ಪಾಪ ರಹಿತ ಪರಮಾತ್ಮ ಸರ್ವೋತ್ತಮ

ಪಾಪ ರಹಿತ ಪರಮಾತ್ಮ ಸರ್ವೋತ್ತಮ
ತಾಪಸಂಹರ ಪರಾತ್ಪರಾ ||ಪ||

ನೋಡಿ ಏನು ಭಜಿಸಲಿ ನಾನು
ಕಾಡಿದರೆ ಸಿಗುವದು ಏನು
ರೂಢಿಗೈವನೇ ಕಾಲಕೂಟವಿಷ
ಕೇಡಿಗ ಶೇಷಾಭರಣ ||ಅ.ಪ.||

ಧನಿಕನೆಂದು ನಾನನ್ನುವೆನೆ
ಮನಕೆ ಸಂಶಯವು ಬರುತಲಿದೆ
ತಿರಿದುಣ್ಣುತ ನೀ ತಿರುಗುತಿಹೆ
ಪುಂಡನೆಂಬೆನೇ ಬಂಡುಮಾಡಿದಾ ಮಧ್ಯ
ಪಾಂಡವಾ ಮಲ್ಲಯುದ್ಧದಿ
ಕಂಡು ಕಂಡು ನಾನೆಂತು ಭಜಿಸಲಿ
ಕಂತುಹರನೆ ಗೌರಿಕಾಂತನೆ ||೧||

ಶಾಂತಮೂರ್ತಿ ನೀ ಎಂಬೆನೆ ನಾನು
ಭ್ರಾಂತಿಯಿಂದ ತ್ರಿಶೂಲವ ಪಿಡಿದೆ
ಉರಿಗಣ್ಣು ಉರಿಹಸ್ತ ಹಿರಿಯ ದೇವರೊಳು
ನಿರುತ ಬೇಡಿ ಕಾಡುತಿಹುದು ಖೋಡಿ ಮನ ||೨||

ವಾಹನ ಬೇಡಲು ಮತ್ತೇನು
ಆದಿ ಅನಾದಿ ಮುದಿಎತ್ತು ತಾನು
ಆವ ಆಶೆಯಿರುವದು ಇನ್ನು
ದೇವ ಭವದ ಪಾಶಹರಿ ನೀನು
ಕಾವ ಕರುಣಿ ಶಿಶುನಾಳಧೀಶ
ಮುಕ್ತಿಯೊಂದು ಕೊಡು ಪರಮೇಶ ||೩||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನೆ ಅನಾದಿ ನಾನೇನು ಬೇಡಲಿ ಶಂಭೋಲಿಂಗಾ
Next post ಏನಿದು ಪೇಳು ಆತ್ಮಗೆ ಪರಮಾತ್ಮಗೆ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…