ಬೆಳಕನು ಅರಸಿ ಹೊರಟೆ

ಬೆಳಕನು ಅರಸಿ ಹೊರಟೆ ನಾ
ಕತ್ತಲ ಮನೆಯಿಂದ
ಕಂಡಿತು ಕೊನೆಗೂ ಬೆಳಕು ಅಲ್ಲಿ
ಬುದ್ಧನ ಹೆಸರಿಂದ
ಬುದ್ಧನ ಹೆಸರಿಂದ;
ಅರಿವಿನ ಉಸಿರಿಂದ /ಪ//

ದೇವರ ಬಗ್ಗೆ ಒಂದೂ
ಆಡಲಿಲ್ಲ ಮಾತು
ಗಾಳಿಯೊಡನೆ ಗುದ್ದಾಡಿ
ಕೂರಲಿಲ್ಲ ಬೆವೆತು
ನನ್ನ ಕುರಿತು ಮಾತಾಡಿದ;
ಅದರಲ್ಲೆ ಜಗ ತೋರಿದ

ಮೊಲದ ಕೊಂಬನು ಕುರಿತು
ನಡೆಯುತಿಹುದು ಚರ್ಚೆ
ಅದರಲ್ಲೇ ಬಣ ನೂರು
ಕಡೆಗೋ ನನಗೆ ಮೂರ್ಛೆ
ಬುದ್ಧ ಅಲ್ಲಿ ಎಚ್ಚರಿಸಿದ;
ಮೊಲಕೆ ಕೊಂಬು ಉಂಟೆ?
ಮೊಲಕೆ ಕೊಂಬು ಉಂಟೆ??

ಹುಟ್ಟಿದ ಮಾನವನಾಗಿ – ಬುದ್ಧ
ಸತ್ತನು ಮಾನವನಾಗಿ
ಆಡಿದ ಮಾನವನಾಗಿ – ದೀಪ
ಹಚ್ಚಿದ ಮಾನವನಾಗಿ
ಅದಕೆ ಈತ ಮಿಗಿಲು;
ಬುವಿಗೆ ಬೇಕು ಮುಗಿಲು

(ಅಗತ್ಯವಿದ್ದರೆ ಹಾಡುಗಾರಿಕೆಯಲ್ಲಿ ಈ ಕೆಳಗಿನ ಎರಡು ಸಾಲುಗಳನ್ನು ಪಲ್ಲವಿಗೆ ಮೊದಲು ಹಾಡಿಕೊಳ್ಳಬಹುದು –
ಬುದ್ಧ…. ಪ್ರಬುದ್ಧ….
ಬುದ್ಧ…. ಬೆಳಕಿಗೆ ಬದ್ಧ….)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ನಿನ್ನ ಪ್ರೀತಿ
Next post ಆತ್ಮಸಾಕ್ಷಿಯ ಆತ್ಮಹತ್ಯೆ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…