ಒಂಟಿ ದನಿ

ಗಾಯಗೊಂಡ ಗೋಡೆಗಳೇ ಕಾಳುಬೀಳು ಗೂಡೆಗಳೇ
ಒಡೆದ ಮಡಕೆ ಹರಿದ ತಡಿಕೆ ತುಂಬಿನಿಂತ ನಾಡುಗಳೇ
ನಮ್ಮೊಳಗಿನ ಕರುಳ ಮಾತು ಮುಟ್ಟದಿಲ್ಲಿ ಮಂದಿಗೆ
ಬಾಯಾರಿಕೆ ನೋವಿನುರಿ ತಟ್ಟದಿಲ್ಲಿ ನೀರಿಗೆ

ತಿನ್ನುವನ್ನ ನಂಬುತಿಲ್ಲ ಅಪನಂಬಿಕೆ ಅಗುಳು
ತಟ್ಟೆಗಂತು ಹೊಟ್ಟೆ ತುಂಬ ಅವಮಾನದ ಸಿಡಿಲು
ಬಾಯಲಿಟ್ಟ ತುತ್ತೆಮಗೆ ಕುತ್ತಾಯಿತು ನೋಡಿ
ಮಾತಾಡಿರಿ ಇನ್ನಾದರು ಕಟ್ಟು ಕಳಚಿ ನಿಲ್ಲಿರಿ

ನಮ್ಮ ಮೂಳೆ ಪುಡಿಯ ಕಾಂತಿ ಹೊತ್ತು ಹೊಳೆವ ಮುಖಗಳು
ಬೇಡವಾದ ಗಳಿಗೆಯಲ್ಲೆ ಕೆಂಗಣ್ಣಿನ ನಖಗಳು
ನಮ್ಮ ನಗುವ ಮುಖದ ಮರೆಗೆ ಮಚ್ಚಿನೇಟಿನೊಳಗುದಿ
ಹೆಜ್ಜೆಯಿಟ್ಟ ಸಜ್ಜೆಮನೆಯ ಹೂವು ಉರಿದು ಬೂದಿ.

ಮೌನದಲ್ಲಿ ಕೊಲ್ಲಬೇಡಿ ಕರುಣೆ ನಮಗೆ ಬೇಡ
ಲೆಕ್ಕಬುಕ್ಕು ಬೆಳ್ಳಿಕೋಳ ಅಂಕಗಣಿತ ಬೇಡ
ಜೇಡಜಾಲ ಕೊಡವಿ ನಿಲ್ಲಿ ಹೊಸತು ಮಾತು ಮಸೆಯಿರಿ
ಜೀವಗಾಳಿ ಗೆಳೆಯರಾಗಿ ಮೆದುಳು ಮನಸು ಬೆಸೆಯಿರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮ್ಯಾಕ್ಸಿಂ ಗಾರ್ಕಿಯವರ ‘ತಾಯಿ’ – ಒಂದು ಪ್ರತಿಕ್ರಿಯೆ
Next post ಮಾತೃವಾತ್ಸಲ್ಯ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…