ಒಂಟಿ ದನಿ

ಗಾಯಗೊಂಡ ಗೋಡೆಗಳೇ ಕಾಳುಬೀಳು ಗೂಡೆಗಳೇ
ಒಡೆದ ಮಡಕೆ ಹರಿದ ತಡಿಕೆ ತುಂಬಿನಿಂತ ನಾಡುಗಳೇ
ನಮ್ಮೊಳಗಿನ ಕರುಳ ಮಾತು ಮುಟ್ಟದಿಲ್ಲಿ ಮಂದಿಗೆ
ಬಾಯಾರಿಕೆ ನೋವಿನುರಿ ತಟ್ಟದಿಲ್ಲಿ ನೀರಿಗೆ

ತಿನ್ನುವನ್ನ ನಂಬುತಿಲ್ಲ ಅಪನಂಬಿಕೆ ಅಗುಳು
ತಟ್ಟೆಗಂತು ಹೊಟ್ಟೆ ತುಂಬ ಅವಮಾನದ ಸಿಡಿಲು
ಬಾಯಲಿಟ್ಟ ತುತ್ತೆಮಗೆ ಕುತ್ತಾಯಿತು ನೋಡಿ
ಮಾತಾಡಿರಿ ಇನ್ನಾದರು ಕಟ್ಟು ಕಳಚಿ ನಿಲ್ಲಿರಿ

ನಮ್ಮ ಮೂಳೆ ಪುಡಿಯ ಕಾಂತಿ ಹೊತ್ತು ಹೊಳೆವ ಮುಖಗಳು
ಬೇಡವಾದ ಗಳಿಗೆಯಲ್ಲೆ ಕೆಂಗಣ್ಣಿನ ನಖಗಳು
ನಮ್ಮ ನಗುವ ಮುಖದ ಮರೆಗೆ ಮಚ್ಚಿನೇಟಿನೊಳಗುದಿ
ಹೆಜ್ಜೆಯಿಟ್ಟ ಸಜ್ಜೆಮನೆಯ ಹೂವು ಉರಿದು ಬೂದಿ.

ಮೌನದಲ್ಲಿ ಕೊಲ್ಲಬೇಡಿ ಕರುಣೆ ನಮಗೆ ಬೇಡ
ಲೆಕ್ಕಬುಕ್ಕು ಬೆಳ್ಳಿಕೋಳ ಅಂಕಗಣಿತ ಬೇಡ
ಜೇಡಜಾಲ ಕೊಡವಿ ನಿಲ್ಲಿ ಹೊಸತು ಮಾತು ಮಸೆಯಿರಿ
ಜೀವಗಾಳಿ ಗೆಳೆಯರಾಗಿ ಮೆದುಳು ಮನಸು ಬೆಸೆಯಿರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮ್ಯಾಕ್ಸಿಂ ಗಾರ್ಕಿಯವರ ‘ತಾಯಿ’ – ಒಂದು ಪ್ರತಿಕ್ರಿಯೆ
Next post ಮಾತೃವಾತ್ಸಲ್ಯ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys