Home / ಕವನ / ಕವಿತೆ / ಈ ಸಲದ ಯುಗಾದಿ

ಈ ಸಲದ ಯುಗಾದಿ

ಕಳೆದ ಯುಗಾದಿಯಂತಲ್ಲ ಈ ಸಲದ ಯುಗಾದಿ
ಕಳೆದ ಯುಗಾದಿ ಹುಸಿಮಳೆಯಂತೆ ಮಿಂಚಿ ಗುಡುಗಿ
ಹೊರಟು ಹೋಯಿತು ನೆಲವನ್ನು ತೊಯ್ಯದೆ

ಈ ಸಲದ ಯುಗಾದಿ ನಿಜಕ್ಕೂ ಹೊಸ ಯುಗವನ್ನು
ತೆರೆಯುವುದು-ಎಂತಲೇ ಹೊಸ ತೀರ್ಮಾನಗಳ
ಮಾಡೋಣವೆಂದು ಕುಳಿತರೆ ಸಾಕು ಆಕ್ರಮಿಸುತ್ತವೆ

ಸೊಳ್ಳೆಗಳು! ಈ ಯುಗದ ಆದಿಯಲ್ಲಿ ನೀನು,
ಕೊನೆಯಲ್ಲಿ ನಾವು ಎಂದು ಹಾಡುತ್ತವೆ. ಹೆದರಲಾರೆ
ಕೊಂಡು ತಂದಿರುವೆ ಹೊಸತೊಂದು ಸೊಳ್ಳೆ ಪರದೆ

ಕಳೆದ ಯುಗಾದಿಯಂತಲ್ಲ ಈ ಯುಗಾದಿಯೆಂಬು-
ದೀ ಕ್ರಿಮಿಕೀಟಗಳಿಗೇನು ಗೊತ್ತು? ಕಳೆದ ಯುಗಾದಿಗೆ
ಗಸಗಸೆ ಪಾಯಸ, ಸೀಕರಣೆ, ಹೊಸ ಬಟ್ಟೆ ಬರೆ

ಸಿನೆಮ, ಸ್ತ್ರೀಸಂಗ, ಬಹಳ ಮಜವಿತ್ತು ನಿಜ; ಈ ಬಾರಿ
ಇವೊಂದೂ ಇಲ್ಲ. ನೆನಪುಗಳಷ್ಟೆ ಇವೆ. ಕಾರಣ
ವಾಸ್ತವಕ್ಕಿಂತ ಅದರ ನೆನಪೇ ಹೆಚ್ಚು ಸವಿಯೆಂದು

ಸವಿಯುವೆನು ಗಾಳಿಯನು, ಗಾಳಿಯಲಿ ತೇಲಿ ಬರುವ
ನೆರೆಮನೆಯ ಸುಂದರಿಯ ಅಡುಗೆಯ ಸುವಾಸವನು!
ಈ ಸಲದ ಯುಗಾದಿಗೆ ಗ್ರೀಕರ ನಾಟಕಗಳು

ಅಯನೆಸ್ಕೊ ಕಥೆಗಳು, ಅನಂತಮೂರ್ತಿಯ ‘ಅವಸ್ಥೆ’
ಸಾಕಲ್ಲ ಒಬ್ಬ ಲೇಖಕನಿಗಿನ್ನೇನು ಬೇಕು?
ಅಲ್ಲದೆ ನನ್ನದೂ ಕೆಲವು ತುಣುಕುಗಳಿವೆ ಬಿಡಿಯಾಗಿ

ಗಾಳಿಯಲ್ಲಿ ಹಾರಿಹೋಗದಂತೆ ಹರಿದ್ವಾರದಿಂದ ತರಿಸಿದ
ಕಲ್ಲೊಂದನಿರಿಸಿರುವೆ. ಎಷ್ಟೋ ಸಾವಿರ ವರುಷ
ಗಂಗೆಯಲಿ ಮೈ ತೊಳೆದು ನುಣುಪಾದ ದುಂಡುಕಲ್ಲು

ಕುಳಿತಿದೆ ನಿಜಕ್ಕೂ ನನ್ನ ಮನಸ್ಸಾಕ್ಷಿಯ ಮೇಲೆ
ನನ್ನ ವಾಗರ್ಥಗಳ ಪಾಪವನ್ನು ತನ್ನೊಳಗೆ ಹೀರುತ್ತ
ನಿಮಿಷ ನಿಮಿಷವೂ ಅದರ ಭಾರ ಹೆಚ್ಚುತ್ತ
****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...