ಎಲ್ಲ ದಾರಿಗೊಂದೆ ಗುರಿ

ಎಲ್ಲ ದಾರಿಗೊಂದೆ ಗುರಿ
ಬಿಡುಗಡೆ
ಸೃಷ್ಟಿನಿಯಮದಲ್ಲಿ ಇಲ್ಲ ನಿಲುಗಡೆ

ನೀಲಿಯಾಕಾಶದಿಂದ
ಹೂಬಿಸಿಲಿಗೆ ಬಿಡುಗಡೆ
ತೂಗುತಿರುವ ಮೋಡದಿಂದ
ನೀರ ಸೆರೆಗೆ ಬಿಡುಗಡೆ
ಹಗಲು ತೀರಿ ಇರುಳಿಗೆ
ಇರುಳು ದಾಟಿ ಹಗಲಿಗೆ
ಸರದಿ ಮುಗಿದು ಸೆರೆಯು ಹರಿದು
ಬರುತಲೆ ಇದೆ ಬಿಡುಗಡೆ

ಮಣ್ಣ ಸೀಳಿ ಮೇಲೇಳುವ
ಬೀಜದಾ ಮೊಳಕೆಗೆ,
ಬಳ್ಳಿಯಾಗಿ ವೃಕ್ಷವಾಗಿ
ಹಬ್ಬುವಾ ಥಳುಕಿಗೆ,
ಹೂವು ಅರಳಿ ಕಾಯಿಗೆ
ಕಾಯಿ ಹೊರಳಿ ಹಣ್ಣಿಗೆ
ಹಣ್ಣೊಳಗಿನ ಬೀಜ ಚಿಮ್ಮಿ
ಮತ್ತೆ ತವರುಮಣ್ಣಿಗೆ.

ಅಜ್ಞಾನದ ನಿದ್ದೆ ಹರಿದು ವಿದ್ಯೆಗೆ
ದಾರಿದ್ರ್ಯದ ದೈನ್ಯ ತೀರಿ ವೃದ್ಧಿಗೆ
ಕೋಪದಿಂದ ತಾಪದಿಂದ ಶುದ್ಧಿಗೆ
ಬೆಳಕು ಹರಿದು ಕೊನೆಯಾಗಲಿ ನಿದ್ದೆಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರಂತರು ಹೇಳಿದ್ದು
Next post ಕೆಣಕದಿರಿ ಕವಿಯ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys