ಹೇಗಿದ್ದ ನಗರ ….?

ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ – ಉದ್ಯಾನ ನಗರ
ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ //ಪ//

ಊರಗಲದ ಫುಟ್‌ಪಾತನ್ನು
ರಸ್ತೆಯು ನುಂಗಿತಣ್ಣ
ವಿಸ್ತರಿಸಿದ ಈ ರಸ್ತೆಯನು
ಟ್ರಾಫಿಕ್ ನುಂಗಿತಣ್ಣ

ಕಿವಿಗಡಚಿಕ್ಕುವ ಹಾರನ್ನು
ಕಿವಿಯನು ತುಂಬಿತಣ್ಣ
ಆದರೂ ಚಲಿಸದ ವೆಹಿಕಲ್ಸು
ಕಣ್ಣನು ತುಂಬಿತಣ್ಣ

ಕಳೆವುದು ಎಷ್ಟು ಆಯಸ್ಸು
ಮನೆಯೊಳಗೆ ನೌಕರಿಯೊಳಗೆ
ಬೇಡವೆ ಹೇಳಿ ಸಿಂಹಪಾಲು?
ರಸ್ತೆ ಮೇಲಿನ ಪಯಣಕ್ಕೆ

ಆಗಿದೆ ನಗರ ಕಿಷ್ಕಿಂದೆ
ಆದರು ಗುಳೆ ಎದ್ದಿದೆ ಹಳ್ಳಿ
ಉಳಿದಿಹ ನಾಡಲಿ ಸ್ಮಶಾನ ಮೌನ
ಕೇಳುವರಾರಿಲ್ಲಿ?

ಮೀರುವರು ರಸ್ತೆಯ ನಿಯಮ
ಲಂಚಕೆ ತಯಾರು, ದಂಡಕ್ಕೂ
ಪರಿಹಾರ ಎಲ್ಲಿದೆ ಹೇಳಿ?
ಕಾಯ್ದೆಯಲೊ ಜಾಗೃತಿಯಲ್ಲೊ

ಬೀದಿಗೆ ಚಾಚಿದೆ ಅಂಗಡಿಯು
ಕೇಳುವರಾರಿಲ್ಲ
ಅಕ್ರಮ ಸಕ್ರಮ ದಾರಿಯಲಿ
ಫುಟ್‌ಪಾತಿಗೂ ನೆಲೆಯಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಕೆ ನೀನು ಕಾಡುವೆ
Next post ಬೀದಿಗೆ ಬಂದ ಜಾತಿವಾದ-ಕೋಮುವಾದ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…