Home / ಕವನ / ಅನುವಾದ / ಪರಿವರ್ತನೆ

ಪರಿವರ್ತನೆ

ಸಂಗೀತ ಮತ್ತೆ ಬದುಕಿ ಬಂದಂತೆ…
ಲೋಕದಾಚೆಯಿಂದ ಇಲ್ಲಿಗೆ ತಂದವರು,
ಮನಸ್ಸಿನ ಒಳಕಿವಿಯ ಸುರುಳಿ ಮೆಟ್ಟಿಲಲ್ಲಿ
ಕೈ ಹಿಡಿದು ನಡೆಸಿದವರು ಯಾರು?
ವರ್ತಮಾನ ತನ್ನನ್ನಳಿಸಿಕೊಂಡು ತಾನೆ ಅದಾದಂತೆ
ಮಾಯವಾದ ಒಂದು ಕ್ಷಣವೊಂದು
ಮತ್ತೆ ಹಿಂದಿರುಗಿದಂತೆ,
ನೆಲದೊಳಗಿನ ಸ್ವರಗಳ ಮೇಲೆತ್ತಿದಂತೆ
ಶಬ್ದವಿಲ್ಲದ ಶಬ್ದ ಹುಟ್ಟುವುದು
ಸಾವಿನ ಗಳಿಗೆಯಲ್ಲಿ-ತಥಾಸ್ತು.
ಶಾಲೆಯೊಳಗಿನ ಚರ್ಚಿನಲ್ಲಿ
ಎಷ್ಟೋ ಬಾರಿ ಮಾತಾಡಿದ್ದೇನೆ
ವಿಶ್ವಾಸವಿಲ್ಲದೆ. ಈಗ ಅವೇ ಮಾತನ್ನು
ಇಲ್ಲದ ತುಟಿಗಳು ನುಡಿಯುವುದು ಕೇಳುತ್ತೇನೆ.
ಗಳಿಗೆ ಪಾತ್ರೆಯಲ್ಲಿ ಮರಳು ಸುರಿಯುವ ಶಬ್ದ.
ಇರುಳಿನಲ್ಲಿ ನಾನು ಹೊರಳಿದಂತೆ ಹೊರಳುವ ಹೊತ್ತು,
ತಲೆಯೊಳಗೆ ಬಾರಿಸುವ ಗಂಟೆ ಸದ್ದು,
‘ಈ ಜಗತಿನಲ್ಲಿ ಸಾಯಲಿರುವ ಮೊದಲ ಮನುಷ್ಯ ನಾನಲ್ಲ’
ಎಪಿಕ್ಟೆಟಸ್‍ನಂತೆ ಹೇಳಿಕೊಳ್ಳುತ್ತೇನೆ.
ಆ ಕ್ಲಣದಲ್ಲೇ ನನ್ನ ರಕ್ತದೊಳಗೆ
ಜಗತ್ತುಮುರಿದು ಬೀಳುತ್ತಿರುವ ಸದ್ದು.
ಮುಂಬೆಳಕಿಲ್ಲದ ನಾಡಿನಿಂದ ಹಿಂದಿರುಗಿದಾಗ
ಗಿಲ್ಗಮಿಶ್ ನಿಗಾದ ದುಃಖವೆ ನನ್ನ ದುಃಖ.
ಮಬ್ಬುಗತಲ ಈ ಭೂಮಿಯ ಮೇಲೆ
ಪ್ರತಿಯೊಬ್ಬ ಮನುಷ್ಯನೂ ಒಬ್ಬ ಆಡಂ
ಅವನೊಂದಿಗೇ ಜಗತ್ತುತೊಡಗಿ
ಅವನೊಂದಿಗೇ ಮುಗಿಯುವುದು.
‘ಮೊದಲು’ ಮತ್ತು ‘ಆಮೇಲೆ’ ಅನ್ನುವ
ಕಲ್ಲಿನ ಚೌಕಂಸಗಳ ನಡುವೆ
ಮತ್ತೆಂದೂ ಮರಳದ ಈ ಕ್ಷಣದಲ್ಲಿ
ನಾನೇ ಪ್ರಥಮ ಮನುಷ್ಯ, ನಾನೇ ಕೊನೆಯವನು ಕೂಡಾ.
ಹೀಗನ್ನುತ್ತಿರುವಾಗ ಕ್ಷಣ…
ಶುದ್ಧಕಾಲ.
*****
ಮೂಲ: ಆಕ್ಟೇವಿಯೊ ಪಾಝ್

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್