ಬಿಟ್ಟೇವಣ್ಣಾ ಬಹುಕೆಟ್ಟ ಬಣ

ಬಿಟ್ಟೇವಣ್ಣಾ ಬಹುಕೆಟ್ಟ ಬಣ || ಪ ||

ಹ್ಯಾವ ತೊಟ್ಟಾಕ್ಷಣ
ಜೀವಗುಟ್ಟು ಪ್ರಾಣ
ಮೋಹನಟ್ಟುತಣ
ಈ ಓಣಿಯೊಳಾಡುವ ದೇವರ ಸ್ಥಲ
ಕೇವಲ ಐಸುರದಲಾವಿಯ ಹಬ್ಬ ನಾವು || ೧ ||

ಏಳೆಂಟು ಹುಡುಗರೋ ಗೋಳಿಟ್ಟ ಎಡಗರು
ಕಾಳಕತ್ತಲದೊಳು ಕರದು ಕೇಳಲು ಸ್ವರ
ಏಳವಲ್ದು ಕಾಲು ಕೀಳವಲ್ದು ತಾಳಮ್ಯಾಳಸಲ್ದು
ನಾಳಿನ ದಿನ ಬರಬಾರದು ಇಲ್ಲಿಗೆ
ಗಾಳಿಗುದ್ದಿ ಮೈನೋಯಿಸಿಕೊಂಡೆಲ್ಲೋ ತಮ್ಮಾ || ೨ ||

ಸ್ವಾಮಿ ಇಮಾಮಹಸೇನಿ ಹುಸೇನಿಗೆ
ನಾಮಸ್ಮರಣೆಯನ್ನು ಮರೆತು ಮು೦ದಕ್ಕ ಹೆಜ್ಜಿ
ಇಟ್ಟುಕಟ್ಟಿ ನಡುದಾರಿ ಮೆಟ್ಟಿ ಓಕಳಿಯ ಕಟ್ಟಿ
ಕಾಮರನ ಕಾಣುತ ಬೆದರಿಕಿ ಬಂದಿತು
ಭೂಮಿಪ ಶಿಶುನಾಳಧೀಶನ ಮುಂದ ನಿಂತು || ೩ ||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತೆ ಮಳೆ ಹೊಯ್ಯಲಿದೆ
Next post ಕವಲು ದಾರಿ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys