ಬೆಂಕಿಯ ಮೂಲ

ಉರಿಯುತ್ತಿದೆ ಬೆಂಕಿ
ಧಗಧಗ
ಕೆನ್ನಾಲಿಗೆಯ ಚಾಚಿ
ಭಗ ಭಗ
ಮುಗಿಲೆತ್ತರ ವ್ಯಾಪಿಸಿ
ಆಕ್ರಮಿಸುತ್ತಿದೆ ಉದ್ದಗಲ
ನೋಡಲೆಷ್ಟು ಚೆನ್ನ
ಸಪ್ತ ವರ್ಣಗಳ ನರ್ತನ
ಕಣ್ತುಂಬಿಸಿ ಮನ ತುಂಬಿಸಿ
ಆನಂದಿಸುವ ಪರಿ
ಕೇಕೆ ಹಾಕಿದ ಕೂಗಿಗೆ
ಮುಗಿಲಲ್ಲಿ ಪ್ರತಿಧ್ವನಿ
ಒಬ್ಬರಿಗಾದರೂ ಇಲ್ಲ ಬೆಂಕಿ
ಆರಿಸುವ ಎದೆಗಾರಿಕೆ.
ಉರಿವ ಬೆಂಕಿಗೆ ತುಪ್ಪ
ಸುರಿದು ಮೈ ಕಾಯಿಸುವ ಉನ್ಮಾದ
ಬೆಂಕಿ ಹತ್ತಿದಾದರೂ ಹೇಗೆ?
ಯಾರು ಹೊತ್ತಿಸಿದರೋ
ಯಾಕೆ ಹತ್ತಿಸಿದರೋ
ಅರಿಯುವುದಾದರೂ ಎಲ್ಲಿ?
ಋಷಿ ಮೂಲ, ನದಿ ಮೂಲ
ಬೆಂಕಿಯ ಮೂಲ
ಅರಿಯದಿರುವುದೇ ಜಾಣತನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಸುಮ್ಮನೆ ದುಃಖ
Next post ನಾನು ಹೂವು ಮಧುರ ಮಾವು

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys