ಒಂದಿನಿತು ಮರೆತರೆ

ಹರಿಯೆ ನಿನ್ನ ಒಂದಿನಿತು ನಾ ಮರೆತರೆ
ಸಾಗಬೇಕು ನಾ ಅಂಧಕಾರ ಆಗರಕ್ಕೆ
ಮತ್ತೆ ಮತ್ತೆ ಜನ್ಮ ಮರಣಕ್ಕೆ ಅಂಟಿ
ಬಿದ್ದು ನರಳಬೇಕು ಭವದ ಸಾಗರಕ್ಕೆ

ವ್ಯಾಕುಲತೆ ಎನ್ನಲ್ಲಿ ಅಚಲವಾಗಿರಲಿ
ಅದು ನಿನ್ನ ಪಡೆಯುವವರೆಗೆ ಹರಿ
ನೀನೇ ನನ್ನ ಮನದ ಸಂಚಾಲಕನು
ನನ್ನ ಯುಗದ ದಾತಾರ ನೀನೇ ಶ್ರೀ ಹರಿ

ನಾನರಿತೆ ನೀ ಮರೆಯಲಿ ನಿಂತು ನೋಡಿ
ನನ್ನ ಭಾವಗಳಿಗೆ ಪರೆಕಿಸುತ್ತಿರುವೆ
ದೇವರೇ ಈ ಜೀವಾತ್ಮನಿಗೆ ಹೀಗೆ ತಾನು
ಅವಲೋಕಿಸಿದರೆ ಪರಿಹಾರವೇನ ಅರಿವೆ!

ಇನ್ನೂ ಬೇಡನಗೆ ಈ ಭವದ ದುರ್ಗತಿ
ನಿನ್ನ ನಾಮವೊಂದೆ ನಿಚ್ಚ ನಾ ನುಡಿಯಲಿ
ನನ್ನ ಭಾವ ಭಾವಗಳಲಿ ನಿನ್ನ ನೋವವೊಂದೆ
ಹೆಪ್ಪುಗಟ್ಟಿ ಬೀಳಲಿ ಮಾಣಿಕ್ಯ ವಿಠಲ ನುಡಿಯಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಕ್ಕು ಬಿಡು ಒಮ್ಮೆ
Next post ತಿರುಪ್ಪಲ್ಲಾಣ್ಡು- ೧

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys