ಪಾಪ ರಹಿತ ಪರಮಾತ್ಮ ಸರ್ವೋತ್ತಮ

ಪಾಪ ರಹಿತ ಪರಮಾತ್ಮ ಸರ್ವೋತ್ತಮ
ತಾಪಸಂಹರ ಪರಾತ್ಪರಾ ||ಪ||

ನೋಡಿ ಏನು ಭಜಿಸಲಿ ನಾನು
ಕಾಡಿದರೆ ಸಿಗುವದು ಏನು
ರೂಢಿಗೈವನೇ ಕಾಲಕೂಟವಿಷ
ಕೇಡಿಗ ಶೇಷಾಭರಣ ||ಅ.ಪ.||

ಧನಿಕನೆಂದು ನಾನನ್ನುವೆನೆ
ಮನಕೆ ಸಂಶಯವು ಬರುತಲಿದೆ
ತಿರಿದುಣ್ಣುತ ನೀ ತಿರುಗುತಿಹೆ
ಪುಂಡನೆಂಬೆನೇ ಬಂಡುಮಾಡಿದಾ ಮಧ್ಯ
ಪಾಂಡವಾ ಮಲ್ಲಯುದ್ಧದಿ
ಕಂಡು ಕಂಡು ನಾನೆಂತು ಭಜಿಸಲಿ
ಕಂತುಹರನೆ ಗೌರಿಕಾಂತನೆ ||೧||

ಶಾಂತಮೂರ್ತಿ ನೀ ಎಂಬೆನೆ ನಾನು
ಭ್ರಾಂತಿಯಿಂದ ತ್ರಿಶೂಲವ ಪಿಡಿದೆ
ಉರಿಗಣ್ಣು ಉರಿಹಸ್ತ ಹಿರಿಯ ದೇವರೊಳು
ನಿರುತ ಬೇಡಿ ಕಾಡುತಿಹುದು ಖೋಡಿ ಮನ ||೨||

ವಾಹನ ಬೇಡಲು ಮತ್ತೇನು
ಆದಿ ಅನಾದಿ ಮುದಿಎತ್ತು ತಾನು
ಆವ ಆಶೆಯಿರುವದು ಇನ್ನು
ದೇವ ಭವದ ಪಾಶಹರಿ ನೀನು
ಕಾವ ಕರುಣಿ ಶಿಶುನಾಳಧೀಶ
ಮುಕ್ತಿಯೊಂದು ಕೊಡು ಪರಮೇಶ ||೩||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನೆ ಅನಾದಿ ನಾನೇನು ಬೇಡಲಿ ಶಂಭೋಲಿಂಗಾ
Next post ಏನಿದು ಪೇಳು ಆತ್ಮಗೆ ಪರಮಾತ್ಮಗೆ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…