ಅವರು ಕೊಡುವ ಸಂಬಳಕ್ಕೆ ಹುಡುಗ ದಿನವೂ ಕಾರು ತೊಳೆದು ಹೊಳಪು ತುಂಬುತ್ತಿದ್ದ. ಯಜಮಾನ ಕಾರಿನ ಬಾಗಿಲು ತೆಗಿಯುವಾಗ ಕೈ ಅಂಟಂಟಾಯಿತು. ಹುಡುಗನಿಗೆ ಕಪಾಳಕ್ಕೆ ಹೊಡೆದು “ಏನು ಸರಿಯಾಗಿ ಒರಿಸಿಲ್ಲವಾ?” ಎಂದರು. “ಅಪ್ಪಾ! ಜಿಲೇಬಿ ಕೈಯಿಂದ ನಾನೇ ಬಾಗಿಲು ತೆರದೆ” ಎಂದಳು ಅವರ ಪುಟ್ಟ ಕುವರಿ. “ಮಗಳೇ! ನನಗೆ ಜಿಲೇಬಿ ತಿನಿಸಲು ಬಂದ ನಿನಗೆ ಒಂದು ಮುದ್ದು, ಅವನು ಅಂಟನ್ನು ಸರಿಯಾಗಿ ವರಿಸಿಲ್ಲ ಅದಕ್ಕೆ ಅವನಿಗೆ ಒಂದು ಗುದ್ದು” ಎಂದು ಬೆನ್ನಿಗೆ ಗುದ್ದಿದರು. “ಅಪ್ಪಾ ಅವನಿಗೆ ಹೊಡೀ ಬೇಡಿ. ಅವನು ಕಾರು ಒರಿಸಿದ್ದಕ್ಕೆ ಜಿಲೇಬಿ ಕೊಡುತ್ತೇನೆ” ಎಂದಿತು ಮಗು ಅನುಕಂಪದಿಂದ. ಮಗುವಿನ ಅನುಕಂಪ ಯಜಮಾನನಿಗೆ ಚಾವಟಿ ಏಟು ಹಾಕಿ ಹೃದಯದ ಬಾಗಿಲನ್ನು ತೆರೆಯಿತು.
*****
Related Post
ಸಣ್ಣ ಕತೆ
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…
-
ಎರಡು…. ದೃಷ್ಟಿ!
ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ಮತ್ತೆ ಬಂದ ವಸಂತ
ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…