Home / ಕವನ / ಕವಿತೆ / ಪ್ರೀತಿ ಎಂದೂ ಮುಗಿಯುವದಿಲ್ಲ

ಪ್ರೀತಿ ಎಂದೂ ಮುಗಿಯುವದಿಲ್ಲ

ಅಲ್ಲಿ ಗುಹೆ ಅಂತಹ ಕತ್ತಲು
ಒಂಟಿಯಾಗಿ ಕುಳಿತಿದ್ದಾನೆ ಅವನು
ಏನೇನೋ ಯೋಚನೆಗಳು ಹೆದರಿಕೆಗಳು
ಈ ಬದುಕು ಕಟ್ಟಿಕೊಟ್ಟ ಬುತ್ತಿ ಖಾಲಿ
ಆಗಾಗ ಬರುವ ಚಳಿ ಮಳೆಗೆ ಮುದುರಿ
ಚುಚ್ಚುವ ಕಂಬಳಿ ಹೊದ್ದಿದ್ದಾನೆ ಒಬ್ಬನೇ.

ಊರಿಗೆ ಹೋಗುವ ಗಾಡಿ ಕಾಯುತ್ತ
ಕುಳಿತಿದ್ದಾನೆ ದಿಗಿಲು ಸುಮ್ಮನೆ
ಕಣ್ಣು ಮುಚ್ಚಿ ಕುಳಿತು ಏರುವ
ಗಾಡಿಯ ಸದ್ದಿಗೆ ಕಿವಿ ಆಲಿಸಿದ್ದಾನೆ
ಮಗಳು ಓಡಿ ಹೋಗಿದ್ದಾಳೆ
ಮಗ ಅಡ್ಡದಾರಿಯಲ್ಲಿ ನಡೆದಿದ್ದಾನೆ.
ಯಾವ ಕನವರಿಕೆಗಳೂ ದಕ್ಕುವದಿಲ್ಲ ಅವನಿಗೆ.

ನೀವೇಕೆ ಒಮ್ಮೆ ಅವನನ್ನು ಮಾತನಾಡಿಸಬಾರದು
ನಿಮ್ಮ ಮನೆಯ ಕಿಟಕಿಗಳಲಿ ಗಾಳಿ ಉಸಿರಾಡುತ್ತಿದೆ.
ಅಂಗಳದ ತುಂಬ ರಂಗೋಲಿ ಅರಳುತ್ತದೆ.
ನಿರಾಳವಾದ ಪ್ರೀತಿಯು ಎದೆಗೆ ಅಮರುತ್ತದೆ.
ಒಂದು ಮನಸ್ಸು ಇದೆ ತಬ್ಬಲಿ ಹಾಗೂ
ಎಲ್ಲಾ ರಹಸ್ಯಗಳು ಒಗಟುಗಳು ಬದಲಾಗುತ್ತವೆ
ಒಮ್ಮೆ ಅತಿಥಿಯಾಗಿ ಬಾ ಎದೆಯ ಒಳಗೆ ಎಂದು.

ಆತ ಸುಮ್ಮನಿದ್ದಾಗ ನೀವು ಮಾತನಾಡುತ್ತೀರಿ
ನೀವು ಸುಮ್ಮನಾದಾಗ ಆತ ಮಾತನಾಡುತ್ತಾನೆ
ಮಲಗಿದ ಹಳಿಗುಂಟ ಗಾಡಿ ಬಂದು ಇಬ್ಬರನ್ನೂ
ಹೊತ್ತೊಯ್ಯುತ್ತದೆ ಮತ್ತೊಂದು ಆಕಾಶದೆಡೆಗೆ
ಅಲ್ಲಿ ನಕ್ಷತ್ರಗಳ ಬೆಳಕಿನಲ್ಲಿ ಮುಖಗಳು ಅರಳುತ್ತವೆ
ಮನಸ್ಸು ಗುರುತ್ವಾಕರ್ಷಣೆಯ ಆಚೆ ಇದೆ
ಯಾಕೆಂದರೆ ಪ್ರೀತಿ ಎಂದಿಗೂ ಮುಗಿಯುವದಿಲ್ಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...