ದೇಹ ಆತ್ಮ

ಆತ್ಮ ದೇಹಗಳದೇ ಒಂದು ಇತಿಹಾಸ
ಇವುಗಳ ನಡುವಿನ ಹೋರಾಟ ದೊಡ್ಡ ಸಹಾಸ
ಇಂದ್ರಿಯಗಳತ್ತ ಸರಿಯುವುದು ಪ್ರೇಯಸ್ಸು
ಆತ್ಮ ಅನುರಾಗದ ಚಿಂತನೆಯೇ ಶ್ರೇಯಸ್ಸು

ಅನಾತ್ಮನಾಗುವುದೆಂದರೆ ದೇಹ ಭಾವ
ಆತ್ಮ ಅನುಭವಿಸುವಿಕೆ ದೇವ ಭಾವ
ನಿತ್ಯವೂ ನಾವು ನಮ್ಮೊಂದಿಗಿನ ಯುದ್ಧ
ಈ ಅಂತರಂಗದ ದಾಳಿಗೆ ನೀನಿರಬೇಕು ಸಿದ್ಧ

ಪ್ರವತ್ತಿ ಮಾರ್ಗ ಅನುಸರಿಸದರೆ ಅಲ್ಪ ಸುಖ
ನಿವರ್ತ್ತಿ ಮಾರ್ಗ ಪಡೆದರೆ ಸದಾ ಸುಖ
ಬಾಹ್ಯ ಸುಖಗಳೆಲ್ಲ ಅದು ಕೇವಲ ಭ್ರಮೆ
ಅಂತರ ಆನಂದಗಳೆಲ್ಲ ಶಮ ದಮೆ

ಆತ್ಮನಿಗುಂಟು ಹಗಲು ರಾತ್ರಿಗಳು
ಹಗಲಿನಲಿ ಹೇಗಾದರೂ ಭಯವಿಲ್ಲ
ರಾತ್ರಿಗಳ ಹೆದ್ದಾರಿಯಲಿ ಬರೀ ಖಾತ್ರಿಗಳು
ಎಚ್ಚರವಿರದೆ ಆತ್ಮಗೆ ಉಳಿಗಾಲವಿಲ್ಲ

ನಮ್ಮನ್ನೆ ನಾವ ಕಾಪಾಡಿಕೊಳ್ಳಬೇಕು
ಯಾವದನ್ನು ಎಚ್ಚರದಿ ಪಡೆಯಬೇಕು
ನಾವಿಲ್ಲಿ ಶಾಶ್ವತವಾಗಿರಲು ಬಂದಿಲ್ಲ
ಮಾಣಿಕ್ಯ ವಿಠಲನಾಗಲು ದುಡೀಬೇಕು ಇನ್ನೊಂದು ಇಂಚಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಹೆಂಡತಿ
Next post ಹೆಂಗುಸರು ಬಡಗಿ ಕೆಲಸ ಕಲಿಯಬೇಕೆ?

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…