ಹೊಲೆಯ

ಶುಚಿಯು ನಗುತಲೆ ಹಿಂದೆ ಬರ್‍ಪಳು
ಉಚಿತ ಮಾರ್‍ಗವು ತನಗಿದೆನುತಲೆ
ಸಚಿವ! ಹೊಲೆಯನು ಹಿರಿಯ ಪೊರೆವನು ಹೊರಟು ನಿಂದೆಡೆಗೆ.

ಸಚಿವ ಬಾ ಧರೆಯೆಲ್ಲವಳೆಯುವ…….
ಶುಚಿಯ ಜಾನ್ಹವಿ ಹರಿದು ಶ್ರೀ ಹರಿ
ಗುಚಿತದಾಸನವಾಗಲೀಧರೆ ಪರೆಯ ಬಾ ಧೊರೆಯೆ!

ಚಿಗುರಿ ಬೆಳೆಯದ ಮನಗಳಿಲ್ಲಿವೆ
ಚಿಗಿದು ಉರಿಯದ ಭಾವವಿಲ್ಲಿದೆ
ಮೃಗದ ಗವಿಯೊಲು! ಹೊಲಸ ನಿಟ್ಟಿದೆ ಹೊಲೆಯ ನಿಲ್ಲದೆಲೆ.

ನಗುವ ತಾಣವ ಕಂಡೆಯಾದರೆ!
ಹೊಗೆಯು ಸುತ್ತಿರೆ ಜಗದ ಕಳೆಯನು
ಅಗಗೊ! ಹೊಲೆಯನ ಹೆಜ್ಜೆ ಹರಿದಿದೆ ನಾಡಿನುದ್ಧರಕೆ!

ತವಕ ಪಡದಿರು ಧರೆಯ ದೂರಿಗೆ,
ಭವದರಜದಲಿ ಹೊರಳಿ ಆಳುವ!
ಇವರ ಪುಣ್ಯಕೆ ನಾವು ಕಾರಣರೆನಿಸಿ ಬಾಳುವಣ.

ಭವದ ನಂಜನು ಕುಡಿದು ಕಾಯ್ದನ
ಶಿವನ ಸಮ್ಮುಖದಲ್ಲಿ ಹಿರಿಯನು
ಭವಣೆಯೆನ್ನದಲವನ ಸೃಷ್ಠಿಯ ಶುಭ್ರ ಮಾಡಿದವ!

ನಾಡ ಕುವರರ ಮಾಡೆ ಪರರನು
ನೋಡು ನೋಡವು ಹಿರಿಯರಾರ್ಜನೆ!
ಖೋಡಿ ಖೂಳರ ಸೇರುತಿರ್ಪವು ಇಹಕೆ ಪರಕಿರದೆ!

ಮಾಡದಿರು ಹುಲುಮನುಜ! ಭೇದವ!
ಆಡದಿರು ಪರ ಪರೆಯನೆನುತಲೆ!
ನಾಡ ಮಂಗಳಕಾರಿ! ನಿನ್ನನು ದೂರದೂರೆನುವ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೦
Next post ನವಿಲುಗರಿ – ೧೩

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…