ಭ್ರೂಣದ ಮಾತು

ಹುಟ್ಸೋದ್ಯಾಕೆ ಸಾಯ್ಸೋದ್ಯಾಕೆ
ನಮ್ಮಯ ತಪ್ಪಾದ್ರು ಏನು?
ಸ್ತ್ರೀಭ್ರೂಣವಾಗಿದ್ದೆ ತಪ್ಪೇನು??
ನಿಮ್ಮಯ ತೆವಲಿಗೆ ಆಡದ ಮಾತಿಗೆ
ನಮ್ಮಯ ಈ ಬಲಿ ಹಿತವೇನು?

ರೋಗಿಗಳನ್ನು ಉಳಿಸುತ್ತೀರಿ
ನಮ್ಮಯ ಸಾವಿಗೆ ಕಾಯುತ್ತೀರಿ
ಸಂಕಟಕೊ ಇಲ್ಲ ಸಂತಸಕೊ
ಕಡೆಗೆ ಕಂಬನಿ ಹರಿಸುತ್ತೀರಿ
ಅದನೂ ಕೊನೆಗೆ ಮರೆ ಮಾಡುವಿರಿ
ಮುಖವಿಲ್ಲದ ಮಾನವರಾಗುವಿರಿ!

ಕರುಳಿನ ಕುಡಿಗಳ ಸಾವಿಗೆ ಕಾಯುವ
ಮಂದಿಯ ಒಳಗೆ ಕರುಳುಂಟೆ?
ಕರುಳಿನ ನಂಟನು ಬಿಟ್ಟವರೊಂದಿಗೆ
ಕೊರಳಿದ್ದರೂ ಸಹ ಮಾತುಂಟೆ?
ಅನ್ಯಾಯದ ಈ ಜಗವನು ಕಾಣದ
ಪಾಪಾತ್ಮರೋ ನಾವು ಪುಣ್ಯಾತ್ಮರೋ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಿನಾರಿ
Next post ಬೀಳ್ಕೊಡುಗೆ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys