ಛೋಟೀವಾಲ

ಎಲ ಎಲಾ ಛೋಟೀವಾಲ! ಹತ್ತು ಅವತಾರಗಳ–
ನೆತ್ತಿಯೂ ಸಾಲದೆ ಹನ್ನೊಂದನೆಯ ಅವತಾರವ-
ನೆತ್ತಿಬಿಟ್ಟೆಯಲ! ಹುಟ್ವಿಸಿದ ದೇವರು ಯಾರಿಗೂ
ಹುಲ್ಲು ಮೇಯಿಸನಯ್ಯ ಒಂದೊಂದು ಜೀವಕೂ
ಬದುಕುವ ಒಂದೊಂದು ಉಪಾಯವನವನು
ಕರುಣಿಸುವನಯ್ಯ! ಕೆಲವರನು ಕುಣಿಸುವನು
ಕೆಲವರನು ಮಣಿಸುವನು ಕೆಲವರನು ಪಲ್ಲಂಗದಲ್ಲಿ
ಕೂರಿಸುವನು ಕೆಲವರನು ಬಿಸಿಲಲಿ ನಿಲ್ಲಿಸುವನು

ಇನ್ನು ಕೆಲವರಿಗೆ ಅಡಿಯಿಂದ ಮುಡಿವರೆಗೆ
ಬಣ್ಣವ ಹಚ್ಚಿ ಮೇಲೆಲ್ಲ ಅಭ್ರಕದ ಹುಡಿ ಅರಚಿ
ತಲೆಯ ಶಿಖರದಲ್ಲಿ ಮಯಣದಲೊತ್ತಿ ತಿರುವಿದ ಜುಟ್ಟು
ಕೈಯ ಕೆಳಗೊಂದು ದಂಡವನಿಟ್ಟು ಬಿಟ್ಟು
ಕುಳಿತುಕೊಳ್ಳಿಸುವನು ಖಾನಾವಳಿಯ ಮುಂದೆ-ಇಲ್ಲ
ಹುಲ್ಲ ಮೇಯಿಸನಯ್ಯ ನೆಲ್ಲನೂ ಮೇಯಸನು
ಸಂಜೆ ವೇಳೆಗೆ ಕರುಣಿಸುವನು ದಿನದ ಪಗಾರ
ದಾಟಲು ಸಂಸಾರ ಸಾಗರದ ನಿತ್ಯ ಅಪರಂಪಾರ

ಎಲ ಎಲಾ ಛೋಟೀವಾಲ! ಏನಿದು ಜೀವಜಾಲ!
ಅವಧೂತನೆ ದೇವರ ಅತಿಕೊನೆಯ ದೂತನೆ
ಮಹಾತ್ಮನೆ ಸಾಕ್ಷಾತ್ ಪರಮಾತ್ಮನೆ ನಮಸ್ಕಾರ
ದಾಟಿಸುವೆಯ ನನ್ನ ಗಂಗಾನದಿಯ ಪಾರ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃತಕತೆಯಂದ ನೈಜತೆಗೆ
Next post ಕಾರದ ಬಯಕೆ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…