ಪಾಪ ರಹಿತ ಪರಮಾತ್ಮ ಸರ್ವೋತ್ತಮ

ಪಾಪ ರಹಿತ ಪರಮಾತ್ಮ ಸರ್ವೋತ್ತಮ
ತಾಪಸಂಹರ ಪರಾತ್ಪರಾ ||ಪ||

ನೋಡಿ ಏನು ಭಜಿಸಲಿ ನಾನು
ಕಾಡಿದರೆ ಸಿಗುವದು ಏನು
ರೂಢಿಗೈವನೇ ಕಾಲಕೂಟವಿಷ
ಕೇಡಿಗ ಶೇಷಾಭರಣ ||ಅ.ಪ.||

ಧನಿಕನೆಂದು ನಾನನ್ನುವೆನೆ
ಮನಕೆ ಸಂಶಯವು ಬರುತಲಿದೆ
ತಿರಿದುಣ್ಣುತ ನೀ ತಿರುಗುತಿಹೆ
ಪುಂಡನೆಂಬೆನೇ ಬಂಡುಮಾಡಿದಾ ಮಧ್ಯ
ಪಾಂಡವಾ ಮಲ್ಲಯುದ್ಧದಿ
ಕಂಡು ಕಂಡು ನಾನೆಂತು ಭಜಿಸಲಿ
ಕಂತುಹರನೆ ಗೌರಿಕಾಂತನೆ ||೧||

ಶಾಂತಮೂರ್ತಿ ನೀ ಎಂಬೆನೆ ನಾನು
ಭ್ರಾಂತಿಯಿಂದ ತ್ರಿಶೂಲವ ಪಿಡಿದೆ
ಉರಿಗಣ್ಣು ಉರಿಹಸ್ತ ಹಿರಿಯ ದೇವರೊಳು
ನಿರುತ ಬೇಡಿ ಕಾಡುತಿಹುದು ಖೋಡಿ ಮನ ||೨||

ವಾಹನ ಬೇಡಲು ಮತ್ತೇನು
ಆದಿ ಅನಾದಿ ಮುದಿಎತ್ತು ತಾನು
ಆವ ಆಶೆಯಿರುವದು ಇನ್ನು
ದೇವ ಭವದ ಪಾಶಹರಿ ನೀನು
ಕಾವ ಕರುಣಿ ಶಿಶುನಾಳಧೀಶ
ಮುಕ್ತಿಯೊಂದು ಕೊಡು ಪರಮೇಶ ||೩||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನೆ ಅನಾದಿ ನಾನೇನು ಬೇಡಲಿ ಶಂಭೋಲಿಂಗಾ
Next post ಏನಿದು ಪೇಳು ಆತ್ಮಗೆ ಪರಮಾತ್ಮಗೆ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys