ಪರಿವರ್ತನೆ

ಸಂಗೀತ ಮತ್ತೆ ಬದುಕಿ ಬಂದಂತೆ…
ಲೋಕದಾಚೆಯಿಂದ ಇಲ್ಲಿಗೆ ತಂದವರು,
ಮನಸ್ಸಿನ ಒಳಕಿವಿಯ ಸುರುಳಿ ಮೆಟ್ಟಿಲಲ್ಲಿ
ಕೈ ಹಿಡಿದು ನಡೆಸಿದವರು ಯಾರು?
ವರ್ತಮಾನ ತನ್ನನ್ನಳಿಸಿಕೊಂಡು ತಾನೆ ಅದಾದಂತೆ
ಮಾಯವಾದ ಒಂದು ಕ್ಷಣವೊಂದು
ಮತ್ತೆ ಹಿಂದಿರುಗಿದಂತೆ,
ನೆಲದೊಳಗಿನ ಸ್ವರಗಳ ಮೇಲೆತ್ತಿದಂತೆ
ಶಬ್ದವಿಲ್ಲದ ಶಬ್ದ ಹುಟ್ಟುವುದು
ಸಾವಿನ ಗಳಿಗೆಯಲ್ಲಿ-ತಥಾಸ್ತು.
ಶಾಲೆಯೊಳಗಿನ ಚರ್ಚಿನಲ್ಲಿ
ಎಷ್ಟೋ ಬಾರಿ ಮಾತಾಡಿದ್ದೇನೆ
ವಿಶ್ವಾಸವಿಲ್ಲದೆ. ಈಗ ಅವೇ ಮಾತನ್ನು
ಇಲ್ಲದ ತುಟಿಗಳು ನುಡಿಯುವುದು ಕೇಳುತ್ತೇನೆ.
ಗಳಿಗೆ ಪಾತ್ರೆಯಲ್ಲಿ ಮರಳು ಸುರಿಯುವ ಶಬ್ದ.
ಇರುಳಿನಲ್ಲಿ ನಾನು ಹೊರಳಿದಂತೆ ಹೊರಳುವ ಹೊತ್ತು,
ತಲೆಯೊಳಗೆ ಬಾರಿಸುವ ಗಂಟೆ ಸದ್ದು,
‘ಈ ಜಗತಿನಲ್ಲಿ ಸಾಯಲಿರುವ ಮೊದಲ ಮನುಷ್ಯ ನಾನಲ್ಲ’
ಎಪಿಕ್ಟೆಟಸ್‍ನಂತೆ ಹೇಳಿಕೊಳ್ಳುತ್ತೇನೆ.
ಆ ಕ್ಲಣದಲ್ಲೇ ನನ್ನ ರಕ್ತದೊಳಗೆ
ಜಗತ್ತುಮುರಿದು ಬೀಳುತ್ತಿರುವ ಸದ್ದು.
ಮುಂಬೆಳಕಿಲ್ಲದ ನಾಡಿನಿಂದ ಹಿಂದಿರುಗಿದಾಗ
ಗಿಲ್ಗಮಿಶ್ ನಿಗಾದ ದುಃಖವೆ ನನ್ನ ದುಃಖ.
ಮಬ್ಬುಗತಲ ಈ ಭೂಮಿಯ ಮೇಲೆ
ಪ್ರತಿಯೊಬ್ಬ ಮನುಷ್ಯನೂ ಒಬ್ಬ ಆಡಂ
ಅವನೊಂದಿಗೇ ಜಗತ್ತುತೊಡಗಿ
ಅವನೊಂದಿಗೇ ಮುಗಿಯುವುದು.
‘ಮೊದಲು’ ಮತ್ತು ‘ಆಮೇಲೆ’ ಅನ್ನುವ
ಕಲ್ಲಿನ ಚೌಕಂಸಗಳ ನಡುವೆ
ಮತ್ತೆಂದೂ ಮರಳದ ಈ ಕ್ಷಣದಲ್ಲಿ
ನಾನೇ ಪ್ರಥಮ ಮನುಷ್ಯ, ನಾನೇ ಕೊನೆಯವನು ಕೂಡಾ.
ಹೀಗನ್ನುತ್ತಿರುವಾಗ ಕ್ಷಣ…
ಶುದ್ಧಕಾಲ.
*****
ಮೂಲ: ಆಕ್ಟೇವಿಯೊ ಪಾಝ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಣ್ಣನ ವಿಲಾಪ
Next post ಪೇಚಾಟದ ಪ್ರಸಂಗಗಳು

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys