ಬೆಳಕನು ಅರಸಿ ಹೊರಟೆ

ಬೆಳಕನು ಅರಸಿ ಹೊರಟೆ ನಾ
ಕತ್ತಲ ಮನೆಯಿಂದ
ಕಂಡಿತು ಕೊನೆಗೂ ಬೆಳಕು ಅಲ್ಲಿ
ಬುದ್ಧನ ಹೆಸರಿಂದ
ಬುದ್ಧನ ಹೆಸರಿಂದ;
ಅರಿವಿನ ಉಸಿರಿಂದ /ಪ//

ದೇವರ ಬಗ್ಗೆ ಒಂದೂ
ಆಡಲಿಲ್ಲ ಮಾತು
ಗಾಳಿಯೊಡನೆ ಗುದ್ದಾಡಿ
ಕೂರಲಿಲ್ಲ ಬೆವೆತು
ನನ್ನ ಕುರಿತು ಮಾತಾಡಿದ;
ಅದರಲ್ಲೆ ಜಗ ತೋರಿದ

ಮೊಲದ ಕೊಂಬನು ಕುರಿತು
ನಡೆಯುತಿಹುದು ಚರ್ಚೆ
ಅದರಲ್ಲೇ ಬಣ ನೂರು
ಕಡೆಗೋ ನನಗೆ ಮೂರ್ಛೆ
ಬುದ್ಧ ಅಲ್ಲಿ ಎಚ್ಚರಿಸಿದ;
ಮೊಲಕೆ ಕೊಂಬು ಉಂಟೆ?
ಮೊಲಕೆ ಕೊಂಬು ಉಂಟೆ??

ಹುಟ್ಟಿದ ಮಾನವನಾಗಿ – ಬುದ್ಧ
ಸತ್ತನು ಮಾನವನಾಗಿ
ಆಡಿದ ಮಾನವನಾಗಿ – ದೀಪ
ಹಚ್ಚಿದ ಮಾನವನಾಗಿ
ಅದಕೆ ಈತ ಮಿಗಿಲು;
ಬುವಿಗೆ ಬೇಕು ಮುಗಿಲು

(ಅಗತ್ಯವಿದ್ದರೆ ಹಾಡುಗಾರಿಕೆಯಲ್ಲಿ ಈ ಕೆಳಗಿನ ಎರಡು ಸಾಲುಗಳನ್ನು ಪಲ್ಲವಿಗೆ ಮೊದಲು ಹಾಡಿಕೊಳ್ಳಬಹುದು –
ಬುದ್ಧ…. ಪ್ರಬುದ್ಧ….
ಬುದ್ಧ…. ಬೆಳಕಿಗೆ ಬದ್ಧ….)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ನಿನ್ನ ಪ್ರೀತಿ
Next post ಆತ್ಮಸಾಕ್ಷಿಯ ಆತ್ಮಹತ್ಯೆ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…