ತ್ಯಾಗಮಯಿ ನೀ ಪೂರ್ಣಮಯಿ

ತ್ಯಾಗಮಯಿ ನೀ ಪೂರ್ಣಮಯಿ
ನಿನ್ನ ಅಮರ ಭಾವನ ಅಮರಮಯಿ ||

ಜನಕನಲ್ಲಿ ಜನಿಸಿ ನೀ ಜಾನಕಿಯಾದೆ
ರಾಜಕುವರಿ ಎನಿಸಿ ನೀ ತೊಟ್ಟಿಲ ತೂಗಿದೆ
ರಾಮ ರಾಮ ಎಂದೊಲಿದು ರಾಮನ ವರಿಸಿದೆ ||

ದಶರಥನ ಸೊಸೆ ಎನಿಸಿ ಕುಲವಂತಿಯಾದೆ
ರಾಮ ವನವಾಸದಿ ನೀ ಬಲು ನೊಂದೆ
ರಾಮ ರಾಮ ಎಂದೊಲಿದು ಆದರ್ಶ ಸತಿಯಾದೆ ||

ತ್ರೇತ ದ್ವಾಪರ ಕಲಿಯುಗವೆ ಹೋದರು
ರಾಮ ರಾಜ್ಯವ ಯಾರು ಮರೆಯರು
ಸೀತಾಮಾತೆಯೆ ನಿನ್ನ ಕರುಣೆಯೆ ಒಲವು ||

ಮನೆಮನೆಯಲ್ಲಿ ಬೆಳಗಲು ಆರತಿ ನಿನ್ನ
ಗರತಿಯರ ಸೌಭಾಗ್ಯವೆ ಆಯಿತು ಚೆನ್ನ
ಧನ್ಯವಾಯ್ತು ಇದುವೆ ಧರೆಯು ಜಗತ್‍ಜನನಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂದೆ ಹೋಗಿ ಸ್ವಾಮಿ
Next post ಚಿಕ್ಕಂದಿನಲ್ಲಿ ಒಮ್ಮೆ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…