ಹೇಗಿದ್ದ ನಗರ ….?

ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ – ಉದ್ಯಾನ ನಗರ
ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ //ಪ//

ಊರಗಲದ ಫುಟ್‌ಪಾತನ್ನು
ರಸ್ತೆಯು ನುಂಗಿತಣ್ಣ
ವಿಸ್ತರಿಸಿದ ಈ ರಸ್ತೆಯನು
ಟ್ರಾಫಿಕ್ ನುಂಗಿತಣ್ಣ

ಕಿವಿಗಡಚಿಕ್ಕುವ ಹಾರನ್ನು
ಕಿವಿಯನು ತುಂಬಿತಣ್ಣ
ಆದರೂ ಚಲಿಸದ ವೆಹಿಕಲ್ಸು
ಕಣ್ಣನು ತುಂಬಿತಣ್ಣ

ಕಳೆವುದು ಎಷ್ಟು ಆಯಸ್ಸು
ಮನೆಯೊಳಗೆ ನೌಕರಿಯೊಳಗೆ
ಬೇಡವೆ ಹೇಳಿ ಸಿಂಹಪಾಲು?
ರಸ್ತೆ ಮೇಲಿನ ಪಯಣಕ್ಕೆ

ಆಗಿದೆ ನಗರ ಕಿಷ್ಕಿಂದೆ
ಆದರು ಗುಳೆ ಎದ್ದಿದೆ ಹಳ್ಳಿ
ಉಳಿದಿಹ ನಾಡಲಿ ಸ್ಮಶಾನ ಮೌನ
ಕೇಳುವರಾರಿಲ್ಲಿ?

ಮೀರುವರು ರಸ್ತೆಯ ನಿಯಮ
ಲಂಚಕೆ ತಯಾರು, ದಂಡಕ್ಕೂ
ಪರಿಹಾರ ಎಲ್ಲಿದೆ ಹೇಳಿ?
ಕಾಯ್ದೆಯಲೊ ಜಾಗೃತಿಯಲ್ಲೊ

ಬೀದಿಗೆ ಚಾಚಿದೆ ಅಂಗಡಿಯು
ಕೇಳುವರಾರಿಲ್ಲ
ಅಕ್ರಮ ಸಕ್ರಮ ದಾರಿಯಲಿ
ಫುಟ್‌ಪಾತಿಗೂ ನೆಲೆಯಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಕೆ ನೀನು ಕಾಡುವೆ
Next post ಬೀದಿಗೆ ಬಂದ ಜಾತಿವಾದ-ಕೋಮುವಾದ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys