ಮುಂಜಾನೆ ಸಮಯ. ಆ ಪುಟ್ಟ ಹುಡುಗ ದೊಡ್ಡ ಗಿಡವನ್ನು ಹತ್ತಿ ಮರದ ಶಾಕೆ ಶಾಕೆಯಲ್ಲಿ ಏನೋ ಹುಡುಕುತಿದ್ದ. ಆಡುವ ವಯಸ್ಸಿನ ಈ ಹುಡುಗ ಬೆಳ್ಳಂಬೆಳಿಗ್ಗೆ ಸಿಲಿಕಿಹಾಕಿಕೊಂಡ ಗಾಳಿಪಟ ಹುಡುಕುತ್ತಿರಬಹುದೆಂದು “ಯಾಕೆ, ಮಗು, ಮರ ಹತ್ತಿದ್ದೀಯಾ?” ಎಂದೆ. ನಾನು ವೃತ್ತ ಪತ್ರಿಕೆಗಳನ್ನು ಮನೆಗಳಿಗೆ ಹಾಕುತ್ತೇನೆ. ಮೂರನೇಯ ಮಾಡಿಗೆಗೆ ಕೈ ಬೀಸಿ ಎಸೆದಾಗ ಪತ್ರಿಕೆ ಮರದ ರೆಂಬೆಯಲ್ಲಿ ಸಿಲಿಕಿಬಿಟ್ಟಿತು. ಪೇಪರ್ ಯಾಕೆ ಹಾಕಿಲ್ಲ ಎಂದು ಬೈಸಿಕೊಳ್ಳೋದು ಬೇಡ ಎಂದು ಮರ ಹತ್ತಿ ಹುಡುಕುತ್ತಿರುವೆ” ಎಂದ. ಗಗನದಲ್ಲಿ ಗಾಳಿಪಟ ಹಾರಿಸಿ ಖುಷಿ ಪಡಬೇಕಾದ ಹುಡುಗ ವೃತ್ತ ಪತ್ರಿಕೆ ತಲುಪಿಸುವ ವೃತ್ತಿಯಲ್ಲಿ ಸಿಲುಕಿ ಮಹಡಿಯ ಎತ್ತರಕ್ಕೆ ಜಿಗಿಯುತ್ತ ಸಾಗಿತ್ತು ಅವನ ಕಿಶೋರ ಬಾಳ್ವೆ.
*****
Related Post
ಸಣ್ಣ ಕತೆ
-
ಬಾಳ ಚಕ್ರ ನಿಲ್ಲಲಿಲ್ಲ
ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಬಲಿ
ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…