Home / ಲೇಖನ / ಇತರೆ / ನವಿಲುಗರಿ..

ನವಿಲುಗರಿ..

* ಹಲವರು ನಡೆದು ನಡೆದು ದಾರಿ.

* ಸಿನಿಮಾ ನಟರಾಗುವ ಗುರಿ ಹೊಂದಿ, ಅದಕ್ಕಾಗಿ ಇಂದಿನಿಂದಲೇ ಒಳ್ಳೆಯ ಮೈಕಟ್ಟು, ಮಾತು, ಹಾಸ್ಯ, ಅನುಕರಣೆ ಇತ್ಯಾದಿ ಅಭ್ಯಾಸ ಮಾಡಿ.

* ಹಸಿಶುಂಠಿ, ಒಣ ಶುಂಠಿಯಿಂದ ಆರೋಗ್ಯ, ಸೌಂದರ್‍ಯ ವೃದ್ಧಿಗಾಗಿ, ನಿತ್ಯ ಆಹಾರದಲ್ಲಿ ಬಳಸಿ.

* ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ೫,೫೦೦ ಕೇಜಿ ಚಿನ್ನವಿದೆ. ಅದನ್ನು ವಿವಿಧ ಬ್ಯಾಂಕಿನಲ್ಲಿಟ್ಟಿರುವರು. ವರ್ಷಕ್ಕೆ ೮೦ ಕೇಜಿ ಚಿನ್ನ ಬಡ್ಡಿಯಾಗಿ ಬರುವುದು.

* ಕ್ರಿಸ್ತ ಶಕ ೫ನೆಯ ಶತಮಾನದಲ್ಲಿ ಚೀನಾದ ತತ್ವಜ್ಞಾನಿಗಳಾದ ಗೊಂಗುಬನ್ (ಲುಬನ್) ಮೋದಿ (ಮೋಝಿ) ಅವರು ಗಾಳಿ ಪಟವನ್ನು ಕಂಡು ಹಿಡಿದರು.

* ಶುಂಠಿ ಸುವಾಸನೆ, ರುಚಿ, ಹಸಿವು ವೃದ್ಧಿಸುವುದು.

* ದಿನಾಂಕ ೦೨-೦೮-೧೭೧೫ರಂದು ಪ್ರಸಾದವೆಂದು ಲಡ್ಡು ನೀಡುವ ಸಂಪ್ರದಾಯವು ತಿರುಪತಿ ದೇವಸ್ಥಾನದಲ್ಲಿ ಮೊದಲಾಯಿತು. ಈ ಸಂಪ್ರದಾಯಕ್ಕೆ ಈಗ ೩೦೦ ವರ್ಷಗಳು ವರ್ಷಕ್ಕೆ ಬರೀ ಲಡ್ಡಿನಿಂದಲೇ ೧೯೦ ಕೋಟಿ ರೂಪಾಯಿ ಬರುತ್ತಿದೆ.

* ಕನ್ನಡಕ್ಕೊಬ್ಬರೇ ಕೈಲಾಸಂ ಅವರು ದಿನಾಂಕ ೨೯-೦೭-೧೮೮೫ರಂದು ಮೈಸೂರಿನಲ್ಲಿ ಹುಟ್ಟಿದರು. ಇವರ ತಂದೆ-ತಮಿಳುನಾಡಿನ ಜಸ್ಟೀಸ್ ತ್ಯಾಗರಾಜ ಪರಮಶಿವ ಅಯ್ಯರ್, ತಾಯಿ- ಕಮಲಮ್ಮ.

* ಒಣ ಶುಂಠಿ ಹಾಲಿನಲ್ಲಿ ಹಾಕಿ ಕುದಿಸಿ, ಬೆಲ್ಲದೊಂದಿಗೆ ಕಲಿಸಿ ನಿತ್ಯ ಕುಡಿಯುವುದರಿಂದ ಗಂಟಲು ನೋವು, ಕೆಮ್ಮು, ಕಫ, ನಿವಾರಣೆಯಾಗುವುದು.

* ಕಳ್ಳಿ ಗಿಡಕ್ಕೆ ಎಲೆಗಳಿಲ್ಲ!

* ಸೋಡಿಯಂನಿಂದ ಕಂದು- ಕಬ್ಬಿಣದಿಂದ ಕೆಂಪು ಬಣ್ಣ ಪೊಟಾಸಿಯಂನಿಂದ ಹಳದಿ- ಮ್ಯಾಂಗನೀಸ್‌ನಿಂದ ಗುಲಾಬಿ ಬಣ್ಣ… ಹೀಗೆ ವಿವಿಧ ಬಣ್ಣಗಳಿಂದ ಶಿಲೆಗಳು ರೂಪುಗೊಳ್ಳಲಿದೆ.

* ಆಲ್ಬೇನಿಯಾದಲ್ಲಿ ಶೇಕಡ ೭೦% ರಷ್ಟು ಟರ್‍ಕಿಯಲ್ಲಿ ಶೇಕಡ ೯೮% ರಷ್ಟು ಮುಸ್ಲಿಮರಿದ್ದಾರೆ. ಇವು ಎರಡು ದೇಶಗಳೂ ಯುರೋಪ್‌ನಲ್ಲಿವೆ.

* ಜನಪ್ರಿಯ ಹಾಡುಗಾರ ಮನ್ನಾಡೆ ದಿನಾಂಕ ೦೧-೦೫-೧೯೧೯ ರಲ್ಲಿ ಕೋಲ್ಕತ್ತದಲ್ಲಿ ಜನಿಸಿದರು. ಇವರ ಹೆಸರು- ಪ್ರಬೋಧ ಚಂದ್ರ ಅಡ್ಡ ಹೆಸರು- ಮನ್ನಾ ಎಂದು. ೩,೫೦೦ ಹಾಡುಗಳನ್ನು ಸಿನಿಮಾದಲ್ಲಿ ಹಾಡಿದ್ದಾರೆ. ೨೦೦೭ರಲ್ಲಿ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತು. “ಜಿಮೊನೆರ್ ಜುಲ್ಲಾ ಘೋರೆ” ಎನ್ನುವುದು ಇವರ ಬಂಗಾಳಿ ಆತ್ಮಕಥೆ ಇದನ್ನು “ಮೆಮೊರೀಸ್ ಕಮ್ ಆಲೈವ್” ಎಂದು ಇಂಗ್ಲೀಷ್‌ಗೆ ಅನುವಾದಗೊಂಡಿದೆಯಲ್ಲದೆ ಹಿಂದಿ-ಮರಾಠಿಗೂ ಅನುವಾದವಾಗಿದೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ