ನೀಲಿ ಹೂಗಳ ಹಾದಿಯಲಿ

ಇಡೀ ರಾತ್ರಿ ಎದ್ದು ಕೂಡುತ್ತೇನೆ
ಬಿದ್ದ ಕೆಟ್ಟ ಕನಸಿನ ಅಬ್ಬರಕೆ.
ಮನದ ಎಲ್ಲಾ ಚಿತ್ರಗಳನ್ನು ಅಳುಕಿಸಿದರೂ
ಎದ್ದು ಬಂದು ನಿಲ್ಲುತ್ತದೆ ನಿನ್ನ ಮುಖ
ಕನ್ನಡಿ ಚೂರುಗಳಾಗಿವೆ ಮನದ ಮಾತುಗಳು.

ಹೂವಕಂಪ ನೆರಳಿಗೆ ಹಾಯ್ದು ಚಿಟ್ಟೆಯ
ರೆಕ್ಕೆಯಲ್ಲಿ ಕೆಂಪುರಕ್ತ ದುಃಖ ಬಿಕ್ಕುಗಳ
ಮಡಿಲಲ್ಲಿ ಒಂಟಿ ಹಕ್ಕಿ ರೆಪ್ಪೆ ಮುಚ್ಚಿದ
ಕಣ್ಣುಗಳು ಬೆಳಕು ಹರಿಯಲಿಲ್ಲ
ನೀಲಿ ಕಡಲಿನಲಿ ತೇಲುವ ಒಂಟಿ ದೋಣಿ.

ಉಪ್ಪುನೀರು ಅಂಗಳದಲಿ ಹರಳುಗಟ್ಟಿ
ಸೇವಂತಿಗೆ ಚಿಗುರಲಿಲ್ಲ ಹೂ ಬಿಡಲು
ಮೋಡದ ದಟ್ಟಕಪ್ಪು ಕಣ್ ಕಾಡಿಗೆ ಅಳುಕಿಸಿದೆ
ಸವರಿದ ಗಾಯ ಮಾಯದ ಉರಿ
ಬಾಯಾರಿದ ಸಾಲುಗಳು ಇಂಗಿವೆ ನದಿಯಲಿ.

ಗಿಡದಲಿ ಚಿಗುರಿದ ಹಸಿರು ಇಳಿದು
ಒಡಲಲಿ ಅರಳು ಕಾದು ಕುಳಿತ
ಚಿಟ್ಟೆ ಹೂವು ಬಟ್ಟಲು ಕಣ್ಣುಗಳ ಹೀರುನೋಟ
ನೆಲದ ಕಂಪ ಹೀರಿ ಎದೆಗೆ ಹಾಲು ಕರೆದು
ಕಾಯುತ್ತ ನಿಂತ ಕ್ಷಣ ಬಣ್ಣದ ಹೂಗಳ ಅರಳಿಸಲು.

ಕಲ್ಲರಳಿದ ಹೂವ ಮೊಗೆದ ಬೊಗಸೆ
ಕಡಲತುಂಬ ತುಂಬಿದ ಸೋನೆ ಹನಿ
ಕನಸುಗಳ ನೂರು ಗಾವುದ ನಡೆದ
ಹೆಜ್ಜೆ ಭಾರಗಳು ಒಜ್ಜೆ ಭಾವಗಳು
ಹಗುರ ಹಾಡಾಗಲಿ ನೀ ಬರುವ ನೀಲಿ ಹೂಗಳ ಹಾದಿಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನಿಸಿಕೆ
Next post ಮಿಂಚು

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys