ನಿನ್ನ ಕಂಡ ಲಾಗಾಯ್ತಿನಿಂದ

ನನ್ನ ಪ್ರೇಮದ ಕಡ ಎಷ್ಟು ದಿನ
ಇಟ್ಟುಕೊಳ್ಳುವಿ ನೀ
ಬಿದಿರಕೋಲಿನ ಸಖನೇ
ನಾಳೆಗಾದರೂ ತೀರಿಸಿಬಿಡು
ಹನಿಮುತ್ತಿದ ಕೆಂದಾವರೆಗಳು
ನನ್ನ ತುಟಿಯಲ್ಲರಳಲಿ.

ಬಿದಿರುಗಣೆ ಉಲಿತ ಸದ್ದಾಗದಂತೆ
ನನ್ನಾತ್ಮವನ್ನೆ ಕಬಳಿಸುತ್ತಿದೆ.
ಯಮುನೆ ತೀರದ ಕುಳಿರ್‍ಗಾಳಿ
ತಣ್ಣಗಿನ ಒಳಕೋಲಾಹಲಕ್ಕೆ ಜೊತೆಯಾಗಿದೆ
ಮನನೆಲದ ಬೇರುಗಳೇ ಉರುಳಾಗಿ
ರಕ್ತದ ಹಾಸು ಗೋರಿಯ ಗುಲಾಬಿ
ನಾ ಹೆಜ್ಜೆ ಇಟ್ಟಲ್ಲೆಲ್ಲಾ ಪವಡಿಸಿವೆ.

ಪ್ರೇಮದಂಟಿನ ಉಂಡೆಯೊಳಗೆ
ಕ್ಷಣಕ್ಷಣಕ್ಕೂ ಕರಗಿಸಿಬಿಡುವ
ಸಕ್ಕರೆಯ ಸವಿಯಂತವನೇ
ನಿನ್ನ ಕಂಡ ಲಾಗಾಯ್ತಿನಿಂದ
ನನ್ನ ಕಣ್ಣುಗಳು ನಿದ್ರಿಸುವದನ್ನೆ ಮರೆತಿವೆ.

ಈ ಲೋಕದೊಳಗಿನ ಎಲ್ಲ ಸದ್ದುಗಳನ್ನು
ಸೆಣಬಿನ ಚೀಲದಲ್ಲಿಟ್ಟು ಬಾಯಿಕಟ್ಟಿ,
ನಿನ್ನುಸಿರಿನ ಜೊತೆ
ಗದ್ದೆಬದಿಯಲ್ಲೊಂದು ಕಳೆ
ಗಿಡವಾಗಿ ಗಡದ್ದಾಗಿ ಉಸಿರಾಡಬೇಕೆನಿಸುತ್ತಿದೆ.

ಕಾಲದ ಗಡಿಯಾರಕ್ಕೆ
ಕತ್ತಿಗಳೇ ಮುಳ್ಳುಗಳಾಗಿ
ಕೆದಕಿ ಕತ್ತರಿಸಿ ಹಾಕುವ ಮುನ್ನ
ಒಮ್ಮೆ ಬಂದುಬಿಡು.
ಬೆಚ್ಚಗಿನ ಬಯಲ ಗಾಳಿಗೆ ಬೀಸಿಬೀಸಿ
ನಾಲ್ಕು ಹೆಜ್ಜೆ ಹಾಕಿಬಿಡುವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೮
Next post ನವಿಲುಗರಿ – ೧

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

cheap jordans|wholesale air max|wholesale jordans|wholesale jewelry|wholesale jerseys