ಪ್ರಥಮ ಪಾಠ

ಮನಸ್ಸಿನಾಳಕ್ಕೆ ಗಾಳ ಇಳಿಸಿ ಕಾಯುತ್ತ ಕೂತೆ
ಬಂದೀತು ಎಂದು ಕಥೆ, ಕಡೆಗೊಂದು ಮಿಡಿಗವಿತೆ.
ನಾ ಪಟ್ಟಕಷ್ಟ ಒಂದೊಂದನೇ ಕೆಳಕೆಡವಿ
ಮೆಟ್ಟಲಾಗಿಸಿ ಮೇಲೆ ಹತ್ತಿ ಕತ್ತಲ ಕಾಡು
ಕತ್ತಿಯಲಿ ಸವರಿ ಹೊರಬಂದ ಸಾಹಸ ನೆನೆದು
ರೋಮಾಂಚಗೊಂಡೆ. ಇದರೊಂದು ಆಸರೆ ಹಿಡಿದು
ಬಂದೀತು ಕಥೆ, ಕವಿತೆ ಎಂದು ಕಾದೇ ಕಾದೆ.
ಬರಲಿಲ್ಲ ಬಂತು ಸಣ್ಣಗೆ ಜೊಂಪು ತೂಕಡಿಕೆ !
ನಡುವೆ ಮೆಲ್ಲಗೆ ಎಲ್ಲೊ ಗಾಳವಲುಗಿತು. ಖುಷಿಗೆ
ಕೂಗಿ ಹಿಡಿದೆಳೆದೆ ಚುರುಕಾಗಿ ಗಾಳವ ಹೊರಗೆ.
ಬರಲಿಲ್ಲ ಭಾರ. ಬಲಬಿಟ್ಟು ಎಳೆದರೆ ಗಾಳ
ಬಂತು ಮೇಲಕ್ಕ ತುದಿಗಿತ್ತು ಕಾಗದಚೂರು

ಬಲು ಕುತೂಹಲದಿಂದ ಬಿಚ್ಚಿದೆ. ಕಾಗದದ ಒಳಗೆ ಬರೆದಿತ್ತು
‘ಸಾಹಸದ ಸೊಕ್ಕಿರಲಿ, ಮೊದಲು ಕಲಿ ಉಪಕಾರ ಸ್ಮರಣೆಯ ನಿಯತ್ತು.’
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಜಕಾರಣಿ
Next post ಉಪ್ಪವ್ವಾ ಉಪ್ಪು

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys