ತ್ಯಾಗಮಯಿ ನೀ ಪೂರ್ಣಮಯಿ

ತ್ಯಾಗಮಯಿ ನೀ ಪೂರ್ಣಮಯಿ
ನಿನ್ನ ಅಮರ ಭಾವನ ಅಮರಮಯಿ ||

ಜನಕನಲ್ಲಿ ಜನಿಸಿ ನೀ ಜಾನಕಿಯಾದೆ
ರಾಜಕುವರಿ ಎನಿಸಿ ನೀ ತೊಟ್ಟಿಲ ತೂಗಿದೆ
ರಾಮ ರಾಮ ಎಂದೊಲಿದು ರಾಮನ ವರಿಸಿದೆ ||

ದಶರಥನ ಸೊಸೆ ಎನಿಸಿ ಕುಲವಂತಿಯಾದೆ
ರಾಮ ವನವಾಸದಿ ನೀ ಬಲು ನೊಂದೆ
ರಾಮ ರಾಮ ಎಂದೊಲಿದು ಆದರ್ಶ ಸತಿಯಾದೆ ||

ತ್ರೇತ ದ್ವಾಪರ ಕಲಿಯುಗವೆ ಹೋದರು
ರಾಮ ರಾಜ್ಯವ ಯಾರು ಮರೆಯರು
ಸೀತಾಮಾತೆಯೆ ನಿನ್ನ ಕರುಣೆಯೆ ಒಲವು ||

ಮನೆಮನೆಯಲ್ಲಿ ಬೆಳಗಲು ಆರತಿ ನಿನ್ನ
ಗರತಿಯರ ಸೌಭಾಗ್ಯವೆ ಆಯಿತು ಚೆನ್ನ
ಧನ್ಯವಾಯ್ತು ಇದುವೆ ಧರೆಯು ಜಗತ್‍ಜನನಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂದೆ ಹೋಗಿ ಸ್ವಾಮಿ
Next post ಚಿಕ್ಕಂದಿನಲ್ಲಿ ಒಮ್ಮೆ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys