Home / ಕವನ / ಅನುವಾದ / ಪರಿವರ್ತನೆ

ಪರಿವರ್ತನೆ

ಸಂಗೀತ ಮತ್ತೆ ಬದುಕಿ ಬಂದಂತೆ…
ಲೋಕದಾಚೆಯಿಂದ ಇಲ್ಲಿಗೆ ತಂದವರು,
ಮನಸ್ಸಿನ ಒಳಕಿವಿಯ ಸುರುಳಿ ಮೆಟ್ಟಿಲಲ್ಲಿ
ಕೈ ಹಿಡಿದು ನಡೆಸಿದವರು ಯಾರು?
ವರ್ತಮಾನ ತನ್ನನ್ನಳಿಸಿಕೊಂಡು ತಾನೆ ಅದಾದಂತೆ
ಮಾಯವಾದ ಒಂದು ಕ್ಷಣವೊಂದು
ಮತ್ತೆ ಹಿಂದಿರುಗಿದಂತೆ,
ನೆಲದೊಳಗಿನ ಸ್ವರಗಳ ಮೇಲೆತ್ತಿದಂತೆ
ಶಬ್ದವಿಲ್ಲದ ಶಬ್ದ ಹುಟ್ಟುವುದು
ಸಾವಿನ ಗಳಿಗೆಯಲ್ಲಿ-ತಥಾಸ್ತು.
ಶಾಲೆಯೊಳಗಿನ ಚರ್ಚಿನಲ್ಲಿ
ಎಷ್ಟೋ ಬಾರಿ ಮಾತಾಡಿದ್ದೇನೆ
ವಿಶ್ವಾಸವಿಲ್ಲದೆ. ಈಗ ಅವೇ ಮಾತನ್ನು
ಇಲ್ಲದ ತುಟಿಗಳು ನುಡಿಯುವುದು ಕೇಳುತ್ತೇನೆ.
ಗಳಿಗೆ ಪಾತ್ರೆಯಲ್ಲಿ ಮರಳು ಸುರಿಯುವ ಶಬ್ದ.
ಇರುಳಿನಲ್ಲಿ ನಾನು ಹೊರಳಿದಂತೆ ಹೊರಳುವ ಹೊತ್ತು,
ತಲೆಯೊಳಗೆ ಬಾರಿಸುವ ಗಂಟೆ ಸದ್ದು,
‘ಈ ಜಗತಿನಲ್ಲಿ ಸಾಯಲಿರುವ ಮೊದಲ ಮನುಷ್ಯ ನಾನಲ್ಲ’
ಎಪಿಕ್ಟೆಟಸ್‍ನಂತೆ ಹೇಳಿಕೊಳ್ಳುತ್ತೇನೆ.
ಆ ಕ್ಲಣದಲ್ಲೇ ನನ್ನ ರಕ್ತದೊಳಗೆ
ಜಗತ್ತುಮುರಿದು ಬೀಳುತ್ತಿರುವ ಸದ್ದು.
ಮುಂಬೆಳಕಿಲ್ಲದ ನಾಡಿನಿಂದ ಹಿಂದಿರುಗಿದಾಗ
ಗಿಲ್ಗಮಿಶ್ ನಿಗಾದ ದುಃಖವೆ ನನ್ನ ದುಃಖ.
ಮಬ್ಬುಗತಲ ಈ ಭೂಮಿಯ ಮೇಲೆ
ಪ್ರತಿಯೊಬ್ಬ ಮನುಷ್ಯನೂ ಒಬ್ಬ ಆಡಂ
ಅವನೊಂದಿಗೇ ಜಗತ್ತುತೊಡಗಿ
ಅವನೊಂದಿಗೇ ಮುಗಿಯುವುದು.
‘ಮೊದಲು’ ಮತ್ತು ‘ಆಮೇಲೆ’ ಅನ್ನುವ
ಕಲ್ಲಿನ ಚೌಕಂಸಗಳ ನಡುವೆ
ಮತ್ತೆಂದೂ ಮರಳದ ಈ ಕ್ಷಣದಲ್ಲಿ
ನಾನೇ ಪ್ರಥಮ ಮನುಷ್ಯ, ನಾನೇ ಕೊನೆಯವನು ಕೂಡಾ.
ಹೀಗನ್ನುತ್ತಿರುವಾಗ ಕ್ಷಣ…
ಶುದ್ಧಕಾಲ.
*****
ಮೂಲ: ಆಕ್ಟೇವಿಯೊ ಪಾಝ್

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...