ನಶ್ವರದ ತನುವು

ಈ ನಶ್ವರದ ತನುವಿನಲಿ ಎಸೊಂದು ಆಸೆ
ಹೆಜ್ಜೆ ಹೆಜ್ಜೆಗು ತುಂಬುತ್ತಿದೆ ಪಾಪದ ಪಾತ್ರೆ
ಇಂದ್ರಿಯಗಳ ಸುಖಕ್ಕಾಗಿ ನಿತ್ಯ ಚಡಪಡಿಸಿ
ಸ್ವಾರ್ಥ ಸಾಧನೆಗಳಿಂದ ಮಾಡಿದೆ ಜಾತ್ರೆ

ಕಾಣದ ಮನಸು ಇದು ದಾರಿ ತಪ್ಪಿಸುತ್ತಿದೆ
ಮೋಹಕ್ಕಾಗಿ ನಿತ್ಯ ನಿತ್ಯ ದುಡುಕುತ್ತಿದೆ
ಬಿದ್ದು ಹೋಗುವ ಶರೀರದಿ ಸುಖವ ಬಯಸಿ
ಕರ್ಮಗಳ ಸಂಚಯಿಸಿ ಶಾಂತಿ ಹುಡುಕುತ್ತಿದೆ

ಜನುಮ ಜನುಮಗಳಲು ಹೀಗೆ ಮಾಡಿ
ಭೋಗಲಾಲಸೆಗಳಲಿ ಬೆಂಡು ಬೆಂಡಾಗಿದೆ
ದೇವನ ತಾಣದಿಂದ ದೂರ ದೂರ ಸರಿದು
ತನ್ನ ಸತ್ವವ ಮರೆತು ಜಿಗಿವ ಚೆಂಡಾಗಿದೆ

ಏಸು ಯುಗವ ಕಳೆದರೂ ಹೀಗೆ ಸುಖವೇ ಇಲ್ಲ
ಸುಖದ ಮರೀಚಿಕೆ ಭ್ರಮಿಸಿ ಅಪ್ಪುತ್ತಿದೆ
ಹರಿಯ ಧ್ಯಾನವೊಂದೆ ದಾರಿ ಎಲ್ಲವುಗಳಿಗೆ
ಮಾಣಿಕ್ಯ ವಿಠಲನಿಗೆ ನಿಜರೂಪ ಒಪ್ಪುತ್ತಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ಪಿತೃದೇವರುಗಳೇ
Next post ಸಂಜೆ ಹಾಡು – ಚೌಪಟ ಗುಲಾಮ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys