Home / ಕವನ / ಕವಿತೆ / ನೆಲಮಣ್ಣಿನ ಸ್ವಯಂ ಸ್ವಯಂವರ

ನೆಲಮಣ್ಣಿನ ಸ್ವಯಂ ಸ್ವಯಂವರ

ಅದೇ ಆ ಕೆಂಪುಮಣ್ಣಿನ
ಗದ್ದೆಯ ತುಂಬಾ
ಪ್ರತಿಸಲದಂತೆ ಈ ಸಲವೂ
ಹೊಸ ಬೀಜಗಳದ್ದೇ ಬಿತ್ತು.
ಮೋಹನ ರಾಗದ ಮಾಲಿಕೆಗಳ
ಜೊತೆ ತರವೇಹಾರಿ
ತಳಿಬೀಜಗಳ ಊರಿಹೋಗುವ
ಆತನಿಗೋ ಪುರಸೊತ್ತಿಲ್ಲದ ದಣಿವು.

ಸೀಮೆಗೆ ತಕ್ಕಂತಿರುವ ಮಣ್ಣಿನ ಹದಕ್ಕೆ
ಬೀಜ ಹಾಕುವುದೇನು ಸಾಮಾನ್ಯವೇ?
ಆ ಮಣ್ಣಿನ ಹದ ಈ ನೆಲಕ್ಕಿಲ್ಲ.
ಈ ನೆಲದ ಗುಣ ಆ ಮಣ್ಣಿಗೆಲ್ಲಿ?
ನೆಲಮಣ್ಣಿನ ಕಾವು
ಆತನಿಗೆ ಮಾತ್ರ ಗೊತ್ತು.
ರಾಗ ಹೊರಡಿಸುವ, ಕೆರಳಿಸುವ
ಕೈಬೆರಳಿನಾಟವ ಹೂಡುವ ಆತನಿಗೋ
ಗದ್ದೆ ಗದ್ದೆಗಳ ಮೇಲೆಲ್ಲಾ ಮೋಹ.

ಲಾಗಾಯ್ತಿನಿಂದ ಸೀಮೆಗೊಪ್ಪುವ
ಬೀಜಗಳ ಹೊತ್ತು ಹೆತ್ತು
ಭಾರವಾದ ಗದ್ದೆಗಳಿಗೆ
ಈಗೀಗ ಉರಿ ನವೆಯ ಜಡ್ಡು.
ಹಾಗಾಗೇ ಬೀಜಕ್ಕೆ ತಕ್ಕ ಪೈರು
ಕೊಡುವ ಕೆಲಸ
ನೆನೆಗುದಿಗೆ ಬಿದ್ದಿದೆ.

ಮದುಮಗಳ ಹುಸಿ ಮೌನದಂತೆ
ತಣ್ಣಗೆ ಕುಳಿತು ಕಾಯುತ್ತಲೇ ಇವೆ
ಹೊಲಗದ್ದೆ ಬಯಲ ಮಹಲು.
ಮುಗಿಲು ಮುರಿದು ಬೀಳುವ
ಹೊತ್ತಿಗಾಗೇ ಹೊಂಚಿ ಕೂತಿದೆ.

ಕೇಳದ ಗಾನವನ್ನು ಎದೆಯಾಳದಿಂದಲೇ
ಮೀಟಿ ತೆಗೆಯುವ ಹುಕಿ ಹತ್ತಿಸಿಕೊಂಡ
ಗದ್ದೆಗಳ ಆಲಾಪ
ಬಾನಾಡಿಗಳಿಗಷ್ಟೇ ಶ್ರವಣಸಾಧ್ಯ.
ಗದ್ದೆಗಳೀಗ ಬಿತ್ತಿದ ಬೀಜಗಳ
ಫಸಲಿಗೆ ಪೈಪೋಟಿಗಿಳಿಯುತ್ತಿಲ್ಲ.
ಬೀಜದವನ ದಾರಿ ಕಾಯುತ್ತಲೂ ಇಲ್ಲ.
ಬೀಜಗಳನ್ನೆ ನಿರಾಕರಿಸುತ್ತಿವೆ.
ನೆಲಮಣ್ಣು ಮಣ್ಣನೆಲ
ಸ್ವಯಂ ಸ್ವಯಂವರದ ಸುಖ ಕಾಣುತ್ತಿವೆ.

ಅವಳೋ ಅವಳೆದೆಯ ಮೋಹನ ರಾಗಕ್ಕೆ
ಕಿವಿಯಾಗಿದ್ದಾಳೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...