Home / ಕವನ / ಕವಿತೆ / ಸರಿಗಾಣೆನು ಧರಣಿಯೊಳಗಮ್ಮ

ಸರಿಗಾಣೆನು ಧರಣಿಯೊಳಗಮ್ಮ

ಸರಿಗಾಣೆನು ಧರಣಿಯೊಳಗಮ್ಮ ಕರುಣೆ ಎಲ್ಲಮ್ಮ ||ಪ||

ಏನು ಹೇಳಲಿ ನಿನ್ನ ಕೌತುಕವ ನೀನಾದಿಯಲ್ಲಿ ತುಂಬಿ ತುಳುಕಿದಿ
ಏಕೆಂಬ ಭಾವ ||ಅ.ಪ.||

ಪ್ರಥಮ ಕೃತಯುಗದಲ್ಲಿ ಪರಶಿವಗೆ ಸತಿಯಾಗಿ ನೀನು
ನಿತ್ಯ ಮೆರೆದೆ ರಜತಗಿರಿಯೊಳಗೆ
ಕೃತಕ ಮದುಕೈಟಭರ ಪ್ರಾಣ ಹತವ ಮಾಡಿದಿ ಯುದ್ಧ ಮುಖದಲಿ
ಹಿತವು ತೋರಿದಿ ಸುರರ ಸಮೂಹಕೆ ಪ್ರತಿಯು ಉಂಟೆ
ನಿನ್ನ ಮಹಾತ್ಮೆಗೆ? ||೧||

ತ್ರೇತಾಯುಗದಲ್ಲಿ ಭೂಮಿಯೊಳು ಜನಿಸಿ ರಾಘವನ ಸ್ತ್ರೀಯೆನಿಸಿ
ಕೋತಿ ಬಳಗವ ಕೂಡಿಕೊಂಡು ಸೇತುಬಂಧನ ಕಟ್ಟಿ ಕಲಹದಿ
ಪಾತಕಿ ರಾವಣನ ಕುಲವನು ನಾಶಮಾಡಿಸಿದೆಲ್ಲ ತತ್ವದಿ ||೨||

ದ್ವಾಪರ ಯುಗದಲ್ಲಿ ದೃಪದನಿಗೆ ನೀ ಪುತ್ರಿಯಾಗಿ
ಪತ್ನಿಯಾದೆ ಪಂಚಪಾಂಡವರಿಗೆ
ಪಾಪಿ ಕೌರವ ಕರ್ಣ ದುಶ್ಯಾಸನರು ತಾಪಕೊಡಲು ನಿನ್ನ ಜನ್ಮಕೆ
ಕೋಪ ಜ್ವಾಲೆಯ ತಾಳಿ ನರಕದ ಕೂಪದೊಳು
ಕುರುಕುಲವ ಕೆಡುಹಿದಿ ||೩||

ಕಲಿಯುಗದೊಳಗಾದಿ ಎಲ್ಲಮ್ಮ ಸುಲಲಿತದಿ
ಜಮದಗ್ನಿ ಋಷಿಗೆ ಭಾರ್ಯಳಾದೆಮ್ಮ
ಕಲಹಕಾರಿ ಕಾರ್ತಿವೀರ್ಯನ ತಲೆಯ ಕೊಯ್ಸಿಬಿಟ್ಟಿಯಮ್ಮ
ಖಲಿಂದರ ಶಿಶುನಾಳಧೀಶಗ ಒಲಿದು ಪ್ರಿಯ ಮಾತೆಯಾದೆ
ಸರಿಗಾಣೆ ಧರಣಿಯೊಳಗಮ್ಮ ||೪||

* * * *

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...