ಬೆಳಕನು ಅರಸಿ ಹೊರಟೆ

ಬೆಳಕನು ಅರಸಿ ಹೊರಟೆ ನಾ
ಕತ್ತಲ ಮನೆಯಿಂದ
ಕಂಡಿತು ಕೊನೆಗೂ ಬೆಳಕು ಅಲ್ಲಿ
ಬುದ್ಧನ ಹೆಸರಿಂದ
ಬುದ್ಧನ ಹೆಸರಿಂದ;
ಅರಿವಿನ ಉಸಿರಿಂದ /ಪ//

ದೇವರ ಬಗ್ಗೆ ಒಂದೂ
ಆಡಲಿಲ್ಲ ಮಾತು
ಗಾಳಿಯೊಡನೆ ಗುದ್ದಾಡಿ
ಕೂರಲಿಲ್ಲ ಬೆವೆತು
ನನ್ನ ಕುರಿತು ಮಾತಾಡಿದ;
ಅದರಲ್ಲೆ ಜಗ ತೋರಿದ

ಮೊಲದ ಕೊಂಬನು ಕುರಿತು
ನಡೆಯುತಿಹುದು ಚರ್ಚೆ
ಅದರಲ್ಲೇ ಬಣ ನೂರು
ಕಡೆಗೋ ನನಗೆ ಮೂರ್ಛೆ
ಬುದ್ಧ ಅಲ್ಲಿ ಎಚ್ಚರಿಸಿದ;
ಮೊಲಕೆ ಕೊಂಬು ಉಂಟೆ?
ಮೊಲಕೆ ಕೊಂಬು ಉಂಟೆ??

ಹುಟ್ಟಿದ ಮಾನವನಾಗಿ – ಬುದ್ಧ
ಸತ್ತನು ಮಾನವನಾಗಿ
ಆಡಿದ ಮಾನವನಾಗಿ – ದೀಪ
ಹಚ್ಚಿದ ಮಾನವನಾಗಿ
ಅದಕೆ ಈತ ಮಿಗಿಲು;
ಬುವಿಗೆ ಬೇಕು ಮುಗಿಲು

(ಅಗತ್ಯವಿದ್ದರೆ ಹಾಡುಗಾರಿಕೆಯಲ್ಲಿ ಈ ಕೆಳಗಿನ ಎರಡು ಸಾಲುಗಳನ್ನು ಪಲ್ಲವಿಗೆ ಮೊದಲು ಹಾಡಿಕೊಳ್ಳಬಹುದು –
ಬುದ್ಧ…. ಪ್ರಬುದ್ಧ….
ಬುದ್ಧ…. ಬೆಳಕಿಗೆ ಬದ್ಧ….)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ನಿನ್ನ ಪ್ರೀತಿ
Next post ಆತ್ಮಸಾಕ್ಷಿಯ ಆತ್ಮಹತ್ಯೆ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys