Home / ಕವನ / ಕವಿತೆ / ಪ್ರೀತಿ ಎಂದೂ ಮುಗಿಯುವದಿಲ್ಲ

ಪ್ರೀತಿ ಎಂದೂ ಮುಗಿಯುವದಿಲ್ಲ

ಅಲ್ಲಿ ಗುಹೆ ಅಂತಹ ಕತ್ತಲು
ಒಂಟಿಯಾಗಿ ಕುಳಿತಿದ್ದಾನೆ ಅವನು
ಏನೇನೋ ಯೋಚನೆಗಳು ಹೆದರಿಕೆಗಳು
ಈ ಬದುಕು ಕಟ್ಟಿಕೊಟ್ಟ ಬುತ್ತಿ ಖಾಲಿ
ಆಗಾಗ ಬರುವ ಚಳಿ ಮಳೆಗೆ ಮುದುರಿ
ಚುಚ್ಚುವ ಕಂಬಳಿ ಹೊದ್ದಿದ್ದಾನೆ ಒಬ್ಬನೇ.

ಊರಿಗೆ ಹೋಗುವ ಗಾಡಿ ಕಾಯುತ್ತ
ಕುಳಿತಿದ್ದಾನೆ ದಿಗಿಲು ಸುಮ್ಮನೆ
ಕಣ್ಣು ಮುಚ್ಚಿ ಕುಳಿತು ಏರುವ
ಗಾಡಿಯ ಸದ್ದಿಗೆ ಕಿವಿ ಆಲಿಸಿದ್ದಾನೆ
ಮಗಳು ಓಡಿ ಹೋಗಿದ್ದಾಳೆ
ಮಗ ಅಡ್ಡದಾರಿಯಲ್ಲಿ ನಡೆದಿದ್ದಾನೆ.
ಯಾವ ಕನವರಿಕೆಗಳೂ ದಕ್ಕುವದಿಲ್ಲ ಅವನಿಗೆ.

ನೀವೇಕೆ ಒಮ್ಮೆ ಅವನನ್ನು ಮಾತನಾಡಿಸಬಾರದು
ನಿಮ್ಮ ಮನೆಯ ಕಿಟಕಿಗಳಲಿ ಗಾಳಿ ಉಸಿರಾಡುತ್ತಿದೆ.
ಅಂಗಳದ ತುಂಬ ರಂಗೋಲಿ ಅರಳುತ್ತದೆ.
ನಿರಾಳವಾದ ಪ್ರೀತಿಯು ಎದೆಗೆ ಅಮರುತ್ತದೆ.
ಒಂದು ಮನಸ್ಸು ಇದೆ ತಬ್ಬಲಿ ಹಾಗೂ
ಎಲ್ಲಾ ರಹಸ್ಯಗಳು ಒಗಟುಗಳು ಬದಲಾಗುತ್ತವೆ
ಒಮ್ಮೆ ಅತಿಥಿಯಾಗಿ ಬಾ ಎದೆಯ ಒಳಗೆ ಎಂದು.

ಆತ ಸುಮ್ಮನಿದ್ದಾಗ ನೀವು ಮಾತನಾಡುತ್ತೀರಿ
ನೀವು ಸುಮ್ಮನಾದಾಗ ಆತ ಮಾತನಾಡುತ್ತಾನೆ
ಮಲಗಿದ ಹಳಿಗುಂಟ ಗಾಡಿ ಬಂದು ಇಬ್ಬರನ್ನೂ
ಹೊತ್ತೊಯ್ಯುತ್ತದೆ ಮತ್ತೊಂದು ಆಕಾಶದೆಡೆಗೆ
ಅಲ್ಲಿ ನಕ್ಷತ್ರಗಳ ಬೆಳಕಿನಲ್ಲಿ ಮುಖಗಳು ಅರಳುತ್ತವೆ
ಮನಸ್ಸು ಗುರುತ್ವಾಕರ್ಷಣೆಯ ಆಚೆ ಇದೆ
ಯಾಕೆಂದರೆ ಪ್ರೀತಿ ಎಂದಿಗೂ ಮುಗಿಯುವದಿಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...