ಹೇಗಿದ್ದ ನಗರ ….?

ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ – ಉದ್ಯಾನ ನಗರ
ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ //ಪ//

ಊರಗಲದ ಫುಟ್‌ಪಾತನ್ನು
ರಸ್ತೆಯು ನುಂಗಿತಣ್ಣ
ವಿಸ್ತರಿಸಿದ ಈ ರಸ್ತೆಯನು
ಟ್ರಾಫಿಕ್ ನುಂಗಿತಣ್ಣ

ಕಿವಿಗಡಚಿಕ್ಕುವ ಹಾರನ್ನು
ಕಿವಿಯನು ತುಂಬಿತಣ್ಣ
ಆದರೂ ಚಲಿಸದ ವೆಹಿಕಲ್ಸು
ಕಣ್ಣನು ತುಂಬಿತಣ್ಣ

ಕಳೆವುದು ಎಷ್ಟು ಆಯಸ್ಸು
ಮನೆಯೊಳಗೆ ನೌಕರಿಯೊಳಗೆ
ಬೇಡವೆ ಹೇಳಿ ಸಿಂಹಪಾಲು?
ರಸ್ತೆ ಮೇಲಿನ ಪಯಣಕ್ಕೆ

ಆಗಿದೆ ನಗರ ಕಿಷ್ಕಿಂದೆ
ಆದರು ಗುಳೆ ಎದ್ದಿದೆ ಹಳ್ಳಿ
ಉಳಿದಿಹ ನಾಡಲಿ ಸ್ಮಶಾನ ಮೌನ
ಕೇಳುವರಾರಿಲ್ಲಿ?

ಮೀರುವರು ರಸ್ತೆಯ ನಿಯಮ
ಲಂಚಕೆ ತಯಾರು, ದಂಡಕ್ಕೂ
ಪರಿಹಾರ ಎಲ್ಲಿದೆ ಹೇಳಿ?
ಕಾಯ್ದೆಯಲೊ ಜಾಗೃತಿಯಲ್ಲೊ

ಬೀದಿಗೆ ಚಾಚಿದೆ ಅಂಗಡಿಯು
ಕೇಳುವರಾರಿಲ್ಲ
ಅಕ್ರಮ ಸಕ್ರಮ ದಾರಿಯಲಿ
ಫುಟ್‌ಪಾತಿಗೂ ನೆಲೆಯಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಕೆ ನೀನು ಕಾಡುವೆ
Next post ಬೀದಿಗೆ ಬಂದ ಜಾತಿವಾದ-ಕೋಮುವಾದ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…