Home / ಕವನ / ಹಾಯ್ಕು / ಹತ್ತು ಹಾಯ್ಕುಗಳು

ಹತ್ತು ಹಾಯ್ಕುಗಳು


ಈ ಕದಡಿದ ಕೊಳ ತಿಳಿಯಾಗುವುದಿಲ್ಲ.
ಯಾಕೆಂದರೆ ಅದು ಸ್ಫಟಿಕಜಲದಾಗರವಲ್ಲ
ಕೆಂಪು ಕೆಂಪು ಓಕುಳಿಯ ಸುರಿಸುವ ಸಂತೆ


ಬಿಳಿತೊಗಲಿನ ಗೋಡೆಯ ಮೇಲೆ
ಬೆಳೆಯುತ್ತಿದೆ ಊರು ನಗರ
ಕೆತ್ತಸಿಕೊಂಡ ಮುಖಗಳಲ್ಲಿ ಮಾರ್ದವತೆಯಿಲ್ಲ.


ತರು ಲತೆಗಳು ಅಲ್ಲಿಲ್ಲಿ ಬೋಳಿಸಿಕೊಂಡ
ಸುಂದರಾಂಗಿಯರು, ಕಾರ್ಬನ್ನಿನ ಕ್ರೀಮಿಗೆ
ಕಪ್ಪುಂಡು ಅಮವಾಸ್ಯೆಯ ಬಣ್ಣ.


ಶಾಂತಿಗಾಗಿ ಕ್ರಾಂತಿ ಎನ್ನುವ ಭ್ರಾಂತಿ.
ಜಾತಿಯಂತಕನ ನಾಲಿಗೆಗೆ
ಭಕ್ಷ ಭೋಜನ ರಕ್ತಸಿಂಚನ
ಆಂಧ್ರ ತೆಲಂಗಾಣ.
ಮರ್ಯಾದಾ ಹತ್ಯೆ ಬಾಣದ ಇನ್ನೊಂದು ತುದಿ.


ನೆರಳಿನಲ್ಲಿ ನೇಗಿಲು ಕಟ್ಟುವ ಜನ
ಮಹಡಿಯ ಮನೆಗಳಲ್ಲಿ ಮಿಂಚುವ ಮೋಹನಾಂಗಿಯರು
ಪವಿತ್ರತೆಗೆ ಹಲಬುತ್ತ ಒಳಗೊಳಗೆ ಪುಡಿಪುಡಿ


ಸಹನೆಗೆ ಉಪಸರ್ಗ ಬೆರೆಸಿ
ಬೆಳೆಸಿದ್ದೆ ತಪ್ಪಾಯ್ತೇ ಅಸಹನೆ ಈಗ
ವಿಷಯವ್ಯಾಪಿ. ವಿಶ್ವ ವ್ಯಾಪಿ.

೭.
ಅಲ್ಲಿ ಸಿಯಾಚಿನ್ನಲ್ಲಿ ಹೆತ್ತೊಡಲ ಮರೆತು
ಹೊತ್ತೊಡಲ ಋಣಹರಿಸಿ ಹುತಾತ್ಮರು
ಮಣ್ಣಬಯಕೆಗೆ ಹೊನ್ನಹೊದಿಕೆಗೆ
ಇಲ್ಲಿ ತಾಯ್ಗರ್ಭ ಸೀಳಿದರು.


ಕಗ್ಗತ್ತಲ ಕ್ಷಣಗಳಲ್ಲೆ ರಕ್ತ ಬೀಜಾಸುರರ
ಚಿತ್ರಗಳು ರೂಪಗೊಳ್ಳುತ್ತವೆ.
ಮದಿರೆ, ಮಾನಿನಿ, ಮಣ್ಣು ಮೋಕ್ಷಗೊಳ್ಳದ
ಮಂತ್ರಗಳು ಪ್ರಳಯಕಾಲದವರೆಗೂ


ಸರಕಾರಿಗಂಗಳದಿ ಉಣ್ಣುತ್ತಲೇ
ರಹಸ್ಯ ವರದಿ ಸರಕು ವ್ಯಾಪಾರ
ನೆರೆಮನೆಯ ದೊರೆಯಣ್ಣಗಳ ಮಾರುಕಟ್ಟೆಯಲ್ಲಿ ಬಿಸಿಬಿಸಿ
ಆದರೆ ಬಡಪಾಯಿ ವೇಮುಲಗೆ
ಕಟ್ಟಿದ್ದು ಬಹು ದೊಡ್ಡ ಪಟ್ಟ

೧೦
ಶತ ಶತಮಾನಗಳ ಚರಿತ್ರೆಯ ಚೀಲ
ತುಂಬಿಕೊಂಡಿದ್ದು ಬದಲಿಲ್ಲ.
ರಾಜಕಾರಣಕ್ಕೇನು? ಗೊತ್ತಿರುವುದಿಷ್ಟೇ
ತಮ್ಮವಾದದ ಶವಪೆಟ್ಟಿಗೆಗೆ ಹೆಣ ಯಾರದ್ದಾದರೇನು?
ಮೊಳೆ ಹೊಡೆದು ಸಿದ್ಧಮಾಡುವುದೇ ಪರಮಗುರಿ
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...