ದುರ್ದೈವಿ

ಮಾಮರದ ತೋಪಿನಲಿ
ಚೆಂದಿರನ ಬೆಳಕಿನಲಿ
ಕೊಳದ ಸೋಪಾನದಲಿ
ಕುಳಿತಿರುವಳಿವಳಾರು?

ನೀರಿನಂಚಿಗೆ ಸರಿದು
ತೊಯ್ಸಿಹಳು ನಿರಿಗಳನು
ಕಾಲ್ಗಳನು ಚಾಚುವಳು
ಮುದುರುವಳು ಕ್ಷಣಕೊಮ್ಮೆ

ಉಬ್ಬಿಹುದು ಇವಳೆದುಯು
ನಿಟ್ಟುಸಿರ ಬಿಡುತಿಹಳು
ಜೀವದಾಶೆಯ ತೊರೆದು
ಕುಳಿತಿಹಳು ತನುಗಾತ್ರಿ

ದಾರಿಗರ ಅರಿವಿಲ್ಲ
ಪ್ರಾಣಿಗಳ ಭಯವಿಲ್ಲ
ಗಂಗೆಯನು ದಿಟ್ಟಿಸುತ
ಉಸಿರುತಿಹಳೇನನೋ

ಯೌವನದ ಶೋಭೆಯಲಿ
ತುಂಬಿ ತುಳುಕುವ ಮುಖವು
ಕಳೆಗುಂದಿ ಬಾಡಿಹುದು
ಕಂಬನಿಯ ತರುತಿಹಳು

ಜಗದ ಸುಖವನು ಬಿಟ್ಟು
ಬಂದಿಹಳು ದುರ್ದೈವಿ
ಏನಿಹುದೊ ಮನದಿಚ್ಛೆ
ಯಾರೇನು ಮಾಡಿದರೊ

ನಿಷ್ಕಳಂಕದ ಪ್ರೇಮ
ಸ್ಪೂರ್ತಿಯಲಿ ಬಂಧಿಸುತ
ಅಧರವನು ಚುಂಬಿಸುವ
ಗೆಳೆಯನೇನಾದನೋ

ತಾಳಲಾರೆವು ಹಸಿವ
ಏನ ಕೊಡುವೆಯೆ ಅಮ್ಮ
ಎನುತ ಪೀಡಿಸಿ ಸುಳಿವ
ಮಕ್ಕಳೇನಾದರೋ

ಜಗಕೆ ಒಡೆಯನು ಪರಮ
ಕರುಣಮೂರ್ತಿಯು ಎಂದು
ಜನರು ಹೊಗಳುತಲಿರುವ
ದೇವ ತಾನೆಲ್ಲಿಹನೊ

ಶೂನ್ಯ ಹೃದಯಳು ಇನ್ನು
ಮುಳುಗುವಳು ಕ್ಷಣದೊಳಗೆ
ಕಂಗಳನು ಮುಚ್ಚಿದಳು
ಎಚ್ಚರವ ತಪ್ಪಿದಳು

ಕಾಲಚಕ್ರವ ನೆಗೆದು
ಸ್ಥೂಲಕಾಯವ ಬಿಟ್ಟು
ಯಾರು ಅರಿಯದ ಸ್ಥಳಕೆ
ಹೊರಡುತಿದೆ ಇವಳಾತ್ಮ

ಹೋಗಿ ಬದಿಯಲಿ ಕುಳಿತು
ಮೈದಡವಿ ಕಣ್ಣೊರಸಿ
ಏಳು ತಂಗೀ ಎಂದು
ಸಂತೈಸಿ ಕರೆಯಲೇ?

ಪೋಗು! ನೀನಾರಿಲ್ಲಿ
ಬಂದುದೇತಕೆ? ಎಂದು
ಕ್ರೂರ ದೃಷ್ಟಿಯೊಳೆನ್ನ
ನೋಡಿಬಿಡುವಳೊ ಏನೊ!

ಆಗುವುದು ನಿಲ್ಲದದು
ಆಗದಿಹುದಾಗದದು
ಹೀಗೆಂದು ಜನಕಜೆಯು
ಸಾಗಿದಳು ಮುಂದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚುಟುಕುಗಳು
Next post ಮೊಸಳೆ ಕಣ್ಣೀರು

ಸಣ್ಣ ಕತೆ

  • ಮೇಷ್ಟ್ರು ವೆಂಕಟಸುಬ್ಬಯ್ಯ

    ಪ್ರಕರಣ ೧೨ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…