ಸಂಬಂಧಗಳು

ಬಡತನ ಬಂದಾಗ
ಸಂಬಂಧ ಸುಟ್ಟಿತು
ನಮ್ಮ ಕರುಳೇ ನಮಗೆ
ಕೈಕೊಟ್ಟು ನಕ್ಕಿತು.

ಬಿರುಕು ಬಿಟ್ಟ ಗೋಡೆ
ಮುರುಕು ಮಾಳಿಗೆ ಮನೆ
ಮಳೆಯು ಸುಂಟರಗಾಳಿ
ಮನಸಾಗಿ ಮೂಡಿತು.

ಸುಟ್ಟ ಬೂದಿಯ ಮ್ಯಾಲೆ
ಸತ್ತ ಸಂಬಂಧಗಳು
ಕೊಂಡಿ ಕಳಚಿ ಬಿದ್ದ
ಕೈ ಕಾಲು ಮೂಳೆಗಳು.

ಅಕ್ಕ ತಂಗೇರೆಲ್ಲ
ಬಿರಿದ ಬೇಳೆಕಾಳು
ಅಣ್ಣ ತಮ್ಮದಿರೆಲ್ಲ
ಉರಿವ ಹುರುಳಿಕಾಳು.

ಹೆಂಡತಿ ಮಕ್ಕಳಿಗೆ
ಏನ ಹೇಳಲಿ ನಾನು?
ತಟ್ಟೆ ತಂಗಳು ತುಂಬಿ
ತೊನ್ನು ಹತ್ತಿದ ಬಾನು.
*****

One thought on “0

  1. ತುಂಬಾ ಸ್ವಾರಸ್ಯಕರ ವಾಗಿದೆ ಕವಿತೆ
    ಧನ್ಯವಾದಗಳು ಸರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post William Blake ಕಾವ್ಯಸಿದ್ಧಿಯ ಕಲಾಕಾರ
Next post ಟೂ ಬಿಡಲು ಕಾರಣ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…