Home / ಕವನ / ಕವಿತೆ / ಬೆಳಗು

ಬೆಳಗು

ಮಂಗಳಕರ ದಿನದಾಗಮನದ ಘೋಷಣೆಯಾಗಿ
ಕತ್ತಲೆ ಚಾಪೆಯ ಸುತ್ತುತಿದೆ
ಬಾನಿನ ಕಣ್ಣುಗಳು ಮಂಕಾಗುತಿವೆ
ಭೂಮಿಯ ಕಣ್ಣುಗಳು ತೆರೆಯುತಿವೆ
ಹಕ್ಕಿಗಳು ಕಲರವ ಎಬ್ಬಿಸಿವೆ
ಪ್ರಕೃತಿ ಮಾತೆಯ ನಿತ್ಯದ ಸೂಚನೆಯಾಗಿ.

ನಂಬಿಕೆ, ಶ್ರದ್ಧಾ ಮನೆ ಮಂದಿರಗಳಲಿ
ಮೊಳಗುತಿವೆ ಶುಭ ಸೂಚಕ ಘಂಟೆಗಳು
ಮೊರೆಯುತಿವೆ ಸುಶ್ರಾವ್ಯ ‘ಎದ್ದೇಳು…’ ಗೀತೆಗಳು
ಸ್ಪುರಿಸಿವೆ ಭಕ್ತಿಯ ಮನಗಳಲಿ
ಸುಟ್ಟುಕೊಂಡು ಸುಗಂಧ ಬೀರುವ
ದೀಪ, ದೂಪದ ಬತ್ತಿಗಳು ಸೇರಿ.

ಬಾಳುವ ಮನೆಗಳ ಅಂಗಳಗಳಲಿ
ಕಾರಣೆ ನಡೆದಿದೆ
ಅರಳುತಿವೆ ವಿಧ, ವಿಧ ರಂಗೋಲಿ ಹೂವುಗಳು
ಶಿಶುಗಳ ಮುಕ್ತ ನಗೆಯಂತೆ
ಸ್ವಚ್ಛತೆ, ಶೃಂಗಾರ ಮೊದಲೆಂಬಂತೆ

ನಿಧಾನವಾಗಿ ಮನೆಯೊಳ ಹೊರಗೆ ಹೆಜ್ಜೆಯ ಹಾಕುತ
ಎಲ್ಲದನು, ಎಲ್ಲರನು ಗಮನಿಸುತ
ಮಾಡಿದ ಕೆಲಸವ ಒರಗೆ ಹಚ್ಚುತ

ಮಾಡಬೇಕಾದುದೆಲ್ಲವನು ವಿವರಿಸುತ, ತಾಕೀತು ಮಾಡುತ್ತ
ಬೆಳಕಿನ ಕೋಲನು ಚಮಕಾಯಿಸುತ್ತ
ಹಿರಿಯರು ನಡೆಸಿಹರು
ಬಾಳಿನ ಬೆಳಗು ಅಧಿವೇಶನವ.

ದುಡಿಮೆಯೇ ದೇವರು ನಡೆ, ನುಡಿಯ
ಅನ್ನದಾತರು, ಶ್ರಮಿಕರ ಕುಟೀರಗಳಲಿ
ಸಿದ್ಧ ಮಾಡುತಿಹರು
ಬಾಳಿನ ಕಣ್ಣುಗಳು, ಸಹನೆ, ಸಮನ್ವಯ ಸಾಧಕ ನಾರಿಯರು
ದುಡಿಯುವ ಕಣಗಳು, ಹೊಲ ಗದ್ದೆಗೆ ತೆರಳುವ
ಮನೆ ಮಂದಿಗೆ ಬುತ್ತಿ.

ಮೊದಲಿಗೆ ಎದ್ದ ಮೊದಲ ಗುರುಗಳ ಸಂಕುಲದವರು
ಬದಲಾಯಿಸುವರು
ಅಸಹಿಸಿಕೊಳ್ಳದೆ ಒದ್ದೆ ಮಾಡಿದ ಹಾಸಿಗೆ, ಹೊದಿಕೆ;
ಬೈಯ್ಯುತ ಎಳೆಯರ ಪ್ರೇಮದಲಿ
ಹಾಗೇ ಮೆಲ್ಲಗೆ ತಟ್ಟಿ ಮತ್ತೆ ಮಲಗಿಸುತಲಿ.

ಹಗಲು, ರಾತ್ರಿ ಸತ್ತಿಹ ಪೇಟೆ, ಪಟ್ಟಣಗಳಲಿ
ನೋಡಸಿಗುವರು…
ಆರೋಗ್ಯ ಪ್ರಿಯ ಅನುಕೂಲ, ಅವಕಾಶ ಹೊಂದಿದವರು,
ಹಿರಿಯರು,
ಪ್ರಶಸ್ತತೆ ಸವಿಯುವ, ಹುರಿಗೊಳ್ಳುವ ಭಾವದಲಿ
ದಟ್ಟಣೆ ವಿರಳ ವನ, ರಸ್ತೆಗಳಲಿ
ಕುಕ್ಕುಲೋಟ, ಆರಾಮದ ನಡೆಯಲಿ
ಸಹ ವಿಹಾರಿ ಸಂಗಾತಿ, ಮಿತ್ರರ ಜೊತೆಯಲಿ
ವಿದ್ಯಮಾನಗಳ ಲಘು ಪರಾಮರ್ಶೆಯ ನಡೆಸುವರು:

ಹದಿ ಹರೆಯದವರು, ನಾನಾ ಗುರಿ, ಕನಸಿಗರು
ಗರಡಿ, ಮೈದಾನ, ಮಂದಿರಗಳಲಿ
ಬೆಳಗಿನ ಗಾಳಿಗೆ ತುಸು ತುಸು ತಂಪು, ಬಿಸಿ ಬೆರೆಸುವರು.

ಬಾಳಿನ ಅವಶ್ಯ
ನಿಸರ್ಗ ದೇವಿಯ ನಿಯಮ, ನಿರ್ಲಿಪ್ತತೆ ಪ್ರತಿಪಾದಕನು
ನಿತ್ಯನು, ದಿನಕರನು ಅವತರಿಸುವನು
ಮೂಡಣ ದಿಗಂತದಂಚಿನಿಂದ
ಪೂರ್ಣತೆಯಾಕಾರದಲಿ;
ಕಡು ಕಿತ್ತಳೆ ಬಣ್ಣದ ಓಕುಳಿಯೆಲ್ಲೆಡೆ ಎರಚಾಡುವನು
ಜೀವ ಸಮಯದ ವಿವಿಧ ಮಜಲುಗಳ ನಿರೂಪಕನು
ಹೂ ಬಿಸಿಲಿನ ಕಾರಂಜಿಯಾಗಿ
ಕಣ್ಮನ ಶಕ್ತಿಯ ಪೂರಕನಾಗಿ
ಬೆಳಗಿನ ಸಂಪೂರ್ಣತೆ ರೂಪನಾಗಿ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್