ಮುಳ್ಳುಗಳು ಹೂವಾಗಿ ಅರಳಬೇಕು

ಓ ನೋಡು ಮಾನವತೆ ನೀ ಕಾಣು ದಾನವತೆ
ಕಣ್ದೋರು ಕರುಣೆಯಿಂ ವಿಜಯೇಶನೆ
ಕೊನೆಯಿಲ್ಲವೇ ತಂದೆ ಕತ್ತಲೆಯ ಕಾಳಕ್ಕೆ
ತಾಳ ತಪ್ಪಿದೆಯಯ್ಯ ಸೂತ್ರಧರನೆ

ಪ್ರೇಮದಿಂ ನೀ ತಾಯಿ ಯೋಗದಿಂ ನೀ ತಂದಿ
ತೂಗು ತೊಟ್ಟಿಲದಲ್ಲಿ ತುಂಬಿ ತೂಗೈ
ಸಾಕು ಬಿಸಿಲಿನ ಹಲಿಗೆ ಬೇಕು ಜೋಗುಳ ಸಲಿಗೆ
ಆತ್ಮ ಜ್ಞಾನದ ಶಿಖರ ಏರಬೇಕೈ

ಪ್ರೀತಿಯೇ ಸಿದ್ಧಾಂತ ರೀತಿಯೇ ಆಧ್ಯಾತ್ಮ
ಶಾಂತಿಯೇ ಶಿವಧರ್ಮ ಸತ್ಯಧರ್ಮ
ದೇಹ ಧರ್ಮವೆ ವರ್ಣ ಸ್ವೈರ ಕರ್ಮವೇ ವರ್ಗ
ಕಾರ್ಮೋಡ ಕರ್ಬೊಗೆಯೆ ವಿಶ್ವಚೂರ್ಣ

ಕಬ್ಬಿಣವೆ ಕಲಿಯುಗವು ಶಿವಯುಗವೆ ಬಂಗಾರ
ಮುಳ್ಳುಗಳು ಹೂವಾಗಿ ಅರಳಬೇಕು
ಹೊಸಯುಗದ ಶಂಕರನೆ ಓ ವಿಜಯ ಝೇಂಕರನೆ
ಝೇಂಕರಿಸು ಠೇಂಕರಿಸು ಠೀವಿಯಿಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂದೂಕು
Next post ಮುಖಗಳು

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…