Home / ಕವನ / ಕವಿತೆ / ತಗಣಿಗಳೊಡನೆ ಮಹಾಯುದ್ಧ

ತಗಣಿಗಳೊಡನೆ ಮಹಾಯುದ್ಧ

ವೀರರೆಂಬವರಾರು ? ಶೂರರಿರುವವರಾರು ?
ಬನ್ನಿರೋ ಬಹು ಬೇಗ, ತನ್ನಿರೋ ನಿಮ್ಮ ಮಹಾಬಲವ
ಬಂದಿಹುದು ಮಹಾಯುದ್ಧದ ಮಹಾ ಉಸಿರು
ನೋಡ ನಿಂತಿಹರು ಸುರಗಣವೂ ನಿಮ್ಮ ರಣ ಛಲವ

ಮನೆ ಮನೆಗೂ ಮನ ಮನಗೂ ಹಾಹಾಕಾರ
ತಡೆಯದೇ ಬಿಡದೇಳಿ, ನಿಮ್ಮೆಲ್ಲ ಶೌರ್ಯ ತಾಳಿ
ಹೊಸೆದು ಹುರಿಮಾಡಿ ನಿಮ್ಮ ಮೀಸೆಯಾಕಾರ
ಖಡ್ಗ ಖಠಾರಿ ಢಾಲುಗಳೊಡನೆ ಮುಗಿಬೀಳಿ

ಸೊಡ್ಡು ಹೊಡೆಯಿರಿ ನೀವು ಕಾಳಗದ ಇದಿರು
ಮಿಂಚುವಾ ಖಡ್ಗದೊಡನೆ ಮಿಂಚು ನೀವಾಗಿ
ನಿಮ್ಮ ವೈರಿಗಳದೋ ಅಲ್ಲಿ ಅಡಗಿ ನಿಂತಿಹರು
ಕಾದಿಹರು ಕಾಳಗಕೆ; ಇರಿದು ಕೊಲ್ಲಿರಿ ರೇಗಿ

ಬಲುಜೋಕೆ; ಸಿಗರವರು ಬಹು ಬೇಗ
ಕಡಿದಾರು, ರಕ್ತ ಕುಡಿದಾರು! ಬಿಡಬೇಡಿರವರ
ನಿಲುವಿಗೆ ಕಿರಿದಾದರೂ ನಿಲುಕದಾ ವೇಗ
ಮೈಮರೆಯದೇ ಮುನ್ನುಗ್ಗಿ; ಹಿಡಿಯಲವರ

ಹಗಲು ದಾಳಿಗರಲ್ಲ; ರಾತ್ರಿವೀರರವರು
ನಿದ್ರಿಸದಿರಿ, ನುಸುಳಿ ಬಂದಾರು; ಬಿಡದೆ ಕಾಡ್ಯಾರು
ನಿಮ್ಮ ಮೇಲೇರಿ ಬರಬಹುದು ಅವರು
ಆಯಾಸ ಆಲಸ್ಯ ಆತುರವ ತಡೆಯಿರಿ ನೀವೆಲ್ಲರು

ಮನೆ ಮನೆಯ ನುಗ್ಯಾರು; ಬೀಡಾರ ಹಾಕ್ಯಾರು
ಗುಡಿಲು ಗುಂಡಾರ ಏನು; ಅರಮನೆ ಏನು
ಎಲ್ಲೆಡೆಗು ಹೊಕ್ಕಾರು; ಸುತ್ತೆಲ್ಲ ಮುತ್ಯಾರು
ಲೆಕ್ಕಿಸದೆ ಜನರ ನೋವು ದಣಿವುಗಳನು

ರಕ್ತ ಹೀರಿ ಕೆಂಪೇರಿದ ಜೀರಿಗೆ ಮುಖದವರು
ಏನವರ ಒನಪು ಒಯಾರ; ಸುತ್ತೆಲ್ಲ ಜೈಸ್ಯಾರ
ವಿಷಮದ್ದಿಗೂ ಸೋಲದ ರಿಪು ತಂಡದವರು
ಇವರ ಸಂಹಾರವರಿಯದ ನಮಗೆಲ್ಲ ಧಿಕ್ಕಾರ !
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...