Home / ಕವನ / ಅನುವಾದ / ಪ್ರೇಮ

ಪ್ರೇಮ

ಪ್ರೇಮ! ವಿಚಿತ್ರ ವಸ್ತುವಾಗಿದೆ ಜಗದಿ! ಅದ್ಬುತ ಶಕ್ತಿ ನಿಧಾನ.
ನಿದ್ರೆಯಲದು ಜಾಗೃತಿ! ಜಾಗೃತಿಯಲ್ಲಿ ಅಪ್ಪುದು ನಿದ್ರೆ ಸಮಾನ.
ಪ್ರೇಮದಮಲು ಮುಸುಕುವುದಾರಿಗೆ ಅಕ್ಷಿಗಳಲಿ ಉನ್ಮತ್ತ
ಎಚ್ಚರ ನಿದ್ರಾ ಎರಡೂ ಅವರಿಗೆ ಆಗಿ ಹೋಗುವುದೈ ದೂರ!

ಗಂಧವಿಲ್ಲದ ಹೂವಿನಂತೆಯೆ ಚಂದ್ರ ಚಂದ್ರಿಕಾಹೀನ!
ಹಾಗೇ ನೀರಸ ಮಾನವ ಜೀವನವಿದ್ದರೆ ಪ್ರೇಮ ವಿಹೀನ
ಪ್ರೇಮ ಸ್ವರ್ಗವು! ಸ್ವರ್ಗ ಪ್ರೇಮವು! ಪ್ರೇಮ ಅಶಂಕ ಅಶೋಕ.
ಈಶ್ವರಪ್ರತಿಬಿಂಬ ಪ್ರೇಮವು! ಪ್ರೇಮ ಹೃದಯದಾಲೋಕ.

ಜಗದಲಿ ಬಂದರೆ ಪೀಡೆ ಸರ್ವವೂ ಅಪ್ಪುದು ಹೃದಯ ಅಧೀರ!
ಆದರೆ ಸಿಹಿಸಿಹಿ ಸೊಗಸುವುದೈ ಎದೆಯಲ್ಲಿ ಪ್ರೇಮದಾ ಪೀಡಾ.
ವ್ಯಾಕುಲವೆನಿಸದು ಪ್ರೇಮ ಪೀಡೆಯಿಂ ಯಾರದದೆಂದೂ ಪ್ರಾಣ
ಭಾಗ್ಯಹೀನ ನವ ನಿಷ್ಟುರನೈ ನಿಜ ಎದೆಯವನದು ಪಾಷಾಣ.

ಯಾರ ಮೇಲೆ ದಯಾದೃಷ್ಟಿ ಬೀರ್‍ವನೋ ಮಂಗಳ ಮಯ ಭಗವಾನ!
ಪೂರ್ಣ ಪ್ರೇಮ ಪೀಡೆಯಲಿ ಹಿಂಡುವನವನು ಆತನ ಪ್ರಾಣ!
ಯಾರಿಗೆ ಅನುಭವವಾಗಿದೆ ಪ್ರೇಮದ ಪೀಡೆಯ ಬಹು ಆನಂದ
ಆತನಿಗಿಂತ ದೊಡ್ಡವನಾರು ಸುಖಿ! ಇಹದಲಿ ಸ್ವಚ್ಛಂದ.

ಪ್ರೇಮೋನ್ಮತ್ತ ಹೃದಯದಿ ಇರದೈ! ಹೀನ ವಿರೋಧ ಕ್ರೋಧ!
ದುರ್ಗುಣಕಾಗದು ಪ್ರೇಮದ ಪಥದಲಿ ಮಾಡುವುದು ಅವರೋಧ!
ಪ್ರೇಮ ವೇದನಾಮುಗ್ಧ ಜನ (ಇಹರೈ) ಸುಖನಿದ್ರಾಮಯಮತ್ತ
ಪ್ರೇಮದ ಬೆಳಕನು ಕಣ್ಣಲ್ಲಿ ತುಂಬಿ ನೋಳ್ಪರು ಜಗವ ಸಮಸ್ತ!

ಹೂವಿನ ಮಂಜರಿ ಪಲ್ಲವದಲ್ಲಿ ಪ್ರಿಯತಮ ರೂಪ ವಿಲೋಕೀ!
ತುಂಬಿ ಹರಿವುದೈ ಮಹಾಮೋದದಿಂ ಪ್ರೇಮಿಯ ಎದೆತುಳಿಕೀ!
ನೋಡಿ ಮೊಗ್ಗನು ಮಾಡುವ ನಾತನು ಉಸ್ಮತ್ತ ಪ್ರಲಾಪ
ಎಷ್ಟರ ತನಕ ಅಡಗುವೆ ನೀನೀ ದಳಗಳ ನಡುವೆ ಗೋಪ!

ಪ್ರೇಮ ತುಂಬಿಹ ಅರ್ಧ ತೆರೆದಿಹ ಕಣ್ಣಲಿ ಶಶಿಯ ಸಹಾಸ
ಪ್ರೇಮಿಯು ಕಂಡು ಭ್ರಮಿಸುವನಾಗ ಪ್ರಿಯತಮ ಹಾಸ ವಿಕಾಸ.
ಸರ್ವವು ಆತಗೆ ಪ್ರೇಮದ ಮಾಯೆಯು ಸಚರಾಚರ ಸಂಸಾರ
ಪ್ರೇಮ ಮಗ್ನನು ನಿತ್ಯ ನಾನು ಮಾಳ್ಪನು ಪ್ರೇಮೋದ್ಯಾನ ವಿಹಾರ!

ಪ್ರೇಮವೇದನಾ ವ್ಯಥಿತ ಹೃದಯದಿಂ ಮಧಿತ ಪ್ರಮೋದ್ಗಾರ
ಉಕ್ಕಿ ಭೂಮಿಯ ತುಂಬಿಬಿಡುವುದೈ! ನವಜೀವನ ಉತ್ಸಾಹ!
ಕರುಣಾಭರದೀ ಪ್ರೇಮ ಕಂಬನಿ ಸುರಿವುದು ಸುಧೆಯ ಸಮಾನ
ನೆನೆಸುತ ದಯೆಯ ಬೇರನು ಕೊಡುವುದು ಜಗಕಾಶ್ರಯದಾನ!

ಜನಜನದಲ್ಲಿ ಪ್ರೇಮೀಕಾಂಬನು ಪ್ರಿಯತಮನಾಕಾಂತಿ
ಅದರಿಂದಾತಗೆ ಲೋಕಸೇವೆಯೋಳ್ ದೊರಕುವದು ಅತಿಶಾಂತಿ.
ಪೀಡಿತನಾಪೀಡೇ-ಕ್ಷುದಿತನ ಹಸಿವೇ-ತೃಷಿತನ ದಾಹ-
ಕಳೆದು ನಿರಾಶ್ರಯ-ಆಶಾರಹಿತಗೆ ಕೊಡುವನು ಉತ್ಸಾಹಾ!

ಕೃಶಿತ ಜಾತಿಯ ಉನ್ನತಿಗೈಸಿ ನಿವಾರಿಸಿ ಕಂಟಕ ದೂರ
ಪ್ರೇಮೀ ಪರಮ ತೃಪ್ತನಪ್ಪನು ಆಹ್ಲಾದಿತ ಭರಪೂರ.
ದಯೆ! ಕರ್ತವ್ಯ! ಎಂಬುದಿಲ್ಲ-ಅಲ್ಲ! ಆತನದಾರಿಗು ದಾಸ!
ಆಶಿಪನಾತನು ಸದಾ ನೋಡಲು ಪ್ರಿಯತಮ ರೂಪ ವಿಕಾಸ.
ರೂಪವೆಲ್ಲಿದೆ? ಆರ್ತಮುಖದಲಿ- ಪ್ರಕೃತಹರ್ಷದ ಹಾಸ
ಆಗುವುದೆಂದು! ಉದಿತವಾಗಲೇ ಪ್ರಿಯತಮ ರೂಪವಿಕಾಸ

[ಶ್ರೀ ಕವಿವರ ರಾಮನರೇಶಜೀ ತ್ರಿಪಾಠಿಯವರ ಹಿಂದೀ ‘ಮಿಲನ’ ದಿಂದ].
*****
ಅನುವಾದ

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...