ಎಲ್ಲ ದಾರಿಗೊಂದೆ ಗುರಿ

ಎಲ್ಲ ದಾರಿಗೊಂದೆ ಗುರಿ
ಬಿಡುಗಡೆ
ಸೃಷ್ಟಿನಿಯಮದಲ್ಲಿ ಇಲ್ಲ ನಿಲುಗಡೆ

ನೀಲಿಯಾಕಾಶದಿಂದ
ಹೂಬಿಸಿಲಿಗೆ ಬಿಡುಗಡೆ
ತೂಗುತಿರುವ ಮೋಡದಿಂದ
ನೀರ ಸೆರೆಗೆ ಬಿಡುಗಡೆ
ಹಗಲು ತೀರಿ ಇರುಳಿಗೆ
ಇರುಳು ದಾಟಿ ಹಗಲಿಗೆ
ಸರದಿ ಮುಗಿದು ಸೆರೆಯು ಹರಿದು
ಬರುತಲೆ ಇದೆ ಬಿಡುಗಡೆ

ಮಣ್ಣ ಸೀಳಿ ಮೇಲೇಳುವ
ಬೀಜದಾ ಮೊಳಕೆಗೆ,
ಬಳ್ಳಿಯಾಗಿ ವೃಕ್ಷವಾಗಿ
ಹಬ್ಬುವಾ ಥಳುಕಿಗೆ,
ಹೂವು ಅರಳಿ ಕಾಯಿಗೆ
ಕಾಯಿ ಹೊರಳಿ ಹಣ್ಣಿಗೆ
ಹಣ್ಣೊಳಗಿನ ಬೀಜ ಚಿಮ್ಮಿ
ಮತ್ತೆ ತವರುಮಣ್ಣಿಗೆ.

ಅಜ್ಞಾನದ ನಿದ್ದೆ ಹರಿದು ವಿದ್ಯೆಗೆ
ದಾರಿದ್ರ್ಯದ ದೈನ್ಯ ತೀರಿ ವೃದ್ಧಿಗೆ
ಕೋಪದಿಂದ ತಾಪದಿಂದ ಶುದ್ಧಿಗೆ
ಬೆಳಕು ಹರಿದು ಕೊನೆಯಾಗಲಿ ನಿದ್ದೆಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರಂತರು ಹೇಳಿದ್ದು
Next post ಕೆಣಕದಿರಿ ಕವಿಯ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…