ಹತ್ತು ಹಾಯ್ಕುಗಳು


ಈ ಕದಡಿದ ಕೊಳ ತಿಳಿಯಾಗುವುದಿಲ್ಲ.
ಯಾಕೆಂದರೆ ಅದು ಸ್ಫಟಿಕಜಲದಾಗರವಲ್ಲ
ಕೆಂಪು ಕೆಂಪು ಓಕುಳಿಯ ಸುರಿಸುವ ಸಂತೆ


ಬಿಳಿತೊಗಲಿನ ಗೋಡೆಯ ಮೇಲೆ
ಬೆಳೆಯುತ್ತಿದೆ ಊರು ನಗರ
ಕೆತ್ತಸಿಕೊಂಡ ಮುಖಗಳಲ್ಲಿ ಮಾರ್ದವತೆಯಿಲ್ಲ.


ತರು ಲತೆಗಳು ಅಲ್ಲಿಲ್ಲಿ ಬೋಳಿಸಿಕೊಂಡ
ಸುಂದರಾಂಗಿಯರು, ಕಾರ್ಬನ್ನಿನ ಕ್ರೀಮಿಗೆ
ಕಪ್ಪುಂಡು ಅಮವಾಸ್ಯೆಯ ಬಣ್ಣ.


ಶಾಂತಿಗಾಗಿ ಕ್ರಾಂತಿ ಎನ್ನುವ ಭ್ರಾಂತಿ.
ಜಾತಿಯಂತಕನ ನಾಲಿಗೆಗೆ
ಭಕ್ಷ ಭೋಜನ ರಕ್ತಸಿಂಚನ
ಆಂಧ್ರ ತೆಲಂಗಾಣ.
ಮರ್ಯಾದಾ ಹತ್ಯೆ ಬಾಣದ ಇನ್ನೊಂದು ತುದಿ.


ನೆರಳಿನಲ್ಲಿ ನೇಗಿಲು ಕಟ್ಟುವ ಜನ
ಮಹಡಿಯ ಮನೆಗಳಲ್ಲಿ ಮಿಂಚುವ ಮೋಹನಾಂಗಿಯರು
ಪವಿತ್ರತೆಗೆ ಹಲಬುತ್ತ ಒಳಗೊಳಗೆ ಪುಡಿಪುಡಿ


ಸಹನೆಗೆ ಉಪಸರ್ಗ ಬೆರೆಸಿ
ಬೆಳೆಸಿದ್ದೆ ತಪ್ಪಾಯ್ತೇ ಅಸಹನೆ ಈಗ
ವಿಷಯವ್ಯಾಪಿ. ವಿಶ್ವ ವ್ಯಾಪಿ.

೭.
ಅಲ್ಲಿ ಸಿಯಾಚಿನ್ನಲ್ಲಿ ಹೆತ್ತೊಡಲ ಮರೆತು
ಹೊತ್ತೊಡಲ ಋಣಹರಿಸಿ ಹುತಾತ್ಮರು
ಮಣ್ಣಬಯಕೆಗೆ ಹೊನ್ನಹೊದಿಕೆಗೆ
ಇಲ್ಲಿ ತಾಯ್ಗರ್ಭ ಸೀಳಿದರು.


ಕಗ್ಗತ್ತಲ ಕ್ಷಣಗಳಲ್ಲೆ ರಕ್ತ ಬೀಜಾಸುರರ
ಚಿತ್ರಗಳು ರೂಪಗೊಳ್ಳುತ್ತವೆ.
ಮದಿರೆ, ಮಾನಿನಿ, ಮಣ್ಣು ಮೋಕ್ಷಗೊಳ್ಳದ
ಮಂತ್ರಗಳು ಪ್ರಳಯಕಾಲದವರೆಗೂ


ಸರಕಾರಿಗಂಗಳದಿ ಉಣ್ಣುತ್ತಲೇ
ರಹಸ್ಯ ವರದಿ ಸರಕು ವ್ಯಾಪಾರ
ನೆರೆಮನೆಯ ದೊರೆಯಣ್ಣಗಳ ಮಾರುಕಟ್ಟೆಯಲ್ಲಿ ಬಿಸಿಬಿಸಿ
ಆದರೆ ಬಡಪಾಯಿ ವೇಮುಲಗೆ
ಕಟ್ಟಿದ್ದು ಬಹು ದೊಡ್ಡ ಪಟ್ಟ

೧೦
ಶತ ಶತಮಾನಗಳ ಚರಿತ್ರೆಯ ಚೀಲ
ತುಂಬಿಕೊಂಡಿದ್ದು ಬದಲಿಲ್ಲ.
ರಾಜಕಾರಣಕ್ಕೇನು? ಗೊತ್ತಿರುವುದಿಷ್ಟೇ
ತಮ್ಮವಾದದ ಶವಪೆಟ್ಟಿಗೆಗೆ ಹೆಣ ಯಾರದ್ದಾದರೇನು?
ಮೊಳೆ ಹೊಡೆದು ಸಿದ್ಧಮಾಡುವುದೇ ಪರಮಗುರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಸಲದ ಯುಗಾದಿ
Next post ಶಬರಿ – ೧೭

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys