Home / ಲೇಖನ / ಇತರೆ / ನವಿಲುಗರಿ..

ನವಿಲುಗರಿ..

* ಹಲವರು ನಡೆದು ನಡೆದು ದಾರಿ.

* ಸಿನಿಮಾ ನಟರಾಗುವ ಗುರಿ ಹೊಂದಿ, ಅದಕ್ಕಾಗಿ ಇಂದಿನಿಂದಲೇ ಒಳ್ಳೆಯ ಮೈಕಟ್ಟು, ಮಾತು, ಹಾಸ್ಯ, ಅನುಕರಣೆ ಇತ್ಯಾದಿ ಅಭ್ಯಾಸ ಮಾಡಿ.

* ಹಸಿಶುಂಠಿ, ಒಣ ಶುಂಠಿಯಿಂದ ಆರೋಗ್ಯ, ಸೌಂದರ್‍ಯ ವೃದ್ಧಿಗಾಗಿ, ನಿತ್ಯ ಆಹಾರದಲ್ಲಿ ಬಳಸಿ.

* ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ೫,೫೦೦ ಕೇಜಿ ಚಿನ್ನವಿದೆ. ಅದನ್ನು ವಿವಿಧ ಬ್ಯಾಂಕಿನಲ್ಲಿಟ್ಟಿರುವರು. ವರ್ಷಕ್ಕೆ ೮೦ ಕೇಜಿ ಚಿನ್ನ ಬಡ್ಡಿಯಾಗಿ ಬರುವುದು.

* ಕ್ರಿಸ್ತ ಶಕ ೫ನೆಯ ಶತಮಾನದಲ್ಲಿ ಚೀನಾದ ತತ್ವಜ್ಞಾನಿಗಳಾದ ಗೊಂಗುಬನ್ (ಲುಬನ್) ಮೋದಿ (ಮೋಝಿ) ಅವರು ಗಾಳಿ ಪಟವನ್ನು ಕಂಡು ಹಿಡಿದರು.

* ಶುಂಠಿ ಸುವಾಸನೆ, ರುಚಿ, ಹಸಿವು ವೃದ್ಧಿಸುವುದು.

* ದಿನಾಂಕ ೦೨-೦೮-೧೭೧೫ರಂದು ಪ್ರಸಾದವೆಂದು ಲಡ್ಡು ನೀಡುವ ಸಂಪ್ರದಾಯವು ತಿರುಪತಿ ದೇವಸ್ಥಾನದಲ್ಲಿ ಮೊದಲಾಯಿತು. ಈ ಸಂಪ್ರದಾಯಕ್ಕೆ ಈಗ ೩೦೦ ವರ್ಷಗಳು ವರ್ಷಕ್ಕೆ ಬರೀ ಲಡ್ಡಿನಿಂದಲೇ ೧೯೦ ಕೋಟಿ ರೂಪಾಯಿ ಬರುತ್ತಿದೆ.

* ಕನ್ನಡಕ್ಕೊಬ್ಬರೇ ಕೈಲಾಸಂ ಅವರು ದಿನಾಂಕ ೨೯-೦೭-೧೮೮೫ರಂದು ಮೈಸೂರಿನಲ್ಲಿ ಹುಟ್ಟಿದರು. ಇವರ ತಂದೆ-ತಮಿಳುನಾಡಿನ ಜಸ್ಟೀಸ್ ತ್ಯಾಗರಾಜ ಪರಮಶಿವ ಅಯ್ಯರ್, ತಾಯಿ- ಕಮಲಮ್ಮ.

* ಒಣ ಶುಂಠಿ ಹಾಲಿನಲ್ಲಿ ಹಾಕಿ ಕುದಿಸಿ, ಬೆಲ್ಲದೊಂದಿಗೆ ಕಲಿಸಿ ನಿತ್ಯ ಕುಡಿಯುವುದರಿಂದ ಗಂಟಲು ನೋವು, ಕೆಮ್ಮು, ಕಫ, ನಿವಾರಣೆಯಾಗುವುದು.

* ಕಳ್ಳಿ ಗಿಡಕ್ಕೆ ಎಲೆಗಳಿಲ್ಲ!

* ಸೋಡಿಯಂನಿಂದ ಕಂದು- ಕಬ್ಬಿಣದಿಂದ ಕೆಂಪು ಬಣ್ಣ ಪೊಟಾಸಿಯಂನಿಂದ ಹಳದಿ- ಮ್ಯಾಂಗನೀಸ್‌ನಿಂದ ಗುಲಾಬಿ ಬಣ್ಣ… ಹೀಗೆ ವಿವಿಧ ಬಣ್ಣಗಳಿಂದ ಶಿಲೆಗಳು ರೂಪುಗೊಳ್ಳಲಿದೆ.

* ಆಲ್ಬೇನಿಯಾದಲ್ಲಿ ಶೇಕಡ ೭೦% ರಷ್ಟು ಟರ್‍ಕಿಯಲ್ಲಿ ಶೇಕಡ ೯೮% ರಷ್ಟು ಮುಸ್ಲಿಮರಿದ್ದಾರೆ. ಇವು ಎರಡು ದೇಶಗಳೂ ಯುರೋಪ್‌ನಲ್ಲಿವೆ.

* ಜನಪ್ರಿಯ ಹಾಡುಗಾರ ಮನ್ನಾಡೆ ದಿನಾಂಕ ೦೧-೦೫-೧೯೧೯ ರಲ್ಲಿ ಕೋಲ್ಕತ್ತದಲ್ಲಿ ಜನಿಸಿದರು. ಇವರ ಹೆಸರು- ಪ್ರಬೋಧ ಚಂದ್ರ ಅಡ್ಡ ಹೆಸರು- ಮನ್ನಾ ಎಂದು. ೩,೫೦೦ ಹಾಡುಗಳನ್ನು ಸಿನಿಮಾದಲ್ಲಿ ಹಾಡಿದ್ದಾರೆ. ೨೦೦೭ರಲ್ಲಿ ಇವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತು. “ಜಿಮೊನೆರ್ ಜುಲ್ಲಾ ಘೋರೆ” ಎನ್ನುವುದು ಇವರ ಬಂಗಾಳಿ ಆತ್ಮಕಥೆ ಇದನ್ನು “ಮೆಮೊರೀಸ್ ಕಮ್ ಆಲೈವ್” ಎಂದು ಇಂಗ್ಲೀಷ್‌ಗೆ ಅನುವಾದಗೊಂಡಿದೆಯಲ್ಲದೆ ಹಿಂದಿ-ಮರಾಠಿಗೂ ಅನುವಾದವಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...