Home / ಕವನ / ಕವಿತೆ / ಬೆಳಗು

ಬೆಳಗು

ಮಂಗಳಕರ ದಿನದಾಗಮನದ ಘೋಷಣೆಯಾಗಿ
ಕತ್ತಲೆ ಚಾಪೆಯ ಸುತ್ತುತಿದೆ
ಬಾನಿನ ಕಣ್ಣುಗಳು ಮಂಕಾಗುತಿವೆ
ಭೂಮಿಯ ಕಣ್ಣುಗಳು ತೆರೆಯುತಿವೆ
ಹಕ್ಕಿಗಳು ಕಲರವ ಎಬ್ಬಿಸಿವೆ
ಪ್ರಕೃತಿ ಮಾತೆಯ ನಿತ್ಯದ ಸೂಚನೆಯಾಗಿ.

ನಂಬಿಕೆ, ಶ್ರದ್ಧಾ ಮನೆ ಮಂದಿರಗಳಲಿ
ಮೊಳಗುತಿವೆ ಶುಭ ಸೂಚಕ ಘಂಟೆಗಳು
ಮೊರೆಯುತಿವೆ ಸುಶ್ರಾವ್ಯ ‘ಎದ್ದೇಳು…’ ಗೀತೆಗಳು
ಸ್ಪುರಿಸಿವೆ ಭಕ್ತಿಯ ಮನಗಳಲಿ
ಸುಟ್ಟುಕೊಂಡು ಸುಗಂಧ ಬೀರುವ
ದೀಪ, ದೂಪದ ಬತ್ತಿಗಳು ಸೇರಿ.

ಬಾಳುವ ಮನೆಗಳ ಅಂಗಳಗಳಲಿ
ಕಾರಣೆ ನಡೆದಿದೆ
ಅರಳುತಿವೆ ವಿಧ, ವಿಧ ರಂಗೋಲಿ ಹೂವುಗಳು
ಶಿಶುಗಳ ಮುಕ್ತ ನಗೆಯಂತೆ
ಸ್ವಚ್ಛತೆ, ಶೃಂಗಾರ ಮೊದಲೆಂಬಂತೆ

ನಿಧಾನವಾಗಿ ಮನೆಯೊಳ ಹೊರಗೆ ಹೆಜ್ಜೆಯ ಹಾಕುತ
ಎಲ್ಲದನು, ಎಲ್ಲರನು ಗಮನಿಸುತ
ಮಾಡಿದ ಕೆಲಸವ ಒರಗೆ ಹಚ್ಚುತ

ಮಾಡಬೇಕಾದುದೆಲ್ಲವನು ವಿವರಿಸುತ, ತಾಕೀತು ಮಾಡುತ್ತ
ಬೆಳಕಿನ ಕೋಲನು ಚಮಕಾಯಿಸುತ್ತ
ಹಿರಿಯರು ನಡೆಸಿಹರು
ಬಾಳಿನ ಬೆಳಗು ಅಧಿವೇಶನವ.

ದುಡಿಮೆಯೇ ದೇವರು ನಡೆ, ನುಡಿಯ
ಅನ್ನದಾತರು, ಶ್ರಮಿಕರ ಕುಟೀರಗಳಲಿ
ಸಿದ್ಧ ಮಾಡುತಿಹರು
ಬಾಳಿನ ಕಣ್ಣುಗಳು, ಸಹನೆ, ಸಮನ್ವಯ ಸಾಧಕ ನಾರಿಯರು
ದುಡಿಯುವ ಕಣಗಳು, ಹೊಲ ಗದ್ದೆಗೆ ತೆರಳುವ
ಮನೆ ಮಂದಿಗೆ ಬುತ್ತಿ.

ಮೊದಲಿಗೆ ಎದ್ದ ಮೊದಲ ಗುರುಗಳ ಸಂಕುಲದವರು
ಬದಲಾಯಿಸುವರು
ಅಸಹಿಸಿಕೊಳ್ಳದೆ ಒದ್ದೆ ಮಾಡಿದ ಹಾಸಿಗೆ, ಹೊದಿಕೆ;
ಬೈಯ್ಯುತ ಎಳೆಯರ ಪ್ರೇಮದಲಿ
ಹಾಗೇ ಮೆಲ್ಲಗೆ ತಟ್ಟಿ ಮತ್ತೆ ಮಲಗಿಸುತಲಿ.

ಹಗಲು, ರಾತ್ರಿ ಸತ್ತಿಹ ಪೇಟೆ, ಪಟ್ಟಣಗಳಲಿ
ನೋಡಸಿಗುವರು…
ಆರೋಗ್ಯ ಪ್ರಿಯ ಅನುಕೂಲ, ಅವಕಾಶ ಹೊಂದಿದವರು,
ಹಿರಿಯರು,
ಪ್ರಶಸ್ತತೆ ಸವಿಯುವ, ಹುರಿಗೊಳ್ಳುವ ಭಾವದಲಿ
ದಟ್ಟಣೆ ವಿರಳ ವನ, ರಸ್ತೆಗಳಲಿ
ಕುಕ್ಕುಲೋಟ, ಆರಾಮದ ನಡೆಯಲಿ
ಸಹ ವಿಹಾರಿ ಸಂಗಾತಿ, ಮಿತ್ರರ ಜೊತೆಯಲಿ
ವಿದ್ಯಮಾನಗಳ ಲಘು ಪರಾಮರ್ಶೆಯ ನಡೆಸುವರು:

ಹದಿ ಹರೆಯದವರು, ನಾನಾ ಗುರಿ, ಕನಸಿಗರು
ಗರಡಿ, ಮೈದಾನ, ಮಂದಿರಗಳಲಿ
ಬೆಳಗಿನ ಗಾಳಿಗೆ ತುಸು ತುಸು ತಂಪು, ಬಿಸಿ ಬೆರೆಸುವರು.

ಬಾಳಿನ ಅವಶ್ಯ
ನಿಸರ್ಗ ದೇವಿಯ ನಿಯಮ, ನಿರ್ಲಿಪ್ತತೆ ಪ್ರತಿಪಾದಕನು
ನಿತ್ಯನು, ದಿನಕರನು ಅವತರಿಸುವನು
ಮೂಡಣ ದಿಗಂತದಂಚಿನಿಂದ
ಪೂರ್ಣತೆಯಾಕಾರದಲಿ;
ಕಡು ಕಿತ್ತಳೆ ಬಣ್ಣದ ಓಕುಳಿಯೆಲ್ಲೆಡೆ ಎರಚಾಡುವನು
ಜೀವ ಸಮಯದ ವಿವಿಧ ಮಜಲುಗಳ ನಿರೂಪಕನು
ಹೂ ಬಿಸಿಲಿನ ಕಾರಂಜಿಯಾಗಿ
ಕಣ್ಮನ ಶಕ್ತಿಯ ಪೂರಕನಾಗಿ
ಬೆಳಗಿನ ಸಂಪೂರ್ಣತೆ ರೂಪನಾಗಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...