ದುರ್ಯೋಧನ ಮನಸ್ಸಿಗೆ ತಿದಿಯೊತ್ತಿ
ತನ್ನ ಹೊಟ್ಟೆಕಿಚ್ಚಿನ ಕುಂಡದಲ್ಲಿ ಕಾಯಿಸಿ ಕೆಂಪುಮಾಡಿ
ಕುಟ್ಟುತ್ತಾನೆ ತನಗೆ ಬೇಕಾದಂತೆ.
ಪಗಡೆಪಾಕ ಪಾಂಡವ ಮಂದಿಯ ಮುಸುಡಿಯನ್ನೇ ಮುಕ್ಕಿದಾಗ
ಮೀಸೆ ಕುಣಿಸಿ
ಕೌರವೇಶ್ವರನ ಕಡೆ ನೋಡಿ ಕಣ್ಣಲ್ಲಿ ಕಿಚ್ಚು
ಮುಕ್ಕಳಿಸಿ
ತುಟಿಯಲ್ಲಿ ನಗೆ ತುಳುಕಿಸುತ್ತಾನೆ.
ದೌಪದಿ ‘ಕೃಷ್ಣಾ’ ಎಂದೊರಲಿದಾಗ ಉಷ್ಣಮಾಪಕದಿಂದ
ಮಾನಧನನನ್ನು ಅಳೆಯುತ್ತಾನೆ.
ಫಣಿರಾಜ ಕೇತನನನ್ನು ಕುಣಿವ ಹುಬ್ಬಹುತ್ತದಲ್ಲೇ ಬೆಳಸಿ
ಬುಸ್ಸೆನ್ನಿಸಿ
ಪಾಂಡವರ ಪುನರಾಗಮನಾನಂತರ ಪತಾಕೆ ಹಾರಿಸಲು
ಹುರಿದುಂಬಿಸಿ
ಹಿಮಾಲಯದ ತುಟ್ಟತುದಿಗೆ ಕಳುಹಿಸುತ್ತಾನೆ.
ಛಲದಂಕನಿಗೆಲ್ಲಿಯ ಪ್ರಜ್ಞೆ ಆಮ್ಲಜನಕವಿಲ್ಲದೆ
ಹಿಮಾಲಯ ಹತ್ತಬಾರದೆಂದು!
ಇವನೊಬ್ಬ ಶಕುನಿಯೆಂದು.
*****