ಅನ್ನಾವತಾರ

ಲಾರಿ ಆಟೋ ಕಾರು ಕೂಗಿ ಹಾಯುತ್ತಿವೆ.
ರಸ್ತೆಬದಿಯ ಚರಂಡಿ ದಂಡೆಯಲ್ಲಾಡುತಿದೆ
ಪುಟ್ಟ ಮಗು; ಕಪ್ಪು, ತೊಟ್ಟಿರುವ ಬಟ್ಟೆಗೆ ಹತ್ತು
ಹರಕು, ಬತ್ತಿದ ಮೈಯಿ, ಎಣ್ಣೆ ಕಾಣದ ತಲೆ.
ಅಲ್ಲೆ ಮಾರಾಚೆಯಲಿ ಮಣ್ಣ ಕೆದರುತ್ತಿದೆ
ಪುಟ್ಟಲಂಗದ ಹುಡುಗಿ. ಅಕ್ಕನೋ ಏನೋ. ಕೈ
ಚಾಚಿ ಕರೆಯುತ್ತಿದೆ ಬಾ ಎಂದು. ತಾನೆ ಮಗು,
ತನಗೇ ಆಡುವ ವಯಸು, ನೋಡಿಕೊಳ್ಳುವ ಹೊಣೆಯ
ತಾಯಿ ಹೊರಿಸಿರಬೇಕು, ಆಕೆ ಯಾರದೋ ಮನೆಗೆ
ಕಲ್ಲು ಮಣ್ಣನ್ನು ಹೊತ್ತು ಸಾಗಿಸುತ್ತಿರಬೇಕು;
ರಾತ್ರಿಕೂಳಿನ ಕಥೆಯ ಸುಖಾಂತ್ಯಕ್ಕೆ ಮುಟ್ಟಿಸಲು
ಕರುಣಾಳು ದೈವ ಕೈಹಿಡಿದು ನಡೆಸಿರಬೇಕು.

ಕರುಳ ರಸ್ತೆಯಲಿಟ್ಟು ಕಲ್ಲ ಬಗಲಲ್ಲಟ್ಟು ದುಡಿಸಲಾರವೆ ಹೊಟ್ಟೆಬಾಯಿ
ಅನ್ನಾವತಾರಕ್ಕೆ ಹೆಚ್ಚೇನೂ ಬೇಕಿಲ್ಲ, ಮಗುವ ಬಿಟ್ಟರೆ ಸಾಕು ತಾಯಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೇಣದ ಬತ್ತಿ
Next post ಅರ್ಪಣೆ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys