ಪುಟ್ಟನ ಸಾಹಸ

ಪುಟ್ಟನು ಶಾಲೆಯಿಂದ
ಮನೆಗೆ ಓಡಿ ಬಂದ

ಪುಸ್ತಕದ ಚೀಲವನಿಟ್ಟು
ಹಿಡಿದನು ಕ್ರಿಕೆಟ್ಟು ಬ್ಯಾಟು
ಕಿಟ್ಟುವನ್ನು ಕೂಗಿ ಕರೆದ
ಮೈದಾನದ ಕಡೆಗೆ ನಡೆದ

ಮನದಣಿ ಆಟವನಾಡಿ
ಮತ್ತೆ ಇಬ್ಬರು ಜೊತೆಗೂಡಿ
ಬೀದಿಯಲ್ಲಿ ಬರುತಿರಲು
ಹರಡಿತ್ತು ನಸುಗತ್ತಲು

ಬೀದಿಯ ನಾಯಿಯೊಂದು
ಇವರನು ಕಚ್ಚಲಿಕೆಂದು
ಓಡಿ ಬಂದಿತು ಇವರತ್ತ
ಕಿಟ್ಟು ಅಲ್ಲಿಂದ ಕಂಬಿ ಕಿತ್ತ

ಮುಟ್ಟುಗೆ ಹೆದರಿಕೆಯಾಯ್ತು
ಹಂಚಿಕೆಯೊಂದು ಹೊಳೆಯಿತು
ಬೇಗನೆ ಶರ್ಟನು ಬಿಚ್ಚಿದನು
ಬಲಗೈಯಿಗೆ ಸುತ್ತಿಕೊಂಡನು

ಮಂಡೆಯೂರುತ ಕುಳಿತನು
ಬಲಗೈ ಬಾಯಿಗೆ ಕೊಟ್ಟನು
ಕಚ್ಚಲು ಆಗದ ನಾಯಿಯು
ಕಿಟ್ಟು ಬಿಟ್ಟು ಓಡೋಯ್ತು

ಪುಟ್ಟು ಬುದ್ಧಿಯ ನೋಡಿದ ಜನ
ಕೊಟ್ಟರು ಶಹಾಭಾಶ್‌ಗಿರಿಯನ್ನು
ಪುಟ್ಟ ಕಿಟ್ಟು ಹತ್ತಿರ ಬಂದನು
ಸಾರಿ ಕಿಟ್ಟು ಎಂದೆಂದನು

ಜೀವದ ಗೆಳೆಯ ನೀನಲ್ಲ
ನಿನ್ನ ಸಹವಾಸ ಬೇಕಿಲ್ಲ
ಕಿಟ್ಟು ಕೋಪದಿ ನುಡಿದನು
ತನ್ನ ಮನೆಯನ್ನು ಸೇರಿದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣಿನ ಒಲವು
Next post ಕರ್‍ನಾಟಕದ ಹೋರಾಟಗಳು ಮತ್ತು ಮುಸ್ಲಿಮರು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys