ದುಡಿಮೆಗಾರರು

ದುಡಿಮೆಗಾರರಣ್ಣ ನಾವು ದುಡಿಮೆಗಾರರು
ಎದೆಯ ತಂತಿ ಮೀಟಿ ನುಡಿವ ಹಾಡುಗಾರರು ||

ಕೆರೆಕುಂಟೆಗಳ ಕಟ್ಟುತ ನಾವು
ಬೆವರ ನೀರನು ಹರಿಸಿದೆವು
ಕಳೆಯ ಕೀಳುತ ಬೆಳೆಯ ಬೆಳೆಯುತ
ಒಡೆಯನ ಒಡಲನು ತುಂಬಿದೆವು ||

ಚಿಟ್ಟೆಕಂಗಳ ಬಟ್ಟೆಯ ನೇದು
ಬೆತ್ತಲೆ ಬದುಕನು ಉಂಡಿಹೆವು
ಕೊಳೆಯನು ತೊಳೆದು ಕಾಂತಿ ಕೊಟ್ಟವರು
ಬೆಳಕನು ಹುಡುಕಿ ಹೊರಟಿಹೆವು ||

ಕಾದ ಕಬ್ಬಿಣಕೆ ರೂಪಕೊಟ್ಟೆವು
ಸುಖದ ದಿನಕಾಗಿ ಕಾದಿಹೆವು
ಚಳಿ ಮಳೆ ಗಾಳಿಗೆ ಕಂಬಳಿ ನೇದೆವು
ಗಡಗಡ ನಡುಗುತ ಕೂತಿಹೆವು ||

ಸೂರು ಇಲ್ಲದೆ ಊರ ಕಾದೆವು
ಜೇಡರ ಬಲೆಯ ಜೇಡರ ಬದುಕು
ಬಲೆಗಳ ಬೀಸಿ ಮೀನು ಹಿಡಿದೆವು
ಮೀನಾದೆವು ನಾವೇ ಬಿಡುಗಡೆ ಬೇಕು ||

ಅರೆಗಳ ಹೊಡೆದವು ಹೊರೆಗಳ ಹೊತ್ತೆವು
ಮೆಟ್ಟು ಹೊಲೆಯುತ ಹಸಿಯಿತು ಹೊಟ್ಟೆ
ಕಾರ್ಖಾನೆಯ ಹೊಗೆಯಾಗಿ ಬಂದೆವು
ಹಗೆಯಾಯಿತೆ ಬಾಳು, ಬಾರದೆ ಪ್ರೀತಿ? ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ಧ, ಶರಣರು ಮತ್ತು ದಲಿತಪರ ಚಿಂತನೆ
Next post ಬಾಲ ಕಾರ್‍ಮಿಕ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys