ನಾವು ಬಾಲಕರಹುದೋ

ನಾವು ಬಾಲಕರಹುದೋ
ನೀವೆಲ್ಲರು ಕಾವಲಾಗಿರಬಹುದೋ || ಪ ||

ಪಾವನಾತ್ಮಕ ಯಾ ಮಹಮದ
ಈ ಮಹಾಮಂತ್ರವನು ಜಪಿಸುತ
ದೇವಲೋಕದ ಅಸ್ತ್ರ ಪಿಡಿದು
ಆ ಯಜೀದನ ಸಮರಮುಖದಲಿ || ಅ. ಪ. ||

ಹೋಗಿ ಕರ್ಬಲದೊಳಗೆ ಕೂಗ್ಯಾಡುತ
ಸಾಗಿ ಮಾರ್ಬಲದೊಳಗೆ
ಈಗಳೇ ದಾಮಶದ ಪೇಟಿಯ
ಬೇಗನೆ ಮದೀನಶಾರದ
ಚಾಗಕ್ಹೋಗಿ ಹೊಂದುನು ಬಾ || ೧ ||

ಹಸುಳರೆಲ್ಲರು ನೆರೆದು ವಾರಿಗಿತಕ್ಕ
ಹೊಸ ಅಸ್ತ್ರವನು ತೊರಿದು
ವಸುಧಿಪತಿ ಶಿಶುನಾಳಧೀಶನು
ಮಸೆದು ಕೊಟ್ಟಂಥಸ್ತ್ರ ಪಿಡಿದು
ಅಸುವಗೊಂಬುವ ಈ ಕ್ಷಣದಿ ಗಡ
ಹುಸಿಯ ಮಾತುಗಳಾಡದೆ ನಡಿ || ೨ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲವಯ್ಯ ಶೆಟ್ಟಿ
Next post ಚಲೋ ಜೀನಾ ಚಲೋ ಬಾಹಿರೆ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys