ಛೋಟೀವಾಲ

ಎಲ ಎಲಾ ಛೋಟೀವಾಲ! ಹತ್ತು ಅವತಾರಗಳ–
ನೆತ್ತಿಯೂ ಸಾಲದೆ ಹನ್ನೊಂದನೆಯ ಅವತಾರವ-
ನೆತ್ತಿಬಿಟ್ಟೆಯಲ! ಹುಟ್ವಿಸಿದ ದೇವರು ಯಾರಿಗೂ
ಹುಲ್ಲು ಮೇಯಿಸನಯ್ಯ ಒಂದೊಂದು ಜೀವಕೂ
ಬದುಕುವ ಒಂದೊಂದು ಉಪಾಯವನವನು
ಕರುಣಿಸುವನಯ್ಯ! ಕೆಲವರನು ಕುಣಿಸುವನು
ಕೆಲವರನು ಮಣಿಸುವನು ಕೆಲವರನು ಪಲ್ಲಂಗದಲ್ಲಿ
ಕೂರಿಸುವನು ಕೆಲವರನು ಬಿಸಿಲಲಿ ನಿಲ್ಲಿಸುವನು

ಇನ್ನು ಕೆಲವರಿಗೆ ಅಡಿಯಿಂದ ಮುಡಿವರೆಗೆ
ಬಣ್ಣವ ಹಚ್ಚಿ ಮೇಲೆಲ್ಲ ಅಭ್ರಕದ ಹುಡಿ ಅರಚಿ
ತಲೆಯ ಶಿಖರದಲ್ಲಿ ಮಯಣದಲೊತ್ತಿ ತಿರುವಿದ ಜುಟ್ಟು
ಕೈಯ ಕೆಳಗೊಂದು ದಂಡವನಿಟ್ಟು ಬಿಟ್ಟು
ಕುಳಿತುಕೊಳ್ಳಿಸುವನು ಖಾನಾವಳಿಯ ಮುಂದೆ-ಇಲ್ಲ
ಹುಲ್ಲ ಮೇಯಿಸನಯ್ಯ ನೆಲ್ಲನೂ ಮೇಯಸನು
ಸಂಜೆ ವೇಳೆಗೆ ಕರುಣಿಸುವನು ದಿನದ ಪಗಾರ
ದಾಟಲು ಸಂಸಾರ ಸಾಗರದ ನಿತ್ಯ ಅಪರಂಪಾರ

ಎಲ ಎಲಾ ಛೋಟೀವಾಲ! ಏನಿದು ಜೀವಜಾಲ!
ಅವಧೂತನೆ ದೇವರ ಅತಿಕೊನೆಯ ದೂತನೆ
ಮಹಾತ್ಮನೆ ಸಾಕ್ಷಾತ್ ಪರಮಾತ್ಮನೆ ನಮಸ್ಕಾರ
ದಾಟಿಸುವೆಯ ನನ್ನ ಗಂಗಾನದಿಯ ಪಾರ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃತಕತೆಯಂದ ನೈಜತೆಗೆ
Next post ಕಾರದ ಬಯಕೆ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys