Home / ಕವನ / ಕವಿತೆ / ತಗಣಿಗಳೊಡನೆ ಮಹಾಯುದ್ಧ

ತಗಣಿಗಳೊಡನೆ ಮಹಾಯುದ್ಧ

ವೀರರೆಂಬವರಾರು ? ಶೂರರಿರುವವರಾರು ?
ಬನ್ನಿರೋ ಬಹು ಬೇಗ, ತನ್ನಿರೋ ನಿಮ್ಮ ಮಹಾಬಲವ
ಬಂದಿಹುದು ಮಹಾಯುದ್ಧದ ಮಹಾ ಉಸಿರು
ನೋಡ ನಿಂತಿಹರು ಸುರಗಣವೂ ನಿಮ್ಮ ರಣ ಛಲವ

ಮನೆ ಮನೆಗೂ ಮನ ಮನಗೂ ಹಾಹಾಕಾರ
ತಡೆಯದೇ ಬಿಡದೇಳಿ, ನಿಮ್ಮೆಲ್ಲ ಶೌರ್ಯ ತಾಳಿ
ಹೊಸೆದು ಹುರಿಮಾಡಿ ನಿಮ್ಮ ಮೀಸೆಯಾಕಾರ
ಖಡ್ಗ ಖಠಾರಿ ಢಾಲುಗಳೊಡನೆ ಮುಗಿಬೀಳಿ

ಸೊಡ್ಡು ಹೊಡೆಯಿರಿ ನೀವು ಕಾಳಗದ ಇದಿರು
ಮಿಂಚುವಾ ಖಡ್ಗದೊಡನೆ ಮಿಂಚು ನೀವಾಗಿ
ನಿಮ್ಮ ವೈರಿಗಳದೋ ಅಲ್ಲಿ ಅಡಗಿ ನಿಂತಿಹರು
ಕಾದಿಹರು ಕಾಳಗಕೆ; ಇರಿದು ಕೊಲ್ಲಿರಿ ರೇಗಿ

ಬಲುಜೋಕೆ; ಸಿಗರವರು ಬಹು ಬೇಗ
ಕಡಿದಾರು, ರಕ್ತ ಕುಡಿದಾರು! ಬಿಡಬೇಡಿರವರ
ನಿಲುವಿಗೆ ಕಿರಿದಾದರೂ ನಿಲುಕದಾ ವೇಗ
ಮೈಮರೆಯದೇ ಮುನ್ನುಗ್ಗಿ; ಹಿಡಿಯಲವರ

ಹಗಲು ದಾಳಿಗರಲ್ಲ; ರಾತ್ರಿವೀರರವರು
ನಿದ್ರಿಸದಿರಿ, ನುಸುಳಿ ಬಂದಾರು; ಬಿಡದೆ ಕಾಡ್ಯಾರು
ನಿಮ್ಮ ಮೇಲೇರಿ ಬರಬಹುದು ಅವರು
ಆಯಾಸ ಆಲಸ್ಯ ಆತುರವ ತಡೆಯಿರಿ ನೀವೆಲ್ಲರು

ಮನೆ ಮನೆಯ ನುಗ್ಯಾರು; ಬೀಡಾರ ಹಾಕ್ಯಾರು
ಗುಡಿಲು ಗುಂಡಾರ ಏನು; ಅರಮನೆ ಏನು
ಎಲ್ಲೆಡೆಗು ಹೊಕ್ಕಾರು; ಸುತ್ತೆಲ್ಲ ಮುತ್ಯಾರು
ಲೆಕ್ಕಿಸದೆ ಜನರ ನೋವು ದಣಿವುಗಳನು

ರಕ್ತ ಹೀರಿ ಕೆಂಪೇರಿದ ಜೀರಿಗೆ ಮುಖದವರು
ಏನವರ ಒನಪು ಒಯಾರ; ಸುತ್ತೆಲ್ಲ ಜೈಸ್ಯಾರ
ವಿಷಮದ್ದಿಗೂ ಸೋಲದ ರಿಪು ತಂಡದವರು
ಇವರ ಸಂಹಾರವರಿಯದ ನಮಗೆಲ್ಲ ಧಿಕ್ಕಾರ !
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್