Home / ಕವನ / ಕವಿತೆ / ಪ್ರೀತಿ ಎಂದೂ ಮುಗಿಯುವದಿಲ್ಲ

ಪ್ರೀತಿ ಎಂದೂ ಮುಗಿಯುವದಿಲ್ಲ

ಅಲ್ಲಿ ಗುಹೆ ಅಂತಹ ಕತ್ತಲು
ಒಂಟಿಯಾಗಿ ಕುಳಿತಿದ್ದಾನೆ ಅವನು
ಏನೇನೋ ಯೋಚನೆಗಳು ಹೆದರಿಕೆಗಳು
ಈ ಬದುಕು ಕಟ್ಟಿಕೊಟ್ಟ ಬುತ್ತಿ ಖಾಲಿ
ಆಗಾಗ ಬರುವ ಚಳಿ ಮಳೆಗೆ ಮುದುರಿ
ಚುಚ್ಚುವ ಕಂಬಳಿ ಹೊದ್ದಿದ್ದಾನೆ ಒಬ್ಬನೇ.

ಊರಿಗೆ ಹೋಗುವ ಗಾಡಿ ಕಾಯುತ್ತ
ಕುಳಿತಿದ್ದಾನೆ ದಿಗಿಲು ಸುಮ್ಮನೆ
ಕಣ್ಣು ಮುಚ್ಚಿ ಕುಳಿತು ಏರುವ
ಗಾಡಿಯ ಸದ್ದಿಗೆ ಕಿವಿ ಆಲಿಸಿದ್ದಾನೆ
ಮಗಳು ಓಡಿ ಹೋಗಿದ್ದಾಳೆ
ಮಗ ಅಡ್ಡದಾರಿಯಲ್ಲಿ ನಡೆದಿದ್ದಾನೆ.
ಯಾವ ಕನವರಿಕೆಗಳೂ ದಕ್ಕುವದಿಲ್ಲ ಅವನಿಗೆ.

ನೀವೇಕೆ ಒಮ್ಮೆ ಅವನನ್ನು ಮಾತನಾಡಿಸಬಾರದು
ನಿಮ್ಮ ಮನೆಯ ಕಿಟಕಿಗಳಲಿ ಗಾಳಿ ಉಸಿರಾಡುತ್ತಿದೆ.
ಅಂಗಳದ ತುಂಬ ರಂಗೋಲಿ ಅರಳುತ್ತದೆ.
ನಿರಾಳವಾದ ಪ್ರೀತಿಯು ಎದೆಗೆ ಅಮರುತ್ತದೆ.
ಒಂದು ಮನಸ್ಸು ಇದೆ ತಬ್ಬಲಿ ಹಾಗೂ
ಎಲ್ಲಾ ರಹಸ್ಯಗಳು ಒಗಟುಗಳು ಬದಲಾಗುತ್ತವೆ
ಒಮ್ಮೆ ಅತಿಥಿಯಾಗಿ ಬಾ ಎದೆಯ ಒಳಗೆ ಎಂದು.

ಆತ ಸುಮ್ಮನಿದ್ದಾಗ ನೀವು ಮಾತನಾಡುತ್ತೀರಿ
ನೀವು ಸುಮ್ಮನಾದಾಗ ಆತ ಮಾತನಾಡುತ್ತಾನೆ
ಮಲಗಿದ ಹಳಿಗುಂಟ ಗಾಡಿ ಬಂದು ಇಬ್ಬರನ್ನೂ
ಹೊತ್ತೊಯ್ಯುತ್ತದೆ ಮತ್ತೊಂದು ಆಕಾಶದೆಡೆಗೆ
ಅಲ್ಲಿ ನಕ್ಷತ್ರಗಳ ಬೆಳಕಿನಲ್ಲಿ ಮುಖಗಳು ಅರಳುತ್ತವೆ
ಮನಸ್ಸು ಗುರುತ್ವಾಕರ್ಷಣೆಯ ಆಚೆ ಇದೆ
ಯಾಕೆಂದರೆ ಪ್ರೀತಿ ಎಂದಿಗೂ ಮುಗಿಯುವದಿಲ್ಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...