Home / ಕವನ / ಕವಿತೆ / ಪ್ರೀತಿ ಎಂದೂ ಮುಗಿಯುವದಿಲ್ಲ

ಪ್ರೀತಿ ಎಂದೂ ಮುಗಿಯುವದಿಲ್ಲ

ಅಲ್ಲಿ ಗುಹೆ ಅಂತಹ ಕತ್ತಲು
ಒಂಟಿಯಾಗಿ ಕುಳಿತಿದ್ದಾನೆ ಅವನು
ಏನೇನೋ ಯೋಚನೆಗಳು ಹೆದರಿಕೆಗಳು
ಈ ಬದುಕು ಕಟ್ಟಿಕೊಟ್ಟ ಬುತ್ತಿ ಖಾಲಿ
ಆಗಾಗ ಬರುವ ಚಳಿ ಮಳೆಗೆ ಮುದುರಿ
ಚುಚ್ಚುವ ಕಂಬಳಿ ಹೊದ್ದಿದ್ದಾನೆ ಒಬ್ಬನೇ.

ಊರಿಗೆ ಹೋಗುವ ಗಾಡಿ ಕಾಯುತ್ತ
ಕುಳಿತಿದ್ದಾನೆ ದಿಗಿಲು ಸುಮ್ಮನೆ
ಕಣ್ಣು ಮುಚ್ಚಿ ಕುಳಿತು ಏರುವ
ಗಾಡಿಯ ಸದ್ದಿಗೆ ಕಿವಿ ಆಲಿಸಿದ್ದಾನೆ
ಮಗಳು ಓಡಿ ಹೋಗಿದ್ದಾಳೆ
ಮಗ ಅಡ್ಡದಾರಿಯಲ್ಲಿ ನಡೆದಿದ್ದಾನೆ.
ಯಾವ ಕನವರಿಕೆಗಳೂ ದಕ್ಕುವದಿಲ್ಲ ಅವನಿಗೆ.

ನೀವೇಕೆ ಒಮ್ಮೆ ಅವನನ್ನು ಮಾತನಾಡಿಸಬಾರದು
ನಿಮ್ಮ ಮನೆಯ ಕಿಟಕಿಗಳಲಿ ಗಾಳಿ ಉಸಿರಾಡುತ್ತಿದೆ.
ಅಂಗಳದ ತುಂಬ ರಂಗೋಲಿ ಅರಳುತ್ತದೆ.
ನಿರಾಳವಾದ ಪ್ರೀತಿಯು ಎದೆಗೆ ಅಮರುತ್ತದೆ.
ಒಂದು ಮನಸ್ಸು ಇದೆ ತಬ್ಬಲಿ ಹಾಗೂ
ಎಲ್ಲಾ ರಹಸ್ಯಗಳು ಒಗಟುಗಳು ಬದಲಾಗುತ್ತವೆ
ಒಮ್ಮೆ ಅತಿಥಿಯಾಗಿ ಬಾ ಎದೆಯ ಒಳಗೆ ಎಂದು.

ಆತ ಸುಮ್ಮನಿದ್ದಾಗ ನೀವು ಮಾತನಾಡುತ್ತೀರಿ
ನೀವು ಸುಮ್ಮನಾದಾಗ ಆತ ಮಾತನಾಡುತ್ತಾನೆ
ಮಲಗಿದ ಹಳಿಗುಂಟ ಗಾಡಿ ಬಂದು ಇಬ್ಬರನ್ನೂ
ಹೊತ್ತೊಯ್ಯುತ್ತದೆ ಮತ್ತೊಂದು ಆಕಾಶದೆಡೆಗೆ
ಅಲ್ಲಿ ನಕ್ಷತ್ರಗಳ ಬೆಳಕಿನಲ್ಲಿ ಮುಖಗಳು ಅರಳುತ್ತವೆ
ಮನಸ್ಸು ಗುರುತ್ವಾಕರ್ಷಣೆಯ ಆಚೆ ಇದೆ
ಯಾಕೆಂದರೆ ಪ್ರೀತಿ ಎಂದಿಗೂ ಮುಗಿಯುವದಿಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...