ನಕ್ಕು ಬಿಡು ಒಮ್ಮೆ

ನಕ್ಕು ಬಿಡು ಒಮ್ಮೆ
ಗುಳಿಬೀಳಲಿ ಕೆನ್ನೆ|
ಸರಿಯಲ್ಲ ಈ ಮೌನ ನಿನಗೆ
ನನ್ನ ಮಾತೇ ಮರೆತು ಹೋಗಿದೆ ನನಗೆ|
ಮನೆ ಮನದ ತುಂಬೆಲ್ಲ
ಹರಿಯುತಿದೆ ಬರಿಯ ಮೌನ…
ನನಗೀಗ ನಿನ್ನ ಮೌನದೇ ವ್ಯಸನ||

ಮರೆತುಬಿಡು ಎಲ್ಲಾ,
ನನ್ನೆಲ್ಲಾ ಒರಟುತನ|
ಅಪ್ಪಿಕೋ ನನ್ನೆಲ್ಲಾ ಒಳ್ಳೆಯಾತನ
ತಾಳಲಾರೆ ನಿನ್ನಯಾ ಈ ಒಂಟಿತನ|
ಮುನಿಸು ಸರಿಸಿ ನಗಬಾರದೇ ರನ್ನ, ನನ್ನ ಚಿನ್ನಾ||

ನಿನ್ನಂತಹ ಚೆಲುವೆಗೆ
ಮೃದು ಮಾತೇ ಬಂಗಾರ|
ಕಿಲಕಿಲ ನೀ ನಗುತಲಿರೆ
ಸಂಭ್ರಮ ಸಂತೋಷ ಸಡಗರ|
ನೀ ನಸುನಗುತ ಮಿನಗುತಿರೆ
ರಸಶೃಂಗಾರ ಸೌಂದರ್ಯ
ಇಲ್ಲದಿರಿನ್ನೆಲ್ಲಿ ಮಾಧುರ್ಯ ||

ಬೆಳಗಾದರೆಮ್ಮ
ಮದುವೆಯಾದ ಸುದಿನ|
ಕರೆದೊಯ್ಯುವೆ
ನಿನ್ನನಂದಿನ ರಸಘಳಿಗೆಯಾಕ್ಷಣ|
ಕೈ ಮುಗಿವೆ ಮನ್ನಿಸೆನ್ನ
ತಮಾಷೆಗೆ ಹಾಗಂದೆ ನಿನಗಿಂತ
ಅವಳೇ ಲಕ್ಷಣಾ|
ಸದಾ ಮುನಿಸುತಿರೆ ನೀ
ಮುಗಿದಂತೆಯೇ ನನ್ನ ಜೀವನ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಬ್ಬರಿಗೆ ಮುದ್ದು ಇನ್ನೊಬ್ಬರಿಗೆ ಗುದ್ದು
Next post ಒಂದಿನಿತು ಮರೆತರೆ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys