ಪ್ರೇಮ

ಪ್ರೇಮ! ವಿಚಿತ್ರ ವಸ್ತುವಾಗಿದೆ ಜಗದಿ! ಅದ್ಬುತ ಶಕ್ತಿ ನಿಧಾನ.
ನಿದ್ರೆಯಲದು ಜಾಗೃತಿ! ಜಾಗೃತಿಯಲ್ಲಿ ಅಪ್ಪುದು ನಿದ್ರೆ ಸಮಾನ.
ಪ್ರೇಮದಮಲು ಮುಸುಕುವುದಾರಿಗೆ ಅಕ್ಷಿಗಳಲಿ ಉನ್ಮತ್ತ
ಎಚ್ಚರ ನಿದ್ರಾ ಎರಡೂ ಅವರಿಗೆ ಆಗಿ ಹೋಗುವುದೈ ದೂರ!

ಗಂಧವಿಲ್ಲದ ಹೂವಿನಂತೆಯೆ ಚಂದ್ರ ಚಂದ್ರಿಕಾಹೀನ!
ಹಾಗೇ ನೀರಸ ಮಾನವ ಜೀವನವಿದ್ದರೆ ಪ್ರೇಮ ವಿಹೀನ
ಪ್ರೇಮ ಸ್ವರ್ಗವು! ಸ್ವರ್ಗ ಪ್ರೇಮವು! ಪ್ರೇಮ ಅಶಂಕ ಅಶೋಕ.
ಈಶ್ವರಪ್ರತಿಬಿಂಬ ಪ್ರೇಮವು! ಪ್ರೇಮ ಹೃದಯದಾಲೋಕ.

ಜಗದಲಿ ಬಂದರೆ ಪೀಡೆ ಸರ್ವವೂ ಅಪ್ಪುದು ಹೃದಯ ಅಧೀರ!
ಆದರೆ ಸಿಹಿಸಿಹಿ ಸೊಗಸುವುದೈ ಎದೆಯಲ್ಲಿ ಪ್ರೇಮದಾ ಪೀಡಾ.
ವ್ಯಾಕುಲವೆನಿಸದು ಪ್ರೇಮ ಪೀಡೆಯಿಂ ಯಾರದದೆಂದೂ ಪ್ರಾಣ
ಭಾಗ್ಯಹೀನ ನವ ನಿಷ್ಟುರನೈ ನಿಜ ಎದೆಯವನದು ಪಾಷಾಣ.

ಯಾರ ಮೇಲೆ ದಯಾದೃಷ್ಟಿ ಬೀರ್‍ವನೋ ಮಂಗಳ ಮಯ ಭಗವಾನ!
ಪೂರ್ಣ ಪ್ರೇಮ ಪೀಡೆಯಲಿ ಹಿಂಡುವನವನು ಆತನ ಪ್ರಾಣ!
ಯಾರಿಗೆ ಅನುಭವವಾಗಿದೆ ಪ್ರೇಮದ ಪೀಡೆಯ ಬಹು ಆನಂದ
ಆತನಿಗಿಂತ ದೊಡ್ಡವನಾರು ಸುಖಿ! ಇಹದಲಿ ಸ್ವಚ್ಛಂದ.

ಪ್ರೇಮೋನ್ಮತ್ತ ಹೃದಯದಿ ಇರದೈ! ಹೀನ ವಿರೋಧ ಕ್ರೋಧ!
ದುರ್ಗುಣಕಾಗದು ಪ್ರೇಮದ ಪಥದಲಿ ಮಾಡುವುದು ಅವರೋಧ!
ಪ್ರೇಮ ವೇದನಾಮುಗ್ಧ ಜನ (ಇಹರೈ) ಸುಖನಿದ್ರಾಮಯಮತ್ತ
ಪ್ರೇಮದ ಬೆಳಕನು ಕಣ್ಣಲ್ಲಿ ತುಂಬಿ ನೋಳ್ಪರು ಜಗವ ಸಮಸ್ತ!

ಹೂವಿನ ಮಂಜರಿ ಪಲ್ಲವದಲ್ಲಿ ಪ್ರಿಯತಮ ರೂಪ ವಿಲೋಕೀ!
ತುಂಬಿ ಹರಿವುದೈ ಮಹಾಮೋದದಿಂ ಪ್ರೇಮಿಯ ಎದೆತುಳಿಕೀ!
ನೋಡಿ ಮೊಗ್ಗನು ಮಾಡುವ ನಾತನು ಉಸ್ಮತ್ತ ಪ್ರಲಾಪ
ಎಷ್ಟರ ತನಕ ಅಡಗುವೆ ನೀನೀ ದಳಗಳ ನಡುವೆ ಗೋಪ!

ಪ್ರೇಮ ತುಂಬಿಹ ಅರ್ಧ ತೆರೆದಿಹ ಕಣ್ಣಲಿ ಶಶಿಯ ಸಹಾಸ
ಪ್ರೇಮಿಯು ಕಂಡು ಭ್ರಮಿಸುವನಾಗ ಪ್ರಿಯತಮ ಹಾಸ ವಿಕಾಸ.
ಸರ್ವವು ಆತಗೆ ಪ್ರೇಮದ ಮಾಯೆಯು ಸಚರಾಚರ ಸಂಸಾರ
ಪ್ರೇಮ ಮಗ್ನನು ನಿತ್ಯ ನಾನು ಮಾಳ್ಪನು ಪ್ರೇಮೋದ್ಯಾನ ವಿಹಾರ!

ಪ್ರೇಮವೇದನಾ ವ್ಯಥಿತ ಹೃದಯದಿಂ ಮಧಿತ ಪ್ರಮೋದ್ಗಾರ
ಉಕ್ಕಿ ಭೂಮಿಯ ತುಂಬಿಬಿಡುವುದೈ! ನವಜೀವನ ಉತ್ಸಾಹ!
ಕರುಣಾಭರದೀ ಪ್ರೇಮ ಕಂಬನಿ ಸುರಿವುದು ಸುಧೆಯ ಸಮಾನ
ನೆನೆಸುತ ದಯೆಯ ಬೇರನು ಕೊಡುವುದು ಜಗಕಾಶ್ರಯದಾನ!

ಜನಜನದಲ್ಲಿ ಪ್ರೇಮೀಕಾಂಬನು ಪ್ರಿಯತಮನಾಕಾಂತಿ
ಅದರಿಂದಾತಗೆ ಲೋಕಸೇವೆಯೋಳ್ ದೊರಕುವದು ಅತಿಶಾಂತಿ.
ಪೀಡಿತನಾಪೀಡೇ-ಕ್ಷುದಿತನ ಹಸಿವೇ-ತೃಷಿತನ ದಾಹ-
ಕಳೆದು ನಿರಾಶ್ರಯ-ಆಶಾರಹಿತಗೆ ಕೊಡುವನು ಉತ್ಸಾಹಾ!

ಕೃಶಿತ ಜಾತಿಯ ಉನ್ನತಿಗೈಸಿ ನಿವಾರಿಸಿ ಕಂಟಕ ದೂರ
ಪ್ರೇಮೀ ಪರಮ ತೃಪ್ತನಪ್ಪನು ಆಹ್ಲಾದಿತ ಭರಪೂರ.
ದಯೆ! ಕರ್ತವ್ಯ! ಎಂಬುದಿಲ್ಲ-ಅಲ್ಲ! ಆತನದಾರಿಗು ದಾಸ!
ಆಶಿಪನಾತನು ಸದಾ ನೋಡಲು ಪ್ರಿಯತಮ ರೂಪ ವಿಕಾಸ.
ರೂಪವೆಲ್ಲಿದೆ? ಆರ್ತಮುಖದಲಿ- ಪ್ರಕೃತಹರ್ಷದ ಹಾಸ
ಆಗುವುದೆಂದು! ಉದಿತವಾಗಲೇ ಪ್ರಿಯತಮ ರೂಪವಿಕಾಸ

[ಶ್ರೀ ಕವಿವರ ರಾಮನರೇಶಜೀ ತ್ರಿಪಾಠಿಯವರ ಹಿಂದೀ ‘ಮಿಲನ’ ದಿಂದ].
*****
ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೫
Next post ನವಿಲುಗರಿ – ೮

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys