Home / ಕವನ / ತತ್ವಪದ / ದೇಹ ಆತ್ಮ

ದೇಹ ಆತ್ಮ

ಆತ್ಮ ದೇಹಗಳದೇ ಒಂದು ಇತಿಹಾಸ
ಇವುಗಳ ನಡುವಿನ ಹೋರಾಟ ದೊಡ್ಡ ಸಹಾಸ
ಇಂದ್ರಿಯಗಳತ್ತ ಸರಿಯುವುದು ಪ್ರೇಯಸ್ಸು
ಆತ್ಮ ಅನುರಾಗದ ಚಿಂತನೆಯೇ ಶ್ರೇಯಸ್ಸು

ಅನಾತ್ಮನಾಗುವುದೆಂದರೆ ದೇಹ ಭಾವ
ಆತ್ಮ ಅನುಭವಿಸುವಿಕೆ ದೇವ ಭಾವ
ನಿತ್ಯವೂ ನಾವು ನಮ್ಮೊಂದಿಗಿನ ಯುದ್ಧ
ಈ ಅಂತರಂಗದ ದಾಳಿಗೆ ನೀನಿರಬೇಕು ಸಿದ್ಧ

ಪ್ರವತ್ತಿ ಮಾರ್ಗ ಅನುಸರಿಸದರೆ ಅಲ್ಪ ಸುಖ
ನಿವರ್ತ್ತಿ ಮಾರ್ಗ ಪಡೆದರೆ ಸದಾ ಸುಖ
ಬಾಹ್ಯ ಸುಖಗಳೆಲ್ಲ ಅದು ಕೇವಲ ಭ್ರಮೆ
ಅಂತರ ಆನಂದಗಳೆಲ್ಲ ಶಮ ದಮೆ

ಆತ್ಮನಿಗುಂಟು ಹಗಲು ರಾತ್ರಿಗಳು
ಹಗಲಿನಲಿ ಹೇಗಾದರೂ ಭಯವಿಲ್ಲ
ರಾತ್ರಿಗಳ ಹೆದ್ದಾರಿಯಲಿ ಬರೀ ಖಾತ್ರಿಗಳು
ಎಚ್ಚರವಿರದೆ ಆತ್ಮಗೆ ಉಳಿಗಾಲವಿಲ್ಲ

ನಮ್ಮನ್ನೆ ನಾವ ಕಾಪಾಡಿಕೊಳ್ಳಬೇಕು
ಯಾವದನ್ನು ಎಚ್ಚರದಿ ಪಡೆಯಬೇಕು
ನಾವಿಲ್ಲಿ ಶಾಶ್ವತವಾಗಿರಲು ಬಂದಿಲ್ಲ
ಮಾಣಿಕ್ಯ ವಿಠಲನಾಗಲು ದುಡೀಬೇಕು ಇನ್ನೊಂದು ಇಂಚಿಲ್ಲ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...