Home / ಕವನ / ಅನುವಾದ / ಪರಿವರ್ತನೆ

ಪರಿವರ್ತನೆ

ಸಂಗೀತ ಮತ್ತೆ ಬದುಕಿ ಬಂದಂತೆ…
ಲೋಕದಾಚೆಯಿಂದ ಇಲ್ಲಿಗೆ ತಂದವರು,
ಮನಸ್ಸಿನ ಒಳಕಿವಿಯ ಸುರುಳಿ ಮೆಟ್ಟಿಲಲ್ಲಿ
ಕೈ ಹಿಡಿದು ನಡೆಸಿದವರು ಯಾರು?
ವರ್ತಮಾನ ತನ್ನನ್ನಳಿಸಿಕೊಂಡು ತಾನೆ ಅದಾದಂತೆ
ಮಾಯವಾದ ಒಂದು ಕ್ಷಣವೊಂದು
ಮತ್ತೆ ಹಿಂದಿರುಗಿದಂತೆ,
ನೆಲದೊಳಗಿನ ಸ್ವರಗಳ ಮೇಲೆತ್ತಿದಂತೆ
ಶಬ್ದವಿಲ್ಲದ ಶಬ್ದ ಹುಟ್ಟುವುದು
ಸಾವಿನ ಗಳಿಗೆಯಲ್ಲಿ-ತಥಾಸ್ತು.
ಶಾಲೆಯೊಳಗಿನ ಚರ್ಚಿನಲ್ಲಿ
ಎಷ್ಟೋ ಬಾರಿ ಮಾತಾಡಿದ್ದೇನೆ
ವಿಶ್ವಾಸವಿಲ್ಲದೆ. ಈಗ ಅವೇ ಮಾತನ್ನು
ಇಲ್ಲದ ತುಟಿಗಳು ನುಡಿಯುವುದು ಕೇಳುತ್ತೇನೆ.
ಗಳಿಗೆ ಪಾತ್ರೆಯಲ್ಲಿ ಮರಳು ಸುರಿಯುವ ಶಬ್ದ.
ಇರುಳಿನಲ್ಲಿ ನಾನು ಹೊರಳಿದಂತೆ ಹೊರಳುವ ಹೊತ್ತು,
ತಲೆಯೊಳಗೆ ಬಾರಿಸುವ ಗಂಟೆ ಸದ್ದು,
‘ಈ ಜಗತಿನಲ್ಲಿ ಸಾಯಲಿರುವ ಮೊದಲ ಮನುಷ್ಯ ನಾನಲ್ಲ’
ಎಪಿಕ್ಟೆಟಸ್‍ನಂತೆ ಹೇಳಿಕೊಳ್ಳುತ್ತೇನೆ.
ಆ ಕ್ಲಣದಲ್ಲೇ ನನ್ನ ರಕ್ತದೊಳಗೆ
ಜಗತ್ತುಮುರಿದು ಬೀಳುತ್ತಿರುವ ಸದ್ದು.
ಮುಂಬೆಳಕಿಲ್ಲದ ನಾಡಿನಿಂದ ಹಿಂದಿರುಗಿದಾಗ
ಗಿಲ್ಗಮಿಶ್ ನಿಗಾದ ದುಃಖವೆ ನನ್ನ ದುಃಖ.
ಮಬ್ಬುಗತಲ ಈ ಭೂಮಿಯ ಮೇಲೆ
ಪ್ರತಿಯೊಬ್ಬ ಮನುಷ್ಯನೂ ಒಬ್ಬ ಆಡಂ
ಅವನೊಂದಿಗೇ ಜಗತ್ತುತೊಡಗಿ
ಅವನೊಂದಿಗೇ ಮುಗಿಯುವುದು.
‘ಮೊದಲು’ ಮತ್ತು ‘ಆಮೇಲೆ’ ಅನ್ನುವ
ಕಲ್ಲಿನ ಚೌಕಂಸಗಳ ನಡುವೆ
ಮತ್ತೆಂದೂ ಮರಳದ ಈ ಕ್ಷಣದಲ್ಲಿ
ನಾನೇ ಪ್ರಥಮ ಮನುಷ್ಯ, ನಾನೇ ಕೊನೆಯವನು ಕೂಡಾ.
ಹೀಗನ್ನುತ್ತಿರುವಾಗ ಕ್ಷಣ…
ಶುದ್ಧಕಾಲ.
*****
ಮೂಲ: ಆಕ್ಟೇವಿಯೊ ಪಾಝ್

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...