಯ ನಿಯಮ, ನಿರ್ಲಿಪ್ತತೆ ಪ್ರತಿಪಾದಕನು
ನಿತ್ಯನು, ದಿನಕರನು ಅವತರಿಸುವನು
ಮೂಡಣ ದಿಗಂತದಂಚಿನಿಂದ
ಪೂರ್ಣತೆಯಾಕಾರದಲಿ;
ಕಡು ಕಿತ್ತಳೆ ಬಣ್ಣದ ಓಕುಳಿಯೆಲ್ಲೆಡೆ ಎರಚಾಡುವನು
ಜೀವ ಸಮಯದ ವಿವಿಧ ಮಜಲುಗಳ ನಿರೂಪಕನು
ಹೂ ಬಿಸಿಲಿನ ಕಾರಂಜಿಯಾಗಿ
ಕಣ್ಮನ ಶಕ್ತಿಯ ಪೂರಕನಾಗಿ
ಬೆಳಗಿನ ಸಂಪೂರ್ಣತೆ ರೂಪನಾಗಿ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...