ಜನುಮದ ಜೋಡಿ

ಮಾವಿನ ಮರದಡಿನಿಂತ ಸುಂದರಿ
ಮಂದಹಾಸ ಬೀರಿದ ಮದನಾರಿ
ಹೂ ಬಳ್ಳಿಯಂತೆ ಮರವ ನೀ ಆಸರಿಸಿ
ಅರಳಿ ನಲಿವ ಚಲುವೆ ನೀ ಸಿಂಗಾರಿ

ಹುಣ್ಣಿಮೆಯ ಚಂದ್ರನಂತೆ ನಿನ್ನ ಮೊಗವು
ಹರಡಿದೆ ಎಲ್ಲೆಡೆ ಬೆಳದಿಂಗಳ ಹೊನಲು
ಕೋಗಿಲೆಯ ಜೊತೆಗೂಡಿ ನೀ ಹಾಡಲು
ವಸಂತನು ನಿನ್ನ ಜೊತೆಗೆ ಸದಾ ಇರುತಿರಲು

ನಲ್ಲನ ಕಾಣುವ ಕಾತುರವು ಹೆಚ್ಚಾಗಿ
ಅರಳಿದೆ ನಿನ್ನಯ ತನುವು ಮೃದುವಾಗಿ
ಒಳಗೆ ತುಂಬಿದೆ ಒಲವು ಬಲವಾಗಿ
ಚಲುವ ಕಾಯುತ್ತಿರುವ ನಿನಗಾಗಿ

ನಲ್ಲನ ಸೇರಲು ಮೆಲ್ಲನೆ ನೀ ಬರಲು
ಮಲ್ಲಿಗೆಯ ಹಾಸಿ ಚಲುವ ಬರಸೆಳೆಯಲು
ಹುಳಿ ಮಾವು ಕೂಡ ಸಿಹಿಯಾಯ್ತು
ಜೋಡಿ ಜೀವಿಗಳು ಬೆರೆತು ಒಂದಾದ ಹೊತ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತ್ಯಾಗ
Next post ಪರಿವಾರ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…