ತಬ್ಬಲಿ ಮಗು

ಬೋಳು ಮರಗಳ ಮೇಲೆ
ಗೋಳು ಕಾಗೆಯ ಕೂಗು
ಸಂತೆಗದ್ದಲದ ನಡುವೆ
ಚಿಂತೆ-ತಬ್ಬಲಿ ಮಗು!

ಇತಿಹಾಸ ಗೋರಿಯ ಮೇಲೆ
ಉಸಿರಾಡುವ ಕನಸಿನ ಬಾಲೆ
ತಂತಿ ಸೆಳೆತದ ಕರ್ಣ
ಕುಂತಿ ಕರುಳಿನ ಮಾಲೆ

ಸುತ್ತ ಹುತ್ತದ ಕೋಟೆ
ಒಳಗೆ ಉಗುರಿನ ಬೇಟೆ
ಗೀರು ಚೀರುವ ಗೋಡೆ
ಒಸರುತ್ತಿದೆ ನೆತ್ತರು, ನೆಲವೆಲ್ಲ ಅತ್ತರು.
*****

One thought on “0

  1. ನಿಮ್ಮ ಕವಿತೆ ಯೊಳಗೆ ಇಣುಕಿದರೆ ಕಾಣುತಿದೆ ಧರೆಯ ಬರ . ಹೊರಲಾಗದೆ ಹೊಣೆ. ಇರಿಯುತಿದೆ ವಿವೇಚನೆ. ಕಾಣದಾಗಿದೆ ದಾರಿ ಬಂದು ಕೂತಿದೆ ಮಾರಿ .,. ಮಾರಾಟ ವಾಗುತ್ತಿದೆ ದೇಶ ಉಳಿಸಲು ಬರಲೋಲ್ಲ ಈಶ
    ಭರವಸೆಯ ಬೆಳಕು ಬರಬಹುದು ಬದುಕು ಬದುಕು ಬದುಕು ತೊಲಗಲಿ ಹುಳುಕು.

Leave a Reply to Pratibha dp Doddamane parasappa Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿಯ ನಂಬಿದವರಿಗೆ
Next post ಕಟುಕ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys