ಮೊದಲ ಮಳೆ

ಮೊದಲ ಮಳೆ ಬಂದಿಹುದು ಬೇಸಿಗೆಯೊಳಿಂದು
ಭುವಿ ಕಾದು ನಿಂದಿಹುದು ಬರುವುದೇ ಎಂದು
– ಕಾತರದಿ ಬೆಂದು

ಸಪ್ತ ರಾಗದ ದನಿಯ ಕೇಳಿದಂತೆ
ಸುಪ್ತ ಸ್ವರಗಳ ಮುತ್ತು ಚೆಲ್ಲಿದಂತೆ
ತಪ್ತ ಬಾಳುವೆಯೊಳಗ ಬೇಗೆಯನು ಅರಿತಂತೆ
ಸುತ್ತೆಲ್ಲ ಸೇರುತಿವೆ ಮೋಡ ಸಂತೆ,

ಕಾದಲರು ಕಾಣುವರು ನಗೆಗಣ್ಣಿನಿಂದ;
ಒಬ್ಬರೊಬ್ಬರ ಹೃದಯದೊಲವಿನಾನಂದ.
ಪೂರ್ವ ಗಾಳಿಯ ತಂಪು ಮೈದೋರಿ, ನಲವಿಂದ
ಎದೆಯ ಬೆಂಕಿಯು ಮೈಗೆ ನೀಡಿಹುದು ಬಂಧ!

ದೂರ ನೀಲದಲೇನೊ ಕೂಡಿ ನೀಲ,
ಮೂಡಿ ಬಂದಿತು ಹಿಂದೆ ಮೇಘಜಾಲ;
ಗುಡುಗು ಸಿಡಿಲಿನ ಮೊರೆತದೆದೆಯ ಕಲ್ಲೋಲ,
ನಡುವೆ ಮಿಂಚಿನ ಮಳೆಯ ಹನಿಗಳಾಲೋಲ!

ಹಸುರು ಹೂ ಚೆಲ್ವಿಕೆಯ ಹಸದ ನೀಡಿ,
ಕಲ್ಲೆದೆಗು ತಾಕಿಸುತ ಒಲವ ಮೋಡಿ,
ಎದೆ ತುಂಬಿ, ಕಾಲುವೆಯು ಮುಂದೆ ಮುಂದೂಡಿ
ಹಚ್ಚ ಬಾಳಿನ ಹಸದ ತರುತಿಹುದು ನೋಡಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೀರನ ಕನಸುಗಳ ಸುತ್ತ……
Next post ಪ್ರೀತಿ ಎಂದೂ ಮುಗಿಯುವದಿಲ್ಲ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys