Home / ಕವನ / ಕವಿತೆ / ಉದ್ಧಾರಕ

ಉದ್ಧಾರಕ

ಎಲಾ ಇವನ,
ಬೂಟಿನ ಟಪ ಟಪ ಸದ್ದಿನಲ್ಲೂ ಕನ್ನಡದ ಕಂಠವೇ ಕೇಳಿಸುತ್ತಲ್ಲ!
ಅದಕ್ಕೇ ಇರಬೇಕು ನಿನ್ನ ಬೂಟು ಬಿಚ್ಚಿ ಸಿಂಹಾಸನದ ಮೇಲಿಡಲು ತಯಾರು
ನಮ್ಮ ಭರತರು.

ನಿನ್ನ ಬೂಟಿನ ಲೇಸು ಬಿಚ್ಚಲು ಶುರುಹಚ್ಚಿದರೆ ಸಾಕು
ಧಗಧಗ ಕಣಯ್ಯ ಕೆಲವರಿಗೆ ಹೊಟ್ಟೆಕಿಚ್ಚು.
ಅಲ್ಲ, ಯಾರಾದರೂ ಮಾಡಿದ್ದಾರೆಯೆ
ನೀನು ಮಾಡಿದ ಭಾಷಣಗಳ ಕೊಟ್ಟ ಕರೆಗಳ ಸಂಖ್ಯೆಯಷ್ಟು ಸೇವೆ?
ಆ ಹೊಟ್ಟೆಕಿಚ್ಚಿನವರು ಮಂಥರೆಯ ಒಕ್ಕಲೆಂದು ಮುಲಾಜಿಲ್ಲದೆ ಚುಚ್ಚು ;
ಮತ್ತೆ ಹೆಚ್ಚಾದರೆ ಚಚ್ಚು.

ನನಗೆ ಗೊತ್ತು: ಆ ರಾಮ ಸತ್ತು
ಯುಗಗಳಾದ ಮೇಲೆ ನಿನ್ನದೇ ಅವನಂಥ ಪ್ರಪ್ರಥಮ ಅವತಾರ! ಕನ್ನಡಿಗರುದ್ಧಾರ!
ಅಗಸ ಅಂದುಕೊಂಡನೆಂದು ಆತಂಕಪಟ್ಟ ಆ ರಾಮ
ಅಲ್ಪರಂದುಕೊಂಡರೇನಂತೆ ಎಂಬ ನೀನೇ ಸರಿ ಬಹು ಆರಾಮ.
ಕೊಟ್ಟ ಮಾತಿಗೆ ಕಟ್ಟು ಬೀಳುವ ಆ ರಾಮನಿಗೆಲ್ಲೊ
ತಾಕತ್ತಿಲ್ಲ ತೆಗೆ
ನಿನ್ನದೇ ಸರಿ: ರಾವಣಕಾರ್ಯವನ್ನಾದರೂ ಮಾಡಿ
ರಾಮನೆನ್ನಿಸಿಕೊಳ್ಳುವ ಬಗೆ.

ನಿನ್ನ ಹಿಂದೆಯೂ ಇದೆ ಸುಗ್ರೀವ ಸೇನೆ
ಪಾಠ ಕಲಿಸಿ ನಂಬಿಗಸ್ತರನ್ನು ಆರಿಸಿ ಹಾರಿಸಿ
ಪೀಠಗಿಟ್ಟಿಸುವ ನಿನ್ನ ಕಲಿತನಕ್ಕೆ ಕೊಡಬೇಕು
ಮತ್ತೊಂದು ಪೀಠ; ಅವಾರ್ಡು,
ನೀನಾದೆ ಬಿಡು ಬೀದಿಬೀದಿಯ ಬೋರ್ಡು.

ಅಂದಹಾಗೆ ಎಂದು ನಮ್ಮೂರಿಗೆ ನಿನ್ನ ಸವಾರಿ?
ಭಕ್ತರಿಗೆ ಬರೆದಿದ್ದೆಯಂತಲ್ಲ ಸಿದ್ಧಗೊಳಿಸಲು ನಗಾರಿ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...