Home / ಕವನ / ಕವಿತೆ / ಬೆಳಕನು ಅರಸಿ ಹೊರಟೆ

ಬೆಳಕನು ಅರಸಿ ಹೊರಟೆ

ಬೆಳಕನು ಅರಸಿ ಹೊರಟೆ ನಾ
ಕತ್ತಲ ಮನೆಯಿಂದ
ಕಂಡಿತು ಕೊನೆಗೂ ಬೆಳಕು ಅಲ್ಲಿ
ಬುದ್ಧನ ಹೆಸರಿಂದ
ಬುದ್ಧನ ಹೆಸರಿಂದ;
ಅರಿವಿನ ಉಸಿರಿಂದ /ಪ//

ದೇವರ ಬಗ್ಗೆ ಒಂದೂ
ಆಡಲಿಲ್ಲ ಮಾತು
ಗಾಳಿಯೊಡನೆ ಗುದ್ದಾಡಿ
ಕೂರಲಿಲ್ಲ ಬೆವೆತು
ನನ್ನ ಕುರಿತು ಮಾತಾಡಿದ;
ಅದರಲ್ಲೆ ಜಗ ತೋರಿದ

ಮೊಲದ ಕೊಂಬನು ಕುರಿತು
ನಡೆಯುತಿಹುದು ಚರ್ಚೆ
ಅದರಲ್ಲೇ ಬಣ ನೂರು
ಕಡೆಗೋ ನನಗೆ ಮೂರ್ಛೆ
ಬುದ್ಧ ಅಲ್ಲಿ ಎಚ್ಚರಿಸಿದ;
ಮೊಲಕೆ ಕೊಂಬು ಉಂಟೆ?
ಮೊಲಕೆ ಕೊಂಬು ಉಂಟೆ??

ಹುಟ್ಟಿದ ಮಾನವನಾಗಿ – ಬುದ್ಧ
ಸತ್ತನು ಮಾನವನಾಗಿ
ಆಡಿದ ಮಾನವನಾಗಿ – ದೀಪ
ಹಚ್ಚಿದ ಮಾನವನಾಗಿ
ಅದಕೆ ಈತ ಮಿಗಿಲು;
ಬುವಿಗೆ ಬೇಕು ಮುಗಿಲು

(ಅಗತ್ಯವಿದ್ದರೆ ಹಾಡುಗಾರಿಕೆಯಲ್ಲಿ ಈ ಕೆಳಗಿನ ಎರಡು ಸಾಲುಗಳನ್ನು ಪಲ್ಲವಿಗೆ ಮೊದಲು ಹಾಡಿಕೊಳ್ಳಬಹುದು –
ಬುದ್ಧ…. ಪ್ರಬುದ್ಧ….
ಬುದ್ಧ…. ಬೆಳಕಿಗೆ ಬದ್ಧ….)
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...